Breaking News
Home / Breaking News / ಎನಿ ಪ್ರಾಬಲಮ್…ಡೋಂಟ್ ವರೀ……ಉದ್ಯಮಿಗಳಿಗೆ ಅಭಯ ಹಸ್ತ

ಎನಿ ಪ್ರಾಬಲಮ್…ಡೋಂಟ್ ವರೀ……ಉದ್ಯಮಿಗಳಿಗೆ ಅಭಯ ಹಸ್ತ

ಬೆಳಗಾವಿ- ಬೆಳಗಾವಿಯ ಪ್ರಸಿದ್ದ ಉದ್ಯಮಬಾಗ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಇನ್ನಿತರ ಸವಲತ್ತುಗಳನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಶಾಸಕ ಅಭಯ ಪಾಟೀಲ ಮತ್ತು ಅನೀಲ ಬೆನಕೆ ಅವರು ಫೌಂಡ್ರಿ ಕ್ಲಸ್ಟರ್ ಭವನದಲ್ಲಿ ಸುಧೀರ್ಘ ಸಂವಾದ ನಡೆಸಿ ಉದ್ಯಮಿಗಳ ಸಮಸ್ಯೆಗಳನ್ನು ಆಲಿಸಿದರು

ಲಘು ಭಾರತೀಯ ಉದ್ಯೋಗ ವತಿಯಿಂದ ಈ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು ಸಭೆಯಲ್ಲಿ ಉದ್ಯಮಬಾಗ ಪ್ರದೇಶಕ್ಕೆ ಸಮರ್ಪಕ ವಿದ್ಯುತ್ ಪೂರೈಕೆ,ರಸ್ತೆಗಳ ದುರಸ್ಥಿ,,ಬೀದಿ ದೀಪಗಳ ಅಳವಡಿಕೆ,ಕುಡಿಯುವ ನೀರಿನ ಸಮರ್ಪಕ ಪೂರೈಕೆ ,ತೆರಿಗೆಯಲ್ಲಿ ರಿಯಾಯತಿ ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆಯಿತು

ಸಭೆಯಲ್ಲಿ ಉದ್ಯಮಿಗಳ ಸಮಸ್ಯೆ ಹಾಗೂ ಅವರ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಮಾತನಾಡಿದ ಶಾಸಕ ಅಭಯ ಪಾಟೀಲ ಕೇಂದ್ರ ಸರ್ಕಾರದ ಅಸೈಡ್ ಯೋಜನೆಯಡಿಯಲ್ಲಿ ಉದ್ಯಮಭಾಗದ ರಸ್ತೆಗಳನ್ನು ಸುಧಾರಿಸುವ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭ ಮಾಡುತ್ತೇವೆ ಉದ್ಯಮಿಗಳನ್ನು ಮಂಡಿಸಿದ ಎಲ್ಲ ಸಮಸ್ಯೆಗಳ ನಿವಾರಣೆಗಾಗಿ ಶೀಘ್ರದಲ್ಲೇ ಸಮಂಧಿಸಿದ ಅಧಿಕಾರಗಳ ಸಭೆಯನ್ನು ನಡೆಸುತ್ತೇವೆ ಸಭೆಗೆ ಉದ್ಯಮದ ಪ್ರತಿನಿಧಿಗಳನ್ನು ಅಹ್ವಾನಿಸುತ್ತೇವೆ ,ಕೇವಲ ಒಂದು ಬಾರಿ ಸಭೆ ನಡೆಸದೇ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಉದ್ಯಮಿಗಳ ಸಭೆ ನಡೆಸಿ ಸಮಸ್ಯೆಗಳನ್ನು ನಿರಂತರವಾಗಿ ಆಲಿಸಿ ಅದಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇವೆ ಎಂದು ಅಭಯ ಪಾಟೀಲ ಭರವಸೆ ನೀಡಿದರು

ಅಧಿವೇಶನದಲ್ಲಿ ಈಎಸ್ ಐ ಆಸ್ಪತ್ರೆಯ ಕುರಿತು ಪ್ರಶ್ನೆ ಮಾಡಿ ಸರ್ಕಾರದ ಗಮನ ಸೆಳೆದಿದ್ದೇನೆ ಕಾರ್ಮಿಕ ಸಚಿವರು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಆಸ್ಪತ್ರೆಯ ಶಿಪ್ಟಿಂಗ್ ಕಾರ್ಯ ಈಗಾಗಲೇ ಆರಂಭವಾಗಿದೆ ಉದ್ಯಮಭಾಗದ ವಿದ್ಯುತ್ ಸಮಸ್ಯೆಯನ್ನು ಶಾಸ್ವತವಾಗಿ ನಿವಾರಿಸಲು ಮಚ್ಛೆ ಗ್ರಾಮದಲ್ಲಿ 220 ಕೆವಿ ಸಾಮರ್ಥ್ಯದ ಸ್ಟೇಶನ್ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ ಇದು ಕೂಡಾ ಶೀಘ್ರದಲ್ಲೇ ಸಾಕಾರಗೊಳ್ಳಲಿದೆ ಎಂದು ಅಭಯ ಪಾಟೀಲ ಸಭೆಯಲ್ಲಿ ಮಾಹಿತಿ ನೀಡಿದರು

ಫೌಂಡ್ರಿ ಕ್ಲಸ್ಟರ್ ಅದ್ಯಕ್ಷ ರಾಮ ಭಂಡಾರಿ,ಲಘು ಭಾರತಿ ಉದ್ಯೋಗ ಅದ್ಯಕ್ಷ….ಹಾಗೂ ನೂರಾರು ಜನ ಉದ್ಯಮಿಗಳು ಸಂವಾದದಲ್ಲಿ ಭಾಗವಹಿಸಿದ್ದರು

Check Also

ಸಂಜಯ ಪಾಟೀಲ ವಿರುದ್ಧ ದೂರು ದಾಖಲು…

ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ; ಸಂಜಯ್ ಪಾಟೀಲ್ ವಿರುದ್ಧ ಪ್ರಕರಣ ದಾಖಲು ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ …

Leave a Reply

Your email address will not be published. Required fields are marked *