Breaking News

LOCAL NEWS

ಗೆಳೆಯನ ಹೆಂಡತಿಗಾಗಿ ಗೆಳೆಯನಿಗೆ ಬೆಂಕಿ ಹಚ್ಚಿದ ಭೂಪ….!!!

ಬೆಳಗಾವಿ : ಮಾಳಮಾರುತಿ ಪಿ.ಎಸ್ ಐ ಹೊನ್ನಪ್ಪ ತಳವಾರ ಸಿಸಿ ಟಿವ್ಹಿ ಪೋಟೇಜ್ ಚೆಕ್ ಮಾಡದಿದ್ದರೆ ಕಣಬರ್ಗಿಯ ಆ ಮರ್ಡರ್ ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ.ಸಿಸಿಟಿವ್ಹಿ ಪೋಟೇಜ್ ನಲ್ಲಿ ಶೂಟ್ ಆಗಿದ್ದ ಬೈಕ್ ಆರೋಪಿಯನ್ನು ಜೈಲಿಗೆಟ್ಟಿದೆ. ಗೆಳೆಯನ ಹೆಂಡತಿಗಾಗಿ ಟಾವೇಲ್ ನಿಂದ ಗೆಳೆಯನ ಕತ್ತು ಹಿಸುಕಿ,ಆತನನ್ನು ಬಣವಿಯಲ್ಲಿ ಹಾಕಿ ಬರ್ಬರವಾಗಿ ಸುಟ್ಟುಹಾಕಿ ಮರ್ಡರ್ ಮಾಡಿದ ಆ ಭೂಪ ಕೊನೆಗೂ ಪೋಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.ಈ ಕೊಲೆ ಪ್ರಕರಣವನ್ನು ಮಾಳಮಾರುತಿ ಠಾಣೆಯ ಪೋಲೀಸರು …

Read More »

ನಾಳೆ ಹುಕ್ಕೇರಿಯಲ್ಲಿ ಗುರುವಂದನೆ ಸವಿಸವಿ ನೆನಪಿನ ಜೊತೆಗೆ ಹಾಸ್ಯ….

ಬೆಳಗಾವಿ-ಇಂದಿನ ಯುವಗದಲ್ಲಿ ಯುವಪೀಳಿಗೆಯ ಲೈಫ್ ಸ್ಟೈಲ್ ಬದಲಾಗಿದೆ,ಕಲಿತ ಶಾಲೆಯನ್ನು ಕಲಿಸಿದ ಗುರುಗಳನ್ನು ಸ್ಮರಿಸುವದು ಬಹಳ ಕಡಿಮೆ,ಆದರೂ ಇಂದಿನ ಹೈಟೆಕ್ ಜಮಾನಾದಲ್ಲಿ, ಗುರುಗಳನ್ನು ವಂದಿಸುವ ಅಪರೂಪದ ಕಾರ್ಯಕ್ರಮ ನಾಳೆ ಭಾನುವಾರ ಹುಕ್ಕೇರಿಯಲ್ಲಿ ಇಡೀ ದಿನ ನಡೆಯಲಿದೆ. 33 ವರ್ಷಗಳ ಹಿಂದೆ ಹುಕ್ಕೇರಿಯ ಕಾಡಸಿದ್ದೇಶ್ವರ ಪ್ರೌಡ ಶಾಲೆಯಲ್ಲಿ ಕಲಿತ ವಿಧ್ಯಾರ್ಥಿಗಳು ಸೇರಿ ಬಾಲ್ಯದ ಆ ದಿನಗಳನ್ನು ಸ್ಮರಿಸಲು,ಕಲಿಸಿದ ಗುರುಗಳನ್ನು ರಥದಲ್ಲಿ ಮೆರವಣಿಗೆ ಮಾಡಿಸಿ,ಕೈತುತ್ತು ಉಣಿಸಿ,ಅವರ ಪಾದಪೂಜೆ ಮಾಡುವ ಮೂಲಕ ಗುರುವಂದನೆ ಮಾಡಲು ಅಭಿಮಾನದಿಂದ …

Read More »

ಗಾಂಜಾ ಮಾರಾಟ ಅಡ್ಡೆಯ ಮೇಲೆ ಖಾಕಿ ರೇಡ್…..

ಬೆಳಗಾವಿ- ಬೆಳಗಾವಿ ತಾಲ್ಲೂಕಿನ ಕಾಲೇಜುಗಳು ಇರುವ ಪರಿಸರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿಯ ಸೈಬರ್ ಠಾಣೆಯ ಪೋಲೀಸರು ದಾಳಿ ಮಾಡಿ ಅಪಾರ ಪ್ರಮಾಣದ ಗಾಂಜಾ ವಶ ನಡೆಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ. ಬೆಳಗಾವಿಯ ಹುಂಚ್ಯಾನಟ್ಟಿ,ಮಚ್ಛೆ ಕ್ರಾಸ್ ನಲ್ಲಿ,ಜೈನ್ ಇಂಜಿನಿಯರಿಂಗ್ ಕಾಲೇಜು ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಮಚ್ಛೆ ಗ್ರಾಮದ ರಾಹುಲ್ ಬಸವರಾಜ್ ಸುತಾರ್ (20) ಎಂಬಾತನನ್ನು ಬಂಧಿಸಿ,ಆತನ ಬಳಿ ಇದ್ದ,2kg 125 ಗ್ರಾಂ ಗಾಂಜಾ ಹಾಗು ಎಪ್ರಿಲಾ ಬೈಕ್ …

Read More »

ಬೆಳಗಾವಿ ಪಾಲಿಕೆಗೆ ಡಾಕ್ಟರ್ ದಿನೇಶ್ ಇಂಜೆಕ್ಷನ್….!!!

ಬೆಳಗಾವಿ, ಮಾ, 5 : ಕೊವೀಡ್ ಹಿನ್ನೆಲೆಯಲ್ಲಿ ಅನೇಕ ರಾಜ್ಯಗಳಲ್ಲಿ ಆಸ್ತಿಕರ ಆಕರಣೆಯಲ್ಲಿಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಕರಣೆ ಮಾಡುವ ಆಸ್ತಿ ಕರ (ತೆರಿಗೆ) ಯಲ್ಲಿ ಶೇ. 10ರಷ್ಟು ರಿಯಾಯಿತಿ ನೀಡುವಂತೆ ಮಾಜಿ ನಗರ ಸೇವಕ ದಿನೇಶ ನಾಶಿಪುಡಿ ಅವರ ನೇತ್ರತ್ವದಲ್ಲಿ ಪಾಲಿಕೆಯ ಮುಂದೆ ಧರಣಿ ನಡೆಸಲಾಗುತ್ತಿದೆ. ಶನಿವಾರ ಬೆಳಿಗ್ಗೆ ಬೆಳಗಾವಿ ಮಹಾನಗರ ಮಹಾನಗರ ಪಾಲಿಕೆಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.ಅನೇಕ ರಾಜ್ಯಗಳಲ್ಲಿ ಕೋವಿಡ್-19 ಮಹಾಮಾರಿ ಸಂದರ್ಭದಲ್ಲಿ ಜನರು ಆರ್ಥಿಕವಾಗಿ ಕಷ್ಟದಲ್ಲಿರುವುದನ್ನುಗಮನಿಸಿ, …

Read More »

ಕರೀಮ್ ತೇಲಗಿ ಹಗರಣ ಬೆಳಕಿಗೆ ತಂದ, ಜಯಂತ್ ತಿಣಿಯೇಕರ್ ಮೇಲೆ ಹಲ್ಲೆ…

ಬೆಳಗಾವಿ-ಬಹುಕೋಟಿ, ಕರೀಂ ಲಾಲಾ ನಕಲಿ ಛಾಪಾ ಕಾಗದ ಹಗರಣವನ್ನು ಬೆಳಕಿಗೆ ತಂದಿರುವ ಜಯಂತ್ ತಿಣೇಯೇಕರ್ ಮೇಲೆ ಅಟ್ಯಾಕ್ ಮಾಡಿರುವ ಕೆಲವು ದುಷ್ಕರ್ಮಿಗಳು ಜಯಂತ್ ಮೇಲೆ ಹಲ್ಲೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ನಕಲಿ ಛಾಪಾ ಕಾಗದ ಹಗರಣವನ್ನು ಬೆಳಕಿಗೆ ತಂದು ರಾಜ್ಯ ಸರ್ಕಾರಕ್ಕೆ ಸಾವಿರಾರು ಕೋಟಿ ರೂ ಉಳಿತಾಯ ಮಾಡಿ,ರಾಷ್ಟ್ರದ ಗಮನ ಸೆಳೆದಿದ್ದ ಖಾನಾಪೂರ ಮೂಲದ ಸಾಮಾಜಿಕ ಕಾರ್ಯಕರ್ತ ಜಯಂತ್ ತಿಣಿಯೇಕರ್ ಮೇಲೆ ಕೆಲವು ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.ಈ ಘಟನೆ …

Read More »

ಬೊಮ್ಮಾಯಿ ಬಜೆಟ್ ನಲ್ಲಿ ಬೆಳಗಾವಿಗೆ ಮಿಠಾಯಿ….!!

ಬೆಳಗಾವಿ ಜಿಲ್ಲೆಗೆ ಮಿಠಾಯಿ –₹೫೦ ಕೋಟಿ ವೆಚ್ಚದಲ್ಲಿ ಬೆಳಗಾವಿಯಲ್ಲಿ ಕಿದ್ವಾಯಿ ಆಸ್ಪತ್ರೆ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಸ್ಥಾಪಿಸುವುದು. ಮಹದಾಯಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ₹ ೧ ಸಾವಿರ ಕೋಟಿ ಅನುದಾನ ಕಾಯ್ದಿರಿಸಲಾಗಿದೆ -₹ ೯೨೭ ಕೋಟಿ ವೆಚ್ಚದಲ್ಲಿ ಧಾರವಾಡ- ಕಿತ್ತೂರು- ಬೆಳಗಾವಿ ನೂತನ ರೈಲು ಮಾರ್ಗ ಯೋಜನೆ ತ್ವರಿತ ಅನುಷ್ಠಾನಕ್ಕೆ ಕ್ರಮಗೊಳ್ಳುವುದು -ಅಥಣಿ ತಾಲೂಕಿನಲ್ಲಿ ಕೃಷಿ ಕಾಲೇಜು ಸ್ಥಾಪಿಸುವುದು – ಎಸ್‌ಸಿ, ಎಸ್‌ಟಿ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಇತರೆ ವರ್ಗದ …

Read More »

ಹಣ ವಾಪಸ್ ಕೇಳಿದ್ದಕ್ಕೆ ಮಗನ ಜೊತೆ ಸೇರಿ, ಮಿಂಡನ ಮಟ್ಯಾಶ್…..!!!

ಕೊಲೆಯಾದ ವ್ಯೆಕ್ತಿ ಹಂತಕಿಯ ಚಿತ್ರಗಳು ಬೆಳಗಾವಿ- ಒಂದು ವಾರದ ಹಿಂದೆ ಬೆಳಗಾವಿ ಸಮೀಪದ ಬೆಳಗುಂದಿ ಗ್ರಾಮದಲ್ಲಿ ವ್ಯೆಕ್ತಿಯೊಬ್ಬನ ಹತ್ಯೆಯಾಗಿತ್ತು.ಈ ಹತ್ಯೆಯ ಕಹಾನಿ ಕೇಳಿದ್ರೆ ಎದೆ ಝಲ್ ಅಂತೈತಿ,ಇಬ್ಬರ ಜೊತೆ ಮದುವೆಯಾಗಿ,ಇಬ್ಬರ ಜೊತೆಯೂ ಜಗಳಾಡಿ,ಮೂರನೇಯ ಲೇಡಿಜೊತೆ ಲವ್ ಮಾಡಿದಾತ,ಮೂರನೇಯ ಲವ್ಬಿ ಡವ್ಹಿಗೆ ಬಲಿಯಾದ ಕರಾಳ ಕಹಾನಿ ಬೆಳಕಿಗೆ ಬಂದಿದೆ. ಕೊಲೆಯಾದ ವ್ಯೆಕ್ತಿ, ಹುಟ್ಟುರೂ ಬಿಟ್ಟು ಪಕ್ಕದ ಊರಿಗೆ ಬಂದು ಬೇಕರಿ ತಗೆದು ಜೀವನ ಸಾಗಿಸುತ್ತಿದ್ದ. ಎರಡು ಮದುವೆಯಾಗಿದ್ದ ಈತನ ಇಬ್ಬರೂ ಹೆಂಡತಿಯರು …

Read More »

ಆಮ್ ಆದ್ಮಿ ಪಾರ್ಟಿಯ, ಟೋಪಿ ಹಾಕಿಕೊಂಡ ರಾಜೀವ ಟೋಪಣ್ಣವರ….!!

