Breaking News
Home / LOCAL NEWS (page 133)

LOCAL NEWS

ಬೆಳಗಾವಿ ಜಿಲ್ಲೆಯ ಮೊಹರಂ ಸ್ಪೇಶ್ಯಾಲಿಟಿ ಏನು ಗೊತ್ತಾ..??

ಬೆಳಗಾವಿ; ಇಲ್ಲಿ ಮುಸ್ಲಿಂ ಒಂದೂ ಕುಟುಂಬ ಇಲ್ಲ, ಹಿಂದೂಗಳಿಂದಲೇ ಮೊಹರಂ ಆಚರಣೆ ಬೆಳಗಾವಿ: ಅದು ಸವದತ್ತಿ ತಾಲ್ಲೂಕಿನ ಚಿಕ್ಕ ಗ್ರಾಮ ಹರ್ಲಾಪುರ. ಆದರೆ, ಧರ್ಮ ಸೌಹಾರ್ದದಲ್ಲಿ ಈ ಜನರ ಮನಸ್ಸು ಬಹಳ ದೊಡ್ಡದು. ಈ ಊರಲ್ಲಿ ಒಂದೂ ಮುಸ್ಲಿಂ ಕುಟುಂಬವಿಲ್ಲ. ಹಾಗಾಗಿ, ಹಿಂದೂಗಳೇ ಇಲ್ಲಿ ಫಕೀರಸ್ವಾಮಿ ದರ್ಗಾ ಕಟ್ಟಿಸಿ, ಮೊಹರಂ ಆಚರಿಸುತ್ತಿದ್ದಾರೆ. ಮಂಗಳವಾರ ತುಂತುರು ಮಳೆ ಮಧ್ಯೆಯೂ‌ ಮೊಹರಂ ಆಚರಣೆ ನಡೆಯಿತು. ಇಲ್ಲಿ ಪ್ರತಿ ವರ್ಷ ವೈಭವದಿಂದ ಮೊಹರಂ ಆಚರಿಸಲಾಗುತ್ತದೆ. …

Read More »

ಬೆಳಗಾವಿಯಲ್ಲಿ ಇರೋದು ಇದೇ ಚಿರತೆ ನೋಡಿ…

ಬೆಳಗಾವಿಯ ಗಾಲ್ಫ ಮೈದಾನದ ಮರಗಳ ಪೊದರಿನಲ್ಲಿ ಕಳೆದ ಶುಕ್ರವಾರದಿಂದ ಅವಿತುಕೊಂಡು ಕುಳಿತಿರುವ ಚಿತರೆಯು ನಿನ್ನೆ ಸೋಮವಾರ ರಾತ್ರಿ ಅರಣ್ಯ ಇಲಾಖೆಯ ಸಿಸಿಟಿವ್ಹಿ ಯಲ್ಲಿ ಸೆರೆಯಾಗಿದೆ.ಅರಣ್ಯ ಇಲಾಖೆಯೇ ಈ ಪೋಟೋ ರಿಲೀಸ್ ಮಾಡಿದೆ. ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯು ಹಗಲಿರುಳು ಪ್ರಯತ್ನ ನಡೆಸಿದೆ. ಆರು ಬೋನುಗಳನ್ನು,16 ಸಿಸಿಟಿವಿ ಕ್ಯಾಮೆರಾಗಳನ್ನು ಬಳಸಿಕೊಳ್ಳಲಾಗಿದೆ. ಐವತ್ತು ಜನ ಅರಣ್ಯ ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿದೆ. ಡಿ ಎಫ್ ಓ ಶ್ರೀ ಎಚ್.ಎಸ್. ಅಂಥೋನಿ,ಎಸಿಎಫ್ ಶ್ರೀ.ಮಲ್ಲಿನಾಥ ಕುಸನಾಳ …

Read More »

ಬೆಳಗಾವಿಯ ಗಾಲ್ಫ ಮೈದಾನದಲ್ಲೇ ಚಿರತೆ ಇದೆ. ಬೆಳಗಾವಿ DFO ಹೇಳಿಕೆ..

ಬೆಳಗಾವಿಯಲ್ಲಿ ಚಿರತೆ ಚಲನವಲನ DFO ಹೇಳಿಕೆ… ಬೆಳಗಾವಿ- ಕಳೆದ ಐದು ದಿನಗಳಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಜೊತೆ ಕಣ್ಣುಮುಚ್ಚಾಲೆಯಾಟ ಆಡುತ್ತಿರುವ ಚಿರತೆಯ ಚಲನ ವಲನ ಕೊನೆಗೂ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಬೆಳಗಾವಿ DFO ಹೇಳಿದ್ದಾರೆ‌. ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಅಳವಡಿಸಲಾಗಿರುವ ಕ್ಯಾಮರಾದಲ್ಲಿ ಚಿರತೆಯ ಚಲನವಲನ ಪತ್ತೆಯಾಗಿದೆ, ಸಾರ್ವಜನಿಕರು ಅಲರ್ಟ್ ಆಗಿರಬೇಕು ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಸಹಕರಿಸಬೇಕು ಎಂದು DFO ಅಂಥೋಣಿ ಬೆಳಗಾವಿ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಗಾಲ್ಫ್ ಮೈದಾನ ಬೆಳಗಾವಿಯ …

Read More »

ಬೆಳಗಾವಿಯ ಕಾಳಜಿ ಕೇಂದ್ರದ ಕುರಿತು ಬೆಳಗಾವಿ ಡಿಸಿ ಕಳಕಳಿ…

ಬೆಳಗಾವಿಯಲ್ಲಿ ಅತಿವೃಷ್ಟಿ ಹಿನ್ನೆಲೆಯಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿರುವುದರಿಂದ ಅಂತಹ ಕುಟುಂಬಗಳಿಗೆ ನಗರದ ಮಂಡೋಳಿ ರಸ್ತೆಯ ಕೈವಲ್ಯ ಯೋಗ ಮಂದಿರದಲ್ಲಿ ಕಾಳಜಿ ಕೇಂದ್ರವನ್ನು ಆರಂಭಿಸಲಾಗಿದೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಈ ಕಾಳಜಿ ಕೇಂದ್ರಕ್ಕೆ ಸೋಮವಾರ ರಾತ್ರಿಯೇ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು. ಈ ಕಾಳಜಿ ಕೇಂದ್ರದಲ್ಲಿ ಹದಿನೈದು ಜನರು ಆಶ್ರಯ ಪಡೆದುಕೊಂಡಿದ್ದಾರೆ. ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ‌. ಮಹಿಳೆಯರು ಮತ್ತು ಮಕ್ಕಳು ಇರುವುದರಿಂದ ವೈದ್ಯಕೀಯ ತಂಡವನ್ನು ನಿಯೋಜಿಸಲಾಗಿದೆ ಎಂದು …

Read More »

ಬೆಳಗಾವಿಯಲ್ಲಿ ಅತ್ಯಾಧುನಿಕ ಕ್ಯಾಮರಾ ಅಳವಡಿಕೆಯಲ್ಲೂ ದಾಖಲೆ…!!!

ಒಂದೇ ಕ್ಷೇತ್ರದಲ್ಲಿ ಇಷ್ಟೊಂದು ಕ್ಯಾಮರಾ ಅಳವಡಿಸುತ್ತಿರುವದು ದೇಶದಲ್ಲೇ ಮೊದಲು ಬೆಳಗಾವಿ-ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಶಾಸಕ ಅಭಯ ಪಾಟೀಲ ಹೊಸ ದಾಖಲೆ ಮಾಡುವ ಮೂಲಕ ರಾಷ್ಟ್ರದ ಗಮನ ಸೆಳೆಯುತ್ತಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಮೂರು ಪೋಲೀಸ್ ಠಾಣೆಗಳ ವ್ಯಾಪ್ತಿಯ 90 ಸರ್ಕಲ್ ಗಳಲ್ಲಿ ಅತ್ಯಾಧುನಿಕ ಕ್ಯಾಮರಾ ಅಳವಡಿಸುವ ಕಾರ್ಯಕ್ಕೆ ಶಾಸಕ ಅಭಯ ಪಾಟೀಲ ಚಾಲನೆ ನೀಡಿದ್ದಾರೆ. ಹೆಚ್ಚುತ್ತಿರುವ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಹಾಗೂ ಸಂಚಾರದಲ್ಲಿ …

Read More »

ಬೆಳಗಾವಿ ಜಿಲ್ಲಾಡಳಿತಕ್ಕೆ ಸಚಿವರಿಂದ ಶಬ್ಬಾಶ್ ಗಿರಿ…!!

ಬೆಳಗಾವಿ ಅಧಿಕಾರಿಗಳ ಸ್ಪಂದನೆಗೆ “ಯಜಮಾನ” ಖುಷ್ ಆದ್ರು….!! ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಂದು ಹಾನಿಗೊಳಗಾದ ಮನೆಗಳಿಗೆ ಇಂದೇ ಪರಿಹಾರ ನೀಡಿ ಸ್ತುತ್ಯಾರ್ಹ ಕಾರ್ಯನಿರ್ವಹಿಸಿದ ಜಿಲ್ಲಾ ಆಡಳಿತ ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಆಡಳಿತದ ಕಾರ್ಯ ವೈಖರಿ ಕುರಿತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಹರ್ಷ ವ್ಯಕ್ತಪಡಿಸಿ ಬೆಳಗಾವಿ ಜಿಲ್ಲಾಡಳಿತಕ್ಕೆ ಅಭಿನಂದನಾ ಪತ್ರ ಕಳಿಸಿದ್ದಾರೆ. ಬೆಳಗಾವಿ ನಾಗರೀಕರ ನೋವುಗಳಿಗೆ ತಕ್ಷಣ ಸ್ಪಂದಿಸುವ ಸೇವೆ ಮಾಡಿದೆ. ಈ …

Read More »

ಬೆಳಗಾವಿಯಲ್ಲಿ ಭಾರಿ ಮಳೆ, ಎಲ್ಲಿ,ಯಾವಕಡೆ, ಅನಾಹುತ,ಇಲ್ಲಿದೆ ಡಿಟೇಲ್ಸ್..

ಭಾರಿ ಮಳೆಗೆ ಬೆಳಗಾವಿ,ಅಸ್ತವ್ಯಸ್ತ,ಅವಾಂತರ ಎಲ್ಲಿ ಇಲ್ಲಿದೆ ಡಿಟೇಲ್.… ಬೆಳಗಾವಿ- ಬೆಳಗಾವಿ ನಗರ ಹಾಗೂ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದೆ.ಈ ಭಯಾನಕ ಮಳೆ ಹಲವಾರು ಕಡೆ ಅವಾಂತರ ಸೃಷ್ಠಿಸಿದ್ದು,ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಮನೆ ಕುಸಿತ…. ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ನಿರಂತರ ಮಳೆಗೆ ಮನೆಗಳು ಕುಸಿದು ಬೀಳುತ್ತಿವೆ,ನಿನ್ನೆಯಷ್ಟೇ ಮನೆಯೊಂದು ಕುಸಿದು ಬಿದ್ದು,ಅಜ್ಜ ಅಜ್ಜಿ ಪ್ರಾಣಾಪಾಯದಿಂದ ಪಾರಾದ ಬೆನ್ನಲ್ಲಿಯೇ ಇಂದು ವಡಗಾವಿಯ ಭಾರತ ನಗರದಲ್ಲಿ ಮನೆಯೊಂದು ಕುಸಿದು ಬಿದ್ದಿದೆ. ನಿನ್ನೆ ಸಫಾರಿ ಗಲ್ಲಿಯಲ್ಲಿ ಮನೆ …

Read More »

ಬೆಳಗಾವಿಯಲ್ಲಿ ನಾಳೆ ನಡೆಯಬೇಕಿದ್ದ ಕಾಂಗ್ರೆಸ್ ಪಾದಯಾತ್ರೆ ರದ್ದು..

ಬೆಳಗಾವಿ- 75 ನೇಯ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕ್ರಾಂತಿಯ ನೆಲ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಬೃಹತ್ತ್ ಪಾದಯಾತ್ರೆಯನ್ನು ಭಾರಿ ಮಳೆಯ ಕಾರಣ ರದ್ದು ಪಡಿಸಲಾಗಿದೆ. ನಾಳೆ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ನೇತ್ರತ್ವದಲ್ಲಿ ಬೆಳಗಾವಿಯಲ್ಲಿ ಬೃಹತ್ತ್ ತಿರಂಗಾ ಯಾತ್ರೆಯನ್ನು ಆತೋಜಿಸಲಾಗಿತ್ತು,ಬೆಳಗಾವಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಈ ಪಾದಯತ್ರೆಯನ್ನು ಮುಂದೂಡಲಾಗಿದೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿ ಅವರ ಅಧ್ಯಕ್ಷತೆಯಲ್ಲಿ ಕೇವಲ ಒಂದೇ ಒಂದು …

Read More »

ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆ ಮತ್ತು, ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಣೆ

ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಣೆ ಬೆಳಗಾವಿ, ಆ.8(ಕರ್ನಾಟಕ ವಾರ್ತೆ): ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರ, ಬೆಳಗಾವಿ ತಾಲ್ಲೂಕು ಮತ್ತು ಖಾನಾಪುರ ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಇಂದು ಸೋಮವಾರ(ಆ.8) ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ***

Read More »

ಬೆಳಗಾವಿಯಲ್ಲಿ ಕೊನೆಗೂ ಕ್ಯಾಮರಾಗೆ ಪ್ರತ್ಯಕ್ಷವಾದ ಚಿರತೆ….!!

ಬೆಳಗಾವಿಯಲ್ಲಿ ಕೊನೆಗೂ ಪ್ರತ್ಯಕ್ಷವಾದ ಚಿರತೆ….!! ಬೆಳಗಾವಿ- ಅರಣ್ಯ ಇಲಾಖೆ ಸಿಬ್ಬಂಧಿ ಗಿಡಕ್ಕೆ ಕ್ಯಾಮರಾ ಅಳವಡಿಸಿದ್ದು ಸಾರ್ಥಕವಾಗಿದೆ.ನಿನ್ನೆ ರಾತ್ರಿಯೇ ಚಿರತೆ ಗಾಲ್ಫ್ ಮೈದಾನದಲ್ಲಿ ಅಳವಡಿಸಿದ ಕ್ಯಾಮರಾ ದಲ್ಲಿ ಸೆರೆಯಾಗಿದೆ. ಆದರೆ ಈ ವಿಚಾರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅಲ್ಲಗೆಳೆದಿದ್ದಾರೆ. ಮುಖ್ಯಾಂಶಗಳು… ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಅರಣ್ಯ ಇಲಾಖೆಯ ಕ್ಯಾಮರಾದಲ್ಲಿ ಚಿರತೆ ಸೆರೆ. ಚಿರತೆ ಬೆಳಗಾವಿ ಗಾಲ್ಪ ಮೈದಾನದಲ್ಲಿ ಇರೊದ್ರಿಂದ ಶಾಲೆಗಳಿಗೆ ರಜೆ ನೀಡಿದ ಬಿ.ಇ.ಒ ಗಾಲ್ಫ್ ಮೈದಾನದ ಸಮೀಪ ಇರುವ 22 …

Read More »