Home / LOCAL NEWS (page 130)

LOCAL NEWS

ಬೆಳಗಾವಿಯ ಭೀಮ್ಸ್ ನಿರ್ದೇಶಕರಾಗಿ ಅಶೋಕ ಕುಮಾರ್ ಶೆಟ್ಟಿ..

ಬೆಳಗಾವಿ-ಬೆಳಗಾವಿಯ ಭೀಮ್ಸ್ ನಿರ್ದೇಶಕರಾಗಿ ಅಶೋಕ ಕುಮಾರ್ ಶೆಟ್ಟಿ ಅವರನ್ನು ನೇಮಿಸಿ,ವೈದ್ಯಕೀಯ ಶಿಕ್ಷಣ ಇಲಾಖೆಯ ಆಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. ಅಶೋಕ ಕುಮಾರ್ ಶೆಟ್ಟಿ ಅವರು ಭೀಮ್ಸ್ ನಲ್ಲಿ ಫ್ರೋಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಭೀಮ್ಸ್ ಉಸ್ತುವಾರಿಯಾಗಿದ್ದ,ಅಮಲನ್ ಆದಿತ್ಯ ಭಿಸ್ವಾಸ್ ಅವರ ವರ್ಗಾವಣೆಯ ಬಳಿಕ ಬೆಳಗಾವಿಯ ಭೀಮ್ಸ್ ಆಡಳಿತದಲ್ಲಿ ಮಹತ್ವದ ಬೆಳವಣಿಗೆಗಳು ಆಗಿವೆ. ಭೀಮ್ಸ್ ನಿರ್ದೇಶಕರಾಗಿ ನೇಮಿಸಲಾಗಿರುವ ಅಶೋಕ ಕುಮಾರ್ ಶೆಟ್ಟಿ ಅವರು, ಭೀಮ್ಸ್ ನಲ್ಲಿ ಪೋರೆನ್ಸಿಕ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

Read More »

ಚಿರತೆ ಹಿಡಿಯಲು ಬೆಳಗಾವಿಗೆ ಬಂತು,ಸ್ಪೇಶಲ್ ಪೋರ್ಸ್…!!

ಚಿರತೆ ಪತ್ತೆಗೆ ಫೀಲ್ಡ್ ಗೆ ಇಳಿದ,ಅರಣ್ಯ,ಪೋಲೀಸ್ ಇಲಾಖೆ ಫೋರ್ಸ್…!! ಬೆಳಗಾವಿ- ಬರೊಬ್ಬರಿ ಎರಡು ವಾರದಿಂದ ಬೆಳಗಾವಿ ಮಹಾನಗರದಲ್ಲಿ ಮನೆ ಮಾಡಿರುವ ಚಿರತೆ ಪತ್ತೆಗೆ ಇಂದು ಮಧ್ಯಾಹ್ನ ಅರಣ್ಯ ಇಲಾಖೆ,ಹಾಗೂ ಪೋಲೀಸ್ ಇಲಾಖೆಯ ಬೃಹತ್ ಫೋರ್ಸ್ ದೊಡ್ಡ ಮಟ್ಟದ ಕಾರ್ಯಾಚರಣೆ ಶುರು ಮಾಡಿದೆ. ಬೆಳಗಾವಿ ಗಾಲ್ಫ್ ಮೈದಾನಕ್ಕೆ ಹೊಂದಿಕೊಂಡಿರುವ ಬೆಳಗಾವಿ ಕ್ಲಬ್ ಆವರಣದಲ್ಲಿ ಜಮಾಯಿಸಿದ ಪೋರ್ಸ್ ಗೆ ಅಧಿಕಾರಿಗಳು ಮಾರ್ಗದರ್ಶನ ಮಾಡಿದ್ರು. ಡಿಸಿಪಿ ರವೀಂದ್ರ ಗಡಾದೆ,ಎಸಿಪಿ ನಾರಾಯಣ ಭರಮಣಿ,ಹಾಗು ಅರಣ್ಯ ಇಲಾಖೆಯ …

Read More »

ಬೆಳಗಾವಿಯ ಮುಸ್ಲಿಂ ಮನೆಯಲ್ಲಿ ಕೃಷ್ಣಾವತಾರ…!!

ಕೃಷ್ಣ ವೇಷಧಾರಿಯಲ್ಲಿ ಮಿಂಚಿದ ಮುಸ್ಲಿಂ ಬಾಲಕ…! ಭಾರತ ವೈವಿಧ್ಯಮಯ ರಾಷ್ಟ್ರ. ಇಲ್ಲಿ ಹಲವು ಜಾತಿ- ಧರ್ಮಗಳಿದ್ದರೂ ಐಕ್ಯತೆಯೇ ಇಲ್ಲಿನ ವಿಶೇಷತೆ. ಆದ್ರೆ ಇತ್ತೀಚಿಗೆ ಧರ್ಮ-ಧರ್ಮಗಳ ನಡುವೆ ಒಡಕ್ಕುಂಟು ಮಾಡಿ, ಸಾಮರಸ್ಯವನ್ನ ಹದಗೆಡಿಸುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಹಿಂದೂ- ಮುಸ್ಲಿಂ ಬಾಯಿಬಾಯಿ ಎನ್ನುವ ಸಂದೇಶ ಆಗಾಗ ಮೂಡಿ ಬರುತ್ತಲೇ ಇದೆ. ಇದಕ್ಕೆ ಉದಾಹರಣೆ ಈ ಮುಸ್ಲಿಂ ಕುಟುಂಬ.ಗಡಿ ಜಿಲ್ಲೆ ಬೆಳಗಾವಿಯ ಸದಾಶಿವ ನಗರದಲ್ಲಿನ ಮೊಕಾಶಿ ಕುಟುಂಬ ಹಿಂದೂ ಮುಸ್ಲಿಂ ಬೇಧ ಭಾವ ಮಾಡದೇ …

Read More »

ಬೆಳಗಾವಿಯಲ್ಲಿ, ಇಂಡೋ ಟಿಬೆಟಿಯನ್ ಗೆ ಸೇರಿದ 2 ಎಕೆ-47 ಕಳವು

ಬೆಳಗಾವಿ-ಬೆಳಗಾವಿಯಲ್ಲಿ, ಇಂಡೋ ಟಿಬೆಟಿಯನ್ ಗೆ ಸೇರಿದ 2 ಎಕೆ-47 ಕಳುವಾದ ಘಟನೆ ನಿನ್ನೆ ಗುರುವಾರ, ನಡೆದಿದೆ. ಬೆಳಗಾವಿ ತಾಲೂಕಿನ ಹಾಲಭಾವಿಯ ಐಟಿಬಿಪಿ ಕ್ಯಾಂಪಿನಿಂದ ಎಕೆ-47 ರೈಫಲ್ ಕಳವು ಆಗಿದ್ದುರಾಜೇಶಕುಮಾರ, ಸಂದೀಪ ಮೀನಾ ಎಂಬುವವರಿಗೆ ಸೇರಿದ ಎಕೆ-47 ರೈಫಲ್ ಕಳವು ಆಗಿವೆ‌.ನಕ್ಸಲ್ ನಿಗ್ರಹ ತರಬೇತಿಗೆ ಹಾಲಭಾವಿಗೆ ಆಗಮಿಸಿರುವ ಮಧುರೈನ 45ನೇ ಬಟಾಲಿಯನ್‌,ಬೆಳಗಾವಿ ಪಕ್ಕದ ಹಾಲಭಾವಿಯಲ್ಲಿ ತರಬೇತಿ ಪಡೆಯುತ್ತಿದೆ. ಆ.17 ರಂದು ರಾತ್ರಿ ರೈಫಲ್ ಇಟ್ಟು ಮಲಗಿದ್ದಾಗ ರೈಫಲ್‌ಗಳು ಕಳ್ಳತನವಾಗಿವೆ.ವಿಷಯ ತಿಳಿದು ಬೆಚ್ಚಿಬಿದ್ದ …

Read More »

ಬಾಲಕನ ಕಿಡ್ನ್ಯಾಪ್ ಕೇಸ್ ಭೇದಿಸಿದ ಪೋಲೀಸರಿಗೆ ಶಬ್ಬಾಶ್ ಅಂದ್ರು SP…!!

ಸಂಕೇಶ್ವರ : ಸಂಕೇಶ್ವರ ಪಟ್ಟಣದಲ್ಲಿ ಇತ್ತಿಚೇಗೆ ನಡೆದ ಬಾಲಕನ ಅಪಹರಣ ಪ್ರಕರಣವನ್ನು ಭೇದಿಸಿರುವ ಸಂಕೇಶ್ವರದ ಪೆÇಲೀಸರು ಬಾಲಕನ ಅಪಹರಣ ಮಾಡಿ ಹಣದ ಬೇಡಿಕೆ ಇಟ್ಟಿದ್ದ ಒಟ್ಟು 6 ಖದೀಮರ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಇಂದಿಲ್ಲಿ ಹೇಳಿದರು. ನಗರದಲ್ಲಿ ಗುರುವಾರ ಸಂಜೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ. 2ರಂದು ಸಂಕೇಶರ್ವದ ಭಾಸ್ಕರ ಪ್ರಕಾಶ ಕಾಕಡೆ ಇವರು ಸಂಕೇಶ್ವರ ಪೆÇಲೀಸ ಠಾಣಿಗೆ …

Read More »

ಕೇಳ್ರಪೋ ಕೇಳಿ,ಸಾಹುಕಾರ್ ಹೇಳಿದ ಕೆಲಸ ಪಕ್ಕಾ ಆಯ್ತು ನೋಡ್ರಿ…!!

*ನರೇಗಾ ಯೋಜನೆಯಡಿ ರೈತರ ತೋಟದ ರಸ್ತೆಗಳ ಸುಧಾರಣೆ : ಶಾಸಕ ಬಾಲಚಂದ್ರ ಜಾರಕಿಹೊಳಿ* *ಎಲ್ಲ ಗ್ರಾಮ ಪಂಚಾಯತಗಳು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ* ಗೋಕಾಕ : ರೈತರ ಜಮೀನುಗಳಿಗೆ ಹೋಗುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯು ಆದೇಶ ಹೊರಡಿಸಿದೆ ಎಂದು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಮಹಾತ್ಮಾ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ …

Read More »

ಚಾಕುವಿನಿಂದ ಕತ್ತು ಕೋಯ್ದು ಪತ್ನಿ ಕೊಂದ ಪಾಪಿ ಪತಿ….

ಬೆಳಗಾವಿ-ಚಾಕುವಿನಿಂದ ಕತ್ತು ಕೋಯ್ದು ಪತ್ನಿ ಕೊಂದ ಪಾಪಿ ಪತಿ,ಪೋಲೀಸ್ ಠಾಣೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತ್ನಿ ಕೊಂದು ಸವದತ್ತಿ ಠಾಣೆಗೆ, ಆರೋಪಿ ಪತಿ ಶರಣಾಗಿದ ಘಟನೆ,ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಡೆದಿದೆ. ಅಯ್ಯಪ್ಪಸ್ವಾಮಿ ನಗರದಲ್ಲಿ ಪತ್ನಿ ಶಬಾನಾ(28) ಹತ್ಯೆಗೈದ ಆರೋಪಿ ಮೆಹಬೂಬ್ ಸಾಬ್ ಪತ್ನಿಯ ಹತ್ಯೆ ಮಾಡಿದ ಬಳಿಕ ನೇರವಾಗಿ ಪೋಲೀಸ್ ಠಾಣೆಗೆ ಹಾಜರಾಗಿದ್ದಾನೆ.ಬೀಡಿ ಗ್ರಾಮದ ಶಬಾನಾ ಜೊತೆ ಮುನವಳ್ಳಿ ನಿವಾಸಿ ಮೆಹಬೂಬ್‌ಸಾಬ್ …

Read More »

ದುಡ್ಡು ವಾಪಸ್ ಕೇಳಿದಾಗ ಬೆನ್ನಿಗೆ ಚಾಕೂ ಚುಚ್ಚಿದ ಸ್ವಾಮೀಜಿ…!!

ಬೆಳಗಾವಿ- ಹೋಮ ಹವನ ಮಾಡಿ,ಭಕ್ತರಿಗೆ ನಿಂಬೆಕಾಯಿ ಟೆಂಗಿನಕಾಯಿ ಕೊಟ್ಟು, ಆಶೀರ್ವಾದ ಮಾಡುವ ಸ್ವಾಮೀಜಿಗಳನ್ನು ನಾವು ನೋಡಿದ್ದೇವೆ.ಮಾಟ ಮಂತ್ರ ಅಂದಾಗ ತಾಯಿತ ಕಟ್ಟುವ ಬಾಬಾಗಳನ್ನೂ ನಾವು ನೋಡಿದ್ದೇವೆ.ಆದ್ರೆಸರ್ಕಾರಿ ನೌಕರಿ ಕೊಡಿಸುತ್ತೇನೆ ಎಂದು ಮೋಸ ಮಾಡಿ,ದುಡ್ಡು ವಾಪಸ್ ಕೇಳಿದಾಗ ಭಕ್ತನ ಮೇಲೆ ಹಲ್ಲೆ ಮಾಡಿದ ವಂಚಕ ಸ್ವಾಮೀಜಿಯೊಬ್ಬ ಈಗ ಪೋಲೀಸರ ಅತಿಥಿಯಾಗಿದ್ದಾನೆ. ಮೂಡಲಗಿ ಠಾಣೆ ಪೊಲೀಸರು ಖತರ್ನಾಕ್ ವಂಚಕ ಸ್ವಾಮೀಜಿಯನ್ನು ಬಂಧಿಸಿದ್ದಾರೆ.ಸ್ವಾಮೀಜಿ ರೀತಿ ಪೋಸ್ ಕೊಟ್ಟು ಜನರನ್ನು ವಂಚಿಸುತ್ತಿದ್ದ ಆರೋಪಿ ಸ್ವಾಮಿ ಈಗ …

Read More »

ಬೆಳಗಾವಿಯಲ್ಲಿ,ಚಿರತೆಯಿಂದ ಮಹಾತ್ಮಾ ಗಾಂಧಿ ದರ್ಶನ…!!

ಬೆಳಗಾವಿ- ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಮನೆ ಮಾಡಿ ಎರಡು ವಾರಗಳು ಕಳೆದಿವೆ,ಈ ಚಿರತೆ ಆಗೊಮ್ಮೆ ,ಈಗೊಮ್ಮೆ ಬೆಳಗಾವಿ ಜನತೆಗೆ ಕಾಣಿಸಿಕೊಳ್ಳುತ್ತಲೇ ಇದೆ. ನಿನ್ನೆ ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಬೆಳಗಾವಿ- ಹಿಂಡಲಗಾ ರಸ್ತೆಯ ಕ್ಯಾಂಪ್ ಪ್ರದೇಶದ ಮಹಾತ್ಮಾ ಗಾಂಧಿ ಸರ್ಕಲ್ ನಲ್ಲಿ ಈ ಚಿರತೆ,ಹಿಂಡಲಗಾ ಗ್ರಾಮದ ಅಜಯ ಮಾಸ್ತಿ ಎಂಬುವವರಿಗೆ ಪ್ರತ್ಯಕ್ಷವಾಗಿದ್ದು, ಬೆಳಗಾವಿ – ಹಿಂಡಲಾ ರಸ್ತೆಯಲ್ಲಿ ಈಗ ಚಿರತೆ ಆತಂಕ ಶುರುವಾಗಿದೆ. ಕಾರಿನಲ್ಲಿ ಈ ರಸ್ತೆಯ ಮೂಲಕ …

Read More »

ಬೆಳಗಾವಿ ಮೇಯರ್ ಇಲೆಕ್ಷನ್ ಬಗ್ಗೆ ಆಮ್ ಆದ್ಮಿ ಪಾರ್ಟಿ ಸೀರೀಯಸ್….!!

ಅವರು ಗೌನ್ ಕೊಡಲಿಲ್ಲ.ಇವರು ಮೇಯರ್ ಇಲೆಕ್ಷನ್ ಮಾಡಲಿಲ್ಲ: ಟೋಪಣ್ಣವರ ಬೆಳಗಾವಿ ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುವ ಸಂಧರ್ಭದಲ್ಲಿ, ಬೆಳಗಾವಿ ಮಹಾನಗರ ಪಾಲಿಕೆಯ ಸದಸ್ಯರು,ಅಧಿಕಾರ ಇಲ್ಲದೇ ವಾರ್ಷಿಕೋತ್ಸವ ಆಚರಿಸು ಪರಿಸ್ಥಿತಿ ಎದುರಾಗಿದೆ. ಕಾಂಗ್ರೆಸ್ ನವರು ಸ್ಥಳೀಯ ಶಾಸಕರಿಗೆ ಗೌನ್ ಕೊಡಬೇಕಾದವರು ಮೌನರಾದರು ಎಂದು ಆಮ್ ಆದ್ಮಿ ಪಾರ್ಟಿಯ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ಟೀಕಿಸಿದ್ದಾರೆ. ಸ್ಥಳಿಯ ಶಾಸಕ ಅಭಯ ಪಾಟೀಲರು ಪಾಲಿಕೆಯ ಮೇಯರ್, ಉಪಮೇಯರ್ ಅಗಸ್ಟ್ 15 ಕ್ಕೆ …

Read More »