ಬೆಳಗಾವಿ-ಕೆಜೆಪಿಯಿಂದ ರಾಜಕೀಯ ಕ್ಷೇತ್ರಕ್ಕೆ ಧುಮುಕಿ,ನಂತರ ಬಿಜೆಪಿ ಸೇರಿಕೊಂಡು,ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಗರಡಿಯಲ್ಲಿ ಪಳಗಿರುವ ಬೆಳಗಾವಿಯ ಸಂಘಟನಾ ಚತುರ ರಾಜೀವ ಟೋಪಣ್ಣವರ,ಅವರು ಇವತ್ತು ಬಿಜೆಪಿ ತೊರೆದು ಆಮ್ ಆದ್ಮಿ ಪಾರ್ಟಿ ಸೇರಿಕೊಂಡಿದ್ದಾರೆ. ಇಂದು ಬೆಂಗಳೂರಿನ ಆಮ್ ಆದ್ಮಿ ಕಚೇರಿಯಲ್ಲಿ, ಪಕ್ಷದ ಮುಖಂಡರ ಸಮ್ಮುಖದಲ್ಲಿ ರಾಜೀವ ಟೋಪಣ್ಣವರ ಅಧಿಕೃತವಾಗಿ ಆಮ್ ಆದ್ಮಿ ಪಾರ್ಟಿ ಸೇರಿಕೊಂಡಿದ್ದಾರೆ. ರಾಜೀವ ಟೋಪಣ್ಣವರ ಅವರ ಪಕ್ಷಾಂತರ, ಬೆಳಗಾವಿ ಜಿಲ್ಲೆಯಲ್ಲಿ ಬದಲಾವಣೆಯ ಪರ್ವಕ್ಕೆ ಚಾಲನೆ ನೀಡಿದಂತಾಗಿದೆ. ವಿಧಾನಸಭೆಯ …

Read More »

ಮಕ್ಕಳಾಗಲು ಆನ್ ಲೈನ್ ಅಭಿಷೇಕ ನಕಲಿ ಜ್ಯೋತಿಷ್ಯ ಅರೆಸ್ಟ್….

ದೋಷ ನಿವಾರಿಸುವದಾಗಿ ಹೇಳಿ ವಂಚಿಸಿದ ಜ್ಯೋತಿಷ್ಯ ಅರೆಸ್ಟ್….. ಬೆಳಗಾವಿ-ಆನ್ ಲೈನ್ ನಲ್ಲಿ ಯಾವ,ಯಾವ ರೀತಿಯಲ್ಲಿ ವಂಚಿಸುತ್ತಾರೆ ಎಂದು ಊಹಿಸಲೂ ಸಾಧ್ಯವಿಲ್ಲ.ಈಗ ಆನ್ ಲೈನ್ ಅಭಿಷೇಕ ಮಾಡಿಸುತ್ತೇವೆ. ಈ ಅಭಿಷೇಕ ಮಾಡಿದ ಬಳಿಕ ಮಕ್ಕಳಾಗುತ್ತವೆ,ಎಂದು ನಂಬಿಸಿ ಸಾವಿರಾರು ರೂ ಲಪಟಾಯಿಸಿದ ಭೂಪ ಪೋಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಭಟ್ ಹೆಸರಿನಲ್ಲಿ ಪಾಂಪ್ಲೆಟ್ ಮುದ್ರಿಸಿ ಎಲ್ಲ ದೋಷಗಳಿಗೆ ನಿವಾರಣೆ ಮಾಡುವ ವಿಧಾನ ನಮ್ಮಲ್ಲಿದೆ ಎಂದು ನಂಬಿಸಿ ಸಾವಿರಾರು ರೂ ಗಳನ್ನು ವಂಚಿಸಿದ ನಕಲಿ ಜ್ಯೋತಿಷ್ಯ …

Read More »

ಇಂದು ಸಂಜೆ ಗೋಕಾಕಿಗೆ ಸಿಎಂ….

