Breaking News
Home / Uncategorized / ಕೆನರಾ ಸಂಸದ ಹಗಡೆಗೆ ಘೇರಾವ್

ಕೆನರಾ ಸಂಸದ ಹಗಡೆಗೆ ಘೇರಾವ್

ಬೆಳಗಾವಿ:
ಕೆನರಾ ಸಂಸದ ಅನಂತಕುಮಾರ ಹೆಗಡೆ ಒಬ್ಬ ಒಳ್ಳೆಯ ಮಾತುಗಾರ. ಆದರೆ ಇವರು ಕೆಲಸಗಾರ ಅಲ್ಲ ಎನ್ನುವುದು ಇನ್ನೊಮ್ಮೆ ಸಾಬೀತಾಗಿದೆ. ಅಧಿಕಾರ ಇದ್ದಾಗ ಇಮಾಮ್ ಸಾಬ್ ಚುನಾವಣೆ ಬಂದಾಗ ಫಕೀರ ಸಾಬ್ ಎನ್ನುವಂತೆ ಚುನಾವಣೆ ಸಂದರ್ಭದಲ್ಲಿ ಮತದಾರರ ಕೈ ಮುಗಿದು ಮತ ಬುಟ್ಟಿಯನ್ನು ತುಂಬಿಕೊಂಡು ಹೋಗಿದ್ದ ಇವರು ಕ್ಷೇತ್ರದ ಜನರ ಕಡೆ ಸುಳಿದಿರಲಿಲ್ಲ.
ಭಾನುವಾರ ಸಂಸದ ಅನಂತಕುಮಾರ ಹೆಗಡೆ ಸುದೀರ್ಘ ಅವಧಿ ಬಳಿಕ ಕ್ಷೇತ್ರದ ಜನರ ಮುಖ ನೋಡಲು ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಅವರ ಕಾರಿಗೆ ಘೇರಾವ್ ಹಾಕಿದ ರೈತರು ಸಂಸದರಿಗೆ ಪ್ರಶ್ನೆಗಳ ಸುರಿಮಳೆ ಗೈದರು.
ಕ್ಷೇತ್ರದ ಜನ ಕಳಸಾ ಬಂಡೂರಿ ಹೋರಾಟದಲ್ಲಿ ತೊಡಗಿರುವಾಗ ತಾವು ಒಂದು ಭಾರೀಯೂ ಹೋರಾಟದಲ್ಲಿ ಭಾಗವಹಿಸಿರಲಿಲ್ಲ. ಕೆರೆ ತುಂಬಿಸುವ ನಿಮ್ಮ ಭರವಸೆ ಈಡೇರಲಿಲ್ಲ ಎಂದು ರೈತರು ಸಂಸದರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ನಂತರ ಸಂಸದ ಅನಂತಕುಮಾರ ಹೆಗಡೆ ರೈತರನ್ನು ಸಮಾದಾನ ಪಡಿಸಿ ಕಕ್ಕೇರಿ ದೇವಸ್ಥಾನದಲ್ಲಿ ರೈತರ ಜೊತೆ ಸಾಮಾಲೋಚನೆ ನಡೆಸಿ ರೈತರ ಸಮಸ್ಯೆಗಳಗನ್ನು ಆಲಿಸಿದರು.

Check Also

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಕಪ್ಪು ಮಸಿ ಎರಚಿದ್ರು…!!

ಬೆಳಗಾವಿ-ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಮಸಿ ಬಳಿದ ಘಟನೆ ಇಂದು ಮಹಾರಾಷ್ಟ್ರದ ಪೂನೆಯಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *