Breaking News
Home / Breaking News / ಗೊಂದಲದ ಗೂಡಾಗಲಿರುವ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ

ಗೊಂದಲದ ಗೂಡಾಗಲಿರುವ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ

ಬೆಳಗಾವಿ- ಇಂದು ಸೋಮವಾರ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆಯಲಿದ್ದು ಈ ಸಭೆ ಎಂಈಎಸ್ ಭಿನ್ನಮತದ ಸೇಡಿಗೆ ಆಹುತಿಯಾಗಲಿದೆ

ಇತ್ತೀಚಿಗೆ ನಡೆದ ಸ್ಥಾಯಿ ಸಮೀತಿಗಳ ಅಧ್ಯಕ್ಷರ ಚುನಾವಣೆಯಲ್ಲಿ ಎಂಈಎಸ್ ನಗರ ಸೇವಕರ ಒಂದು ಗುಂಪು ತಟಸ್ಥವಾಗಿ ಉಳಿದ ಪರಿಣಾಮ ಮೂರು ಸ್ಥಾಯಿ ಸಮೀತಿಗಳಿಗೆ ಕನ್ನಡ ನಗರಸೇವಕರೇ ಆಯ್ಕೆಯಾಗಿದ್ದರು ಈ ವಿಷಯವನ್ನೇ ಮುಂದಿಟ್ಟುಕೊಂಡು ಕೆಲವು ಎಂಈಎಸ್ ನಗರ ಸೇವಕರ ಎರಡು ಗುಂಪುಗಳು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗುವ ಸಾಧ್ಯತೆಗಳಿವೆ
ಜೊತೆಗೆ ಪಾಲಿಕೆ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ಭಾರತ ರತ್ನ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಮೇಯರ್ ಸಂಜೋತಾ ಬಾಂಧೇಕರ ಅವರಿಗೆ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ನೀಡದೇ ಶಾಸಕ ಫಿರೋಜ್ ಸೇಠ ಅವರಿಗೆ ಅಧ್ಯಕ್ಷ ಸ್ಥಾನ ನೀಡಿ ಪಾಲಿಕೆ ಅಧಿಕಾರಿಗಳು ಶಿಷ್ಟಾಚಾರವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಎಂಈಎಸ್ ನಾಯಕರು ಇಂದು ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಗದ್ದಲ ಮಾಡುವದರಲ್ಲಿ ಸಂದೇಹವೇ ಇಲ್ಲ
ನೀರಿನ ಕರ ಹೆಚ್ಚಳ, ಮತ್ತು ಆಸ್ತಿ ತೆರಿಗೆ ಹೆಚ್ಚಳದ ವಿಷಯಗಳು ಸಭೆಯ ಅಜೇಂಡಾದಲ್ಲಿವೆ ಹೀಗಾಗಿ ಆಸ್ತಿ ಕರ ಹೆಚ್ಚಳ ,ಮತ್ತು ನೀರಿನ ಕರ ಹೆಚ್ಚಳ ಮಾಡುವದನ್ನು ವಿರೋಧಿಸಿಸಿ ನಗರ ಸೇವಕರು ಸಭೆಯನ್ನು ಬೈಕಾಟ್ ಮಾಡುವ ಸಾಧ್ಯತೆಗಳಿವೆ

ಸಭೆಯಲ್ಲಿ ಮೊಳಗಲಿರುವ ನಾಡಗೀತೆ
ಜಿಲ್ಲಾಧಿಕಾರಿ ಎನ್ ಜಯರಾಮ ಅವರು ಸ್ಥಾಯಿ ಸಮೀತಿಗಳ ಚುನಾವಣೆಯ ಸಂಧರ್ಭದಲ್ಲಿ ಪಾಲಿಕೆ ಯ ಕೌನ್ಸೀಲ್ ಹಾಲ್ ನಲ್ಲಿ ಸಭೆಯ ಆರಂಭದಲ್ಲಿ ನಾಡಗೀತೆಯನ್ನು ನುಡಿಸಿ ಹೊಸ ಇತಿಹಾಸ ಮಾಡಿದ್ದರು
ಇಂದು ನಡೆಯುವ ಸಾಮಾನ್ಯ ಸಭೆಯ ಆರಂಭದಲ್ಲಿ ಮತ್ತೇ ನಾಡಗೀತೆ ಝೇಂಕರಿಸಲಿದೆ

Check Also

ಸಂಜಯ ಪಾಟೀಲ ವಿರುದ್ಧ ದೂರು ದಾಖಲು…

ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ; ಸಂಜಯ್ ಪಾಟೀಲ್ ವಿರುದ್ಧ ಪ್ರಕರಣ ದಾಖಲು ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ …

Leave a Reply

Your email address will not be published. Required fields are marked *