ಬೆಳಗಾವಿ- ಗೋಕಾಕಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ, ಶರಣ ಸಂಸ್ಕೃತಿ ಉತ್ಸವ ನಡೆಯುತ್ತಿದೆ. ಇಂದು ಸಂಜೆ ಈ ಉತ್ಸವವನ್ನು ಸಿಎಂ ಇಬ್ರಾಹೀಂ ಉದ್ಘಾಟಿಸಲಿದ್ದಾರೆ. ಇಂದು ಮಧ್ಯಾಹ್ನ ಬೆಳಗಾವಿಗೆ ಆಗಮಿಸುವ ಸಿಎಂ ಇಬ್ರಾಹೀಂ, ಸಂಜೆ ಗೋಕಾಕಿಗೆ ತೆರಳಲಿದ್ದಾರೆ, ಗೋಕಾಕಿನ ಶೂನ್ಯ ಸಂಪಾದನ ಮಠ ಪ್ರತಿ ವರ್ಷ ಶರಣ ಸಂಸ್ಕೃತಿ ಉತ್ಸವ ನಡೆಸಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಮಾಡಿದ ಗಣ್ಯರಿಗೆ ಕಾಯಕ ಶ್ರೀ ಪ್ರಶಸ್ತಿ ನೀಡುತ್ತ ಬಂದಿದ್ದು ಈ ವರ್ಷದ ಕಾಯಕ ಶ್ರೀ …

Read More »

ಬೆಳಗಾವಿ ಜಿಲ್ಲೆಗೆ ಸಿಹಿ ಸುದ್ದಿ….ಜಿಲ್ಲೆಯಲ್ಲಿ ಮಹಾಮಾರಿ ಫಿನೀಶ್…!!

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಯ ಮೂರನೆಯ ಅಲೆ ಅಪ್ಪಳಿಸಿ ಈ ಅಲೆ ಈಗ ಜಿಲ್ಲೆಯಲ್ಲಿ ಸಂಪೂರ್ಣವಾಗಿ ನೆಲೆ ಕಳೆದುಕೊಂಡಿದೆ‌. ಇಂದು ಬುಧವಾರ ಬಿಡುಗಡೆಯಾದ ಬೆಳಗಾವಿ ಜಿಲ್ಲೆಯ ಹೆಲ್ತ್ ಬುಲಿಟೀನ್ ಜಿಲ್ಲೆಯ ಜನತೆಗೆ ಸಿಹಿ ಸುದ್ದಿ ನೀಡಿದೆ‌‌. ಬೆಳಗಾವಿ ಮಹಾನಗರದಲ್ಲಿ ಇವತ್ತು ಕೊರೋನಾ ರಿಪೋರ್ಟ್ ಬಿಗ್ ಝಿರೋ ಆದ್ರೆ ಜಿಲ್ಲೆಯಾದ್ಯಂತ ಕೇವಲ ನಾಲ್ಕು ಜನ ಸೊಂಕಿತರು ಮಾತ್ರ ಪತ್ತೆಯಾಗಿದ್ದಾರೆ. ಬೆಳಗಾವಿ ತಾಲ್ಲೂಕಿನಲ್ಲಿ ಝಿರೋ ಖಾನಾಪೂರ 1 ,ರಾಮದುರ್ಗ 1,ಚಿಕ್ಕೋಡಿ 1, ಗೋಕಾಕ್ …

Read More »

ಯುದ್ಧ ಪೀಡಿತ ಉಕ್ರೇನ್ ದಲ್ಲಿ ಬೆಳಗಾವಿ ಜಿಲ್ಲೆಯ ಇನ್ನೂ 17 ಜನ ಸಿಲುಕಿದ್ದಾರೆ.

ಬೆಳಗಾವಿ-ಯುದ್ದಪೀಡಿತ ಉಕ್ರೇನ್ ದೇಶಕ್ಕೆ ಮೆಡಿಕಲ್ ಶಿಕ್ಷಣ ಪಡೆಯಲು ಹೋಗಿದ್ದ ಬೆಳಗಾವಿ ಜಿಲ್ಲೆಯ ಇನ್ನೂ 17 ಜನ ಸಿಲುಕಿದ್ದಾರೆ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಅವರನ್ನು ಭೇಟಿಯಾದ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಉಕ್ರೇನ್‌ನಲ್ಲಿ ಬೆಳಗಾವಿಯ 19 ವಿದ್ಯಾರ್ಥಿಗಳು ಸಿಲುಕಿದ್ದು, ಇಬ್ಬರು ವಾಪಸ್ ಆಗಿದ್ದಾರೆ.ರಾಜ್ಯ ನೋಡಲ್ ಅಧಿಕಾರಿ ಡಾ.ಮನೋಜ್ ರಾಜನ್ ನಮಗೆ ಪಟ್ಟಿ ನೀಡಿದ್ದಾರೆ. ಆ ಪ್ರಕಾರ ಉಕ್ರೇನ್‌ನಲ್ಲಿ ಬೆಳಗಾವಿಯ 19 ವಿದ್ಯಾರ್ಥಿಗಳು ಇದ್ದರು. ಈಗಾಗಲೇ ಇಬ್ಬರು …

Read More »

ಬೆಳಗಾವಿಗೆ ಬಂತು ಗೋಲ್ಡ್ ಪ್ಲಸ್ ಗ್ಲಾಸ್ ಕಂಪನಿ…..

