Breaking News

LOCAL NEWS

ಮಾಸ್ಕ್ ಹಾಕೊಳ್ರಿ ಅಂದಿದ್ದಕ್ಕೆ ಕಿರಿಕ್ ಮಾಡಿದ ಡಾಕ್ಟರ್…..!!!

ಬೆಳಗಾವಿ- ಇವತ್ತು ವಿಕೆಂಡ್ ಕರ್ಫ್ಯು ,ಬೆಳ್ಳಂ ಬೆಳಿಗ್ಗೆ ಪೋಲೀಸರು ಅನಗತ್ಯವಾಗಿ ಸುತ್ತಾಡುವ,ವಾಹನಗಳನ್ನು,ಸೀಜ್ ಮಾಡುವದು,ಜೊತೆಗೆ ಹೆಲ್ಮೆಟ್, ಮಾಸ್ಕ ಹಾಕಿಕೊಳ್ಳದ ವಾಹನ ಸವಾರರಿಗೆ ದಂಡ ವಿಧಿಸುವ ಕಾರ್ಯಾಚರಣೆ ಶುರು ಮಾಡಿಕೊಂಡಿದ್ದರು. ಬೆಳಗಾವಿಯ ಚನ್ನಮ್ಮಾ ವೃತ್ತ ದಲ್ಲಿ ,ಮಾಸ್ಕ್ ಹಾಕಿಕೊಳ್ಳಿ ಅಂದಿದ್ದಕ್ಕೆ ವೈದ್ಯೆ ಪೋಲೀಸ್ ಅಧಿಕಾರಿಗಳಿಗೆ ಕಿರಿಕ್ ಮಾಡಿದ ಘಟನೆಯೂ ನಡೆಯಿತು. ಡಿಸಿಪಿ ಜತೆಗೆ ಕಿರಿಕ್ ಮಾಡಿದ ಡಾಕ್ಟರ್, ಕೆಲ ಹೊತ್ತು ಅಧಿಕಾರಿಗಳ ಜೊತೆಗೆ ವಾಗ್ವಾದ ಮಾಡಿದ್ರು. ಕಾರಿನಲ್ಲಿ ಮಾಸ್ಕ್ ಹಾಕದೇ ಹೋಗುತ್ತಿದ್ದ ವೈದ್ಯೆ …

Read More »

ಕಾಶ್ಮೀರದ ಕಣಿವೆಯಾದ ಕುಂದಾನಗರಿ…..!!!

ಬೆಳಗಾವಿ- ಸಂಜೆಯಾದ್ರೆ ಸಾಕು ಬೆಳಗಾವಿಯ ಜನ ಮನೆ ಸೇರಿಕೊಳ್ಳುತ್ತಿದ್ದಾರೆ,ಯಾಕಂದ್ರೆ ಸೂರ್ಯ ಮುಳುಗುತ್ತಿದ್ದಂತೆಯೇ ಚಳಿಯ ಆಟ ಇಲ್ಲಿ ಶುರುವಾಗುತ್ತೆ,ಮೈಕೊರೆಯುವ ಈ ಚಳಿ ಬೆಳಗಾವಿಯ ನಿವಾಸಿಗಳನ್ನು ತಲ್ಲಣಗೊಳಿಸಿದೆ. ಬೆಳಿಗ್ಗೆ ಸೂರ್ಯ ಉದಯವಾಗುವ ಮೊದಲು ಮನೆಯಿಂದ ಹೊರಗೆ ಬಂದ್ರೆ, ಪಕ್ಕದ ಮನೆ ಕಾಣಿಸುವದೇ ಇಲ್ಲ,ಯಾಕಂದ್ರೆ ಎಲ್ಲಿ ನೋಡಿದಲ್ಲಿ ದಟ್ಟವಾದ ಮಂಜು ಕಾಣಿಸುತ್ತದೆ,ಬೆಳಗಿನ ವಾತಾವರಣ ನೋಡಿದ್ರೆ ಬೆಳಗಾವಿ ಕಾಶ್ಮೀರದ ಕಣಿವೆಯ ಸ್ವರೂಪ ಪಡೆದಿರುವದು ಸ್ಪಷ್ಟವಾಗಿ ಕಾಣಿಸುತ್ತದೆ. ಈ ವರ್ಷದ ಚಳಿ,ಮತ್ತು ದಟ್ಟವಾದ ಮಂಜು ಕುಂದಾನಗರಿ ಬೆಳಗಾವಿಗೆ …

Read More »

