Breaking News
Home / LOCAL NEWS (page 111)

LOCAL NEWS

ಕಿಕ್ಕು ಏರಿತ್ತು….. ಕರೆಂಟ್ ಟಿಸಿ ಹಾರಿ ಹೋಗಿತ್ತು ಕಾರು ಪುಟ್ಪಾತ್ ಗೆ ನುಗ್ಗಿತ್ತು…..!!

ಪುಟ್ ಪಾತ್ ಮೇಲೆ ಹರಿದ ಕಾರು…!! ಬೆಳಗಾವಿ- ಕಳೆದ ರಾತ್ರಿ ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ವಾಹನವೊಂದು ರಸ್ತೆ ಬೀದಿಬದಿಯ ಪುಟ್ ಪಾತ್ ಮೇಲೆ ಹರಿದ ಘಟನೆ ಬೆಳಗಾವಿಯ ಸಿವ್ಹಿಲ್ ಆಸ್ಪತ್ರೆ ಎದುರಿನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರಸ್ತೆಯಲ್ಲಿ ನಡೆದಿದೆ. ಕಾರು ಪುಟ್ ಪಾತ್ ಮೇಲೆ ಹರಿದ ಪರಿಣಾಮವಾಗಿ ವಾಹನವು ಸಂಪೂರ್ಣ ಜಖಂಗೊಂಡಿದೆ. ಹೆಸ್ಕಾಂನ ಟಿಸಿ ಒಂದಕ್ಕೆ ರಭಸದಿಂದ ಡಿಕ್ಕಿ ಹೊಡದ ಪರಿಣಾಮ ಟಿಸಿಯು ಸಂಪೂರ್ಣ ಹಾಳಾಗಿದ್ದು, ಅದೃಷ್ಠಶಾವತ ಯಾವುದೇ ಪ್ರಾಣ ಹಾನಿಯು ಸಂಭವಿಸಿಲ್ಲ.. …

Read More »

ಸಾಧನೆಯ ಸಾಮ್ರಾಟ, ಪ್ರಭಾಕರ ಕೋರೆ,ಅಮೃತ ಮಹೋತ್ಸವಕ್ಕೆ ಬೆಳಗಾವಿ ಸಜ್ಜು….

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಹಿರಿಯ ರಾಜಕಾರಣಿ ಡಾ.ಪ್ರಭಾಕರ ಕೋರೆ ಅವರ ೭೫ನೇ ಜನ್ಮದಿನದ ಅಮೃತ ಮಹೋತ್ಸವ ಸಮಾರಂಭಕ್ಕೆ ಕುಂದಾನಗರಿ ಬೆಳಗಾವಿ ಸಜ್ಜುಗೊಂಡಿದೆ. ಶನಿವಾರ ಮಧ್ಯಾಹ್ನ ೨ ಗಂಟೆಗೆ ನಡೆಯುವ ಕೋರೆ ಅವರ ಅಮೃತ ಮಹೋತ್ಸವಕ್ಕೆ ನೆಹರು ನಗರ ಕ್ರೀಡಾಂಗಣವನ್ನು ಸಜ್ಜುಗೊಳಿಸಲಾಗಿದೆ. ಬೃಹತ್ ಶಾಮಿಯಾನ, ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸುಮಾರು ೧ ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳು ಸೇರಿದಂತೆ ರಾಷ್ಟ್ರೀಯ ಘಟಾನುಘಟಿ …

Read More »

ನಾಳೆ ಬೆಳಗಾವಿಯಲ್ಲಿ ಇನ್ನೊಂದು ಮಹತ್ವದ ಕಾರ್ಯಕ್ರಮ….!!

ಬೆಳಗಾವಿ-ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಿ ಸಾವಿರಾರು ದುಡಿಯುವ ಕೈಗಳಿಗೆ ಕೆಲಸ ಕೊಡಿಸಿ,ಕೈಗಾರಿಕಾ ಮಂತ್ರಿಯಾಗಿರುವ ಮುರುಗೇಶ್ ನಿರಾಣಿ ಅವರು ತಮ್ಮ ಸಹಕಾರ ಕ್ಷೇತ್ರದ ಸೇವೆಯನ್ನು ಬೆಳಗಾವಿ ಮಹಾನಗರಕ್ಕೂ ವಿಸ್ತರಿಸಿದ್ದಾರೆ. .ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಅನೇಕ ಸಕ್ಕರೆ,ಹಾಗೂ ಸಿಮೆಂಟ್ ಕಾರ್ಖಾನೆಗಳ ಮೂಲಕ ಸಾವಿರಾರು ಜನ ಯುವಕರಿಗೆ ಉದ್ಯೋಗ ಕೊಡಿಸಿದ್ದಾರೆ.ಈಗ ತಮ್ಮ ಸೇವಾ ವ್ಯಾಪ್ತಿಯನ್ನು ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಗೂ ವಿಸ್ತರಿಸಿದ್ದು, ನಾಳೆ ಶನಿವಾರ ಬೆಳಗಾವಿ ಮಹಾನಗರದಲ್ಲಿ ತಮ್ಮ …

Read More »

ಮೃತಪಟ್ಟ ಬೈಲಹೊಂಗಲದ ಯುವತಿ ಗೋವಾ ಆಸ್ಪತ್ರೆಗೆ ದಾಖಲಾಗಿದ್ದಳು

ಬೆಳಗಾವಿ- ಇಂದು ಬೆಳಗ್ಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ 19 ವರ್ಷದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು,ಬೆಳಗಾವಿ ಪೋಲೀಸರ ಪ್ರಾಥಮಿಕ ತನಿಖೆಯಿಂದಾಗಿ ಅನೇಕ ವಿಚಾರಗಳು ಬಹಿರಂಗವಾಗಿವೆ‌. ನಿನ್ನೆ ರಾತ್ರಿ ಯುವಕನೊಬ್ಬ ಈ ಯುವತಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದ,ಈ ಯುವತಿ ನಿತ್ರಾಣ ಸ್ಥಿತಿಯಲ್ಲಿದ್ದಳು,ಎಂಎಲ್ಸಿ ಮಾಡ್ತಿವಿ ಅಂದಾಗ ಈ ಯುವಕ ಪರಾರಿಯಾಗಿದ್ದ,ಈ ಯುವತಿಯ ಹೆಚ್ಚಿನ ಚಿಕಿತ್ಸೆಗಾಗಿ ಕೆಎಲ್ಇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು,ಈ ಯುವತಿ ಗರುವಾರ ಬೆಳಗ್ಗೆ ಮೃತಪಟ್ಟ ಬಳಿಕ,ಯುವತಿಯ ಪೋಷಕರು ಇದೊಂದು ರೇಪ್ ಆ್ಯಂಡ್ …

Read More »

ನಮ್ಮ ನಡೆ…ನಿಮ್ಮ ಕಡೆ….ತಾಲ್ಲೂಕಾ ಕೇಂದ್ರಗಳಲ್ಲಿ ಡಿಸಿ,ಎಸ್ಪಿ ಸಿಇಓ ಲಭ್ಯ…!!

ಸಾರ್ವಜನಿಕ ಭೇಟಿಗೆ ಡಿಸಿ, ಎಸ್.ಪಿ. ಸಿಇಓ ಲಭ್ಯ ———————————————————– ಅ.14 ರಂದು ಬೈಲಹೊಂಗಲ, ಸವದತ್ತಿ ತಹಶೀಲ್ದಾರ ಕಚೇರಿಗಳಲ್ಲಿ ಭೇಟಿಗೆ ಅವಕಾಶ ಬೆಳಗಾವಿ, -ಜಿಲ್ಲಾಧಿಕಾರಿ ನಿತೇಶ್ ಪಾಟೀಲ, , ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಅವರು ಶುಕ್ರವಾರ(ಅ.14) ಬೈಲಹೊಂಗಲ ಮತ್ತು ಸವದತ್ತಿ ತಹಶೀಲ್ದಾರ ಕಚೇರಿಗಳಲ್ಲಿ ಸಾರ್ವಜನಿಕ ಭೇಟಿಗೆ ಲಭ್ಯವಿರಲಿದ್ದಾರೆ. ಬೈಲಹೊಂಗಲ ತಹಶೀಲ್ದಾರ ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆ ಮತ್ತು ಸವದತ್ತಿ ತಹಶೀಲ್ದಾರ …

Read More »

ಬೆಳಗಾವಿಗೆ ಮಂಜೂರಾದ, ಸೆಂಟರ್ ಧಾರವಾಡಕ್ಕೆ ಶಿಪ್ಟ್ ಮಾಡಲು ಹುನ್ನಾರ…!!!

ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ, ಅಭಿವೃದ್ಧಿಯ ಸರ್ದಾರ,ಅಭಯ ಪಾಟೀಲ್ ಅವರು ಸಿಎಂ ಬೊಮ್ಮಾಯಿ ಅವರ ಗಂಟು ಬಿದ್ದು ಬೆಳಗಾವಿಗೆ ಮಂಜೂರು ಮಾಡಿಸಿದ್ದ 150 ಕೋಟಿ ರೂ ವೆಚ್ಚದ,ನೂರಾರು ಯುಕರಿಗೆ ಉದ್ಯೋಗ ಕೊಡಿಸುವ ಗ್ಲೋಬಲ್ ಎಮರ್ಜಿಂಗ್ ಟೆಕ್ನಲಾಜಿ ಡಿಸೈನ್ ಸೆಂಟರ್,ಬೆಳಗಾವಿಯಿಂದ ಹುಬ್ಬಳ್ಳಿ- ಧಾರವಾಡ ಅವಳಿ ನಗರಕ್ಕೆ ಶಿಪ್ಟ್ ಮಾಡುವ ಹುನ್ನಾರ ನಡೆದಿದೆ. ಬೆಳಗಾವಿಯಲ್ಲಿ ಗ್ಲೋಬಲ್ ಎಮರ್ಜಿಂಗ್ ಟೆಕ್ನಲಾಜಿ ಡಿಸೈನ್ ಸೆಂಟರ್ ಮಂಜೂರು ಮಾಡಿ,150 ಕೋಟಿ ರೂ ಅನುದಾನವನ್ನು ಸಿಎಂ ಬೊಮ್ಮಾಯಿ …

Read More »

ಬೆಳಗಾವಿಯಲ್ಲಿ 19 ವರ್ಷದ ಯುವತಿ ಅನುಮಾನಾಸ್ಪದ ಸಾವು..

ಬೆಳಗಾವಿ-ಬೆಳಗಾವಿಯಲ್ಲಿ 19 ವರ್ಷದ ಯುವತಿ ಅನುಮಾನಾಸ್ಪದ ಸಾವನ್ನೊಪ್ಪಿದ್ದು.ಅತ್ಯಾಚಾರ ಮಾಡಿ ಬಳಿಕ ಯುವತಿ ಕೊಲೆ ಮಾಡಿದ್ದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ತಬಸ್ಸುಮ್ ಸವದತ್ತಿ (19)ಎಂಬ ಯುವತಿ ಇಂದು ಬೆಳಗ್ಗೆ ಸಾವನ್ನೊಪ್ಪಿದ್ದಾಳೆ. ಬೆಂಗಳೂರಿನಲ್ಲಿ ಕಾಲ್‌ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ತಬಸ್ಸುಮ್,ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ನಿವಾಸಿಯಾಗಿದ್ದಾಳೆ.ಆಟೋ ಚಾಲಕರಾಗಿರುವ ಮೃತ ತಬಸ್ಸುಮ್ ತಂದೆ ಇರ್ಷಾದ್‌ಅಹ್ಮದ್ ಸವದತ್ತಿ ಬೆಳಗಾವಿಯ ಖಾಸಗಿ ಆಸ್ಪತ್ರೆ ಎದುರು ಮಾದ್ಯಮಗಳಿಗೆ ಮಗಳು ತಬಸ್ಸುಮ್ ಸಾವಿನ ಕುರಿತು …

Read More »

ತಾಯಿಯ ಜೊತೆ ಮೂವರು ಮಕ್ಕಳ ಆತ್ಮಹತ್ಯೆ

ಚಿಕ್ಕೋಡಿ: ಪಕ್ಕದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ್ ತಾಲೂಕಿನ ಬಿಳ್ಳೂರ ಗ್ರಾಮದ ಹೊರವಲಯದಲ್ಲಿ ತಾಯಿ ಜೊತೆ ಮೂರು ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸುನೀತಾ ತುಕಾರಾಮ ಮಾಳಿ (27) ಅಮೃತಾ ತುಕಾರಾಮ ಮಾಳಿ (13)ಅಂಕಿತಾ ತುಕಾರಾಮ ಮಾಳಿ (10) ಐಶ್ವರ್ಯ ತುಕಾರಾಮ ಮಾಳಿ (7) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಕಳೆದ ನಾಲ್ಕು ದಿನದ ಹಿಂದೆ ನಾಪತ್ತೆಯಾಗಿದ್ದಾರೆ ಎಂದು ಕುಟುಂಬಸ್ಥರು ಜತ್ತ್ ಪೊಲೀಸ್ ಠಾಣೆಯಲ್ಲಿ …

Read More »

ಹೆಂಡತಿಯೊಂದಿಗೆ ಅಸಭ್ಯವಾಗಿ ವರ್ತಿಸಿದವನಿಗೆ ನಶೆ ಮಾಡಿಸಿ ಕೊಲೆ…!

ಬೆಳಗಾವಿ-ಹೆಂಡತಿಯೊಂದಿಗೆ ಅಸಭ್ಯವಾಗಿ ವರ್ತಿಸಿದವನ ಹೆಂಡಕುಡಿಸಿ ಕೊಲೆ ಮಾಡಿದ ಘಟನೆಅಕ್ಟೋಬರ್ ೭ ರಂದು ನಡೆದಿತ್ತು ಈ ಪ್ರಕರಣ ಭೇದಿಸಿದ ಪೊಲೀಸರು,ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿಯಲ್ಲಿ ನಡೆದಿದ್ದ ಕೊಲೆ ಪ್ರಕರಣ ವನ್ನು ಪೋಲೀಸರು ತ್ವರಿತವಾಗಿ ಭೇದಿಸಿದ್ದಾರೆ.ಸುನೀಲ್ ಸಾಳುಂಕೆ(೩೪) ಕೊಲೆಯಾಗಿದ್ದ ದುರ್ದೈವಿ,ಕೊಲೆ ಆರೋಪಿ ಮಹಾಂತೇಶ ಹೆಂಡತಿಯ ಜತೆಗೆ ಅಸಭ್ಯವಾಗಿ ವರ್ತಿಸಿದ್ದ ಸುನೀಲ್,ಇದೇ ಕಾರಣಕ್ಕೆ ಸುನೀಲ್ ನನ್ನು ಬೈಕ್ ಮೇಲೆ ಕರೆದೊಯ್ದು ಕೊಲೆ ಮಾಡಿದ್ದ ಮಹಾಂತೇಶ,ಎನ್ನುವ ಅಂಶ ಬೆಳಕಿಗೆ ಬಂದಿದೆ. ಪ್ರಕರಣದ …

Read More »

ರೈತರ ಹೆಲ್ತ್ ಚೆಕಪ್ ಮಾಡಲು,ಡಿಸಿ ಕಚೇರಿ ಎದುರು, ಡಾಕ್ಟರ್ ಬಂದ್ರು….!!

ಬೆಳಗಾವಿ- ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಯ ಮಾಲೀಕರು 3500 ದರ ಕೊಡಬೇಕು.ಸರ್ಕಾರ 2000 ಎರಡು ಸಾವಿರ ಸೇರಿಸಿ ರೈತರಿಗೆ ಒಟ್ಟು 5500 ಕಬ್ಬಿನ ಬೆಲೆ ಕೊಡಬೇಕು ಎಂದು ರಾಜ್ಯ ರೈತ ಸಂಘ,ಮತ್ತು ಹಸೀರು ಸೇನೆಯ ರೈತರು ನಡೆಸುತ್ತಿರುವ ಹೋರಾಟ ಎರಡನೇಯ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ಸೋಮವಾರ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ರಸ್ತೆ ತಡೆ ನಡೆಸುವ ಮೂಲಕ ಹೋರಾಟ ಆರಂಭಿಸಿದ ರೈತರು,ನಂತರ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿ,ಡಿಸಿ ಕಚೇರಿ ಎದುರೇ …

Read More »