ಬೆಳಗಾವಿ- ಗ್ಲಾಸ್ ತಯಾರಿಕೆಯಲ್ಲಿ ದೇಶದಲ್ಲಿಯೇ ಎರಡನೇಯ ಅತೀ ದೊಡ್ಡ ಕಂಪನಿಯಾಗಿರುವ ಗೋಲ್ಡ್ ಪ್ಲಸ್ ಫ್ಲೋಟ್ ಗ್ಲಾಸ್ ಕಂಪನಿ ಈಗ ಸದ್ದಿಲ್ಲದೇ ಬೆಳಗಾವಿ ಜಿಲ್ಲೆಯಲ್ಲಿ ಗ್ಲಾಸ್ ಉತ್ಪಾದನಾ ಘಟಕದ ನಿರ್ಮಾಣದ ಕಾಮಗಾರಿ ಆರಂಭಿಸಿದೆ. ಬೆಳಗಾವಿ ಜಿಲ್ಲೆಯ ಗಡಿಯಲ್ಲಿರುವ ನಿಪ್ಪಾಣಿ ಬಳಿಯ ಕನಗಲಾ ಗ್ರಾಮದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕರ್ನಾಟಕ ಸರ್ಕಾರ ಈ ಕಂಪನಿಗೆ ಘಟಕ ಸ್ಥಾಪಿಸಲು 200 ಎಕರೆ ಜಮೀನು ನೀಡಿದೆ, ಇಲ್ಲಿ ಗೋಲ್ಡ್ ಪ್ಲಸ್ ಕಂಪನಿ ಘಟಕ ನಿರ್ಮಾಣದ ಕಾಮಗಾರಿಯನ್ನು ಆರಂಭಿಸಿದ್ದು …

Read More »

ಬೆಳಗಾವಿ ಕಾಂಗ್ರೆಸ್ ಅಂಗಳದಲ್ಲಿ ಭರವಸೆಯ “ಕಿರಣ”…!!!

ಬೆಳಗಾವಿ- ಬೆಳಗಾವಿ ಕಾಂಗ್ರೆಸ್ ಈಗ ಫುಲ್ ಆಕ್ಟೀವ್ ಆಗಿದೆ. ನಿನ್ನೆ ಸೋಮವಾರ ಸದ್ದಿಲ್ಲದೇ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸಭೆ ನಡೆಸಿದ ಬೆಳಗಾವಿಯ ಕಾಂಗ್ರೆಸ್ ಮುಖಂಡರು, ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಯುವ ಕಾಂಗ್ರೆಸ್ ಮುಖಂಡ ಕಿರಣ ಸಾಧುನವರ ಅವರ ಹೆಸರನ್ನು ಆಲ್ ಮೋಸ್ಟ್ ಫೈನಲ್ ಮಾಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ನೇತ್ರತ್ವದಲ್ಲಿ ನಿನ್ನೆ ಸೋಮವಾರ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸಭೆ ಸೇರಿದ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ …

Read More »

ಬೆಳಗಾವಿಗೆ ಗಡ್ಕರಿಯಿಂದ ಬಂಪರ್ ಲಾಟರಿ…..!!!

ಬೆಳಗಾವಿ, – ಕಿತ್ತೂರಿನಿಂದ ಬೆಳಗಾವಿ ಮೂಲಕ ಮಹಾರಾಷ್ಟ್ರ ಗಡಿಯವರೆಗಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ‌ಸಂಪೂರ್ಣವಾಗಿ ಜಲಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಬೆಳಗಾವಿ ಜಿಲ್ಲೆಯಿಂದ ಆರಂಭಿಸಲಾಗುವ ಈ ಯೋಜನೆಯನ್ನು ಮುಂಬರುವ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಅನುಷ್ಢಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ (ಫೆ‌28) ನಡೆದ ಒಟ್ಟು 3972 ಕೋಟಿ …

Read More »