ಗೋವಾದಲ್ಲೂ ಜಾರಕಿಹೊಳಿ ಸಾಹುಕಾರ್ ತಂತ್ರ…

ಎಐಸಿಸಿ ಗೋವಾ ಉಸ್ತುವಾರಿ ದಿನೇಶ್‌ ಗೂಂಡುರಾವ್‌ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ದತಾ ಸಭೆ ಗೋವಾ ಚುನಾವಣೆ; ಕಾಂಗ್ರೆಸ್‌ ಗೆಲುವಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ರಣತಂತ್ರ ಪಣಜಿ: ಬೆಳಗಾವಿ ಜಿಲ್ಲೆಯಲ್ಲಿ ವಿಧಾನ ಪರಿಷತ್‌, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಣತಂತ್ರ ಹೆಣದು ಗೆಲುವು ಸಾಧಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಈಗ ಗೋವಾ ವಿಧಾನಸಭೆ ಚುನಾವಣೆಯಲ್ಲೂ” ಕೈ” ಗೆಲುವಿಗೆ ರಣತಂತ್ರ ರೂಪಿಸಿ, ಅವರ ನೇತೃತ್ವದ ತಂಡ ರಚಿಸಿದ್ದಾರೆ. ಎಐಸಿಸಿ ಗೋವಾ ವೀಕ್ಷಕ ಸುನೀಲ್‌ ಹಣಮನವರ್‌, …

Read More »

ನಾಳೆಯಿಂದ ಒಂದು ವಾರ ಮತ್ತೆ ಶಾಲೆಗಳು ಬಂದ್..

ಬೆಳಗಾವಿ- ವಸತಿ ಶಾಲೆಯ ಮಕ್ಕಳಲ್ಲಿ ಕೋವೀಡ್ ಸೊಂಕು ಹರಡುತ್ತಿರುವ ಹಿನ್ನಲೆಯಲ್ಲಿ ತುರ್ತು ಸಭೆ ನಡೆಸಿದ ಬೆಳಗಾವಿ ಜಿಲ್ಲಾಧಿಕಾರಿಗಳು ನಾಳೆಯಿಂದ ಒಂದು ವಾರ ಶಾಲೆಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸೊದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು ನಾಳೆ ದಿನಾಂಕ 11 ರಿಂದ 18 ರವರೆಗೆ 1ನೇಯ ತರಗತಿಯಿಂದ 9 ತರಗತಿಗಳನ್ನು ಬಂದ್ ಮಾಡುವಂತೆ ಬೆಳಗಾವಿ ಡಿಸಿ ಆದೇಶ ಹೊರಡಿಸಿದ್ದಾರೆ.ಈ ಆದೇಶ ವಸತಿ ಶಾಲೆಗಳಿಗೂ ಅನ್ವಯಿಸುತ್ತದೆ.

Read More »

ಬಂಡಾಯʼಕ್ಕೆ ಇನ್ನೊಂದು ಹೆಸರು – ಪ್ರೀತಿಯ  ‘ಚಂಪಾʼ

*’ಬಂಡಾಯʼಕ್ಕೆ ಇನ್ನೊಂದು ಹೆಸರು – ಮನುಷ್ಯ ಪ್ರೀತಿಯ  ‘ಚಂಪಾʼ* *( ಪ್ರೀತಿಯ ಗುರುಗಳಿಗೆ ನಮನಗಳು)* *ʼಬಂಡಾಯʼ* ಎಂದಾಗ ಥಟ್ಟನೆ ಎದುರಾಗುವ ಸಾಂಸ್ಕೃತಿಕ ವ್ಯಕ್ತಿತ್ವ *’ಚಂಪಾ’* ಕನ್ನಡ ಅಸ್ಮಿತೆಯ ಜನಪರ ಸಾಂಸ್ಕೃತಿಕ ಧ್ವನಿ ಒಂದುಕಾಲಕ್ಕೆ ಧಾರವಾಡದಿಂದ ಪುಟಿದೆದ್ದು ನಾಡಿನ ತುಂಬಾ ಅನುರಣಿಸುತ್ತಿತ್ತು. ಇಂದು ಈ ಧ್ವನಿ ಬೆಂಗಳೂರಿನಲ್ಲಿ ದೈಹಿಕವಾಗಿ ಅಸ್ತಂಗತವಾಗಿದೆ. ಆದರೆ, ಆ ಧ್ವನಿಯಿಂದ ಹೊರಟ ಪ್ರತಿಧ್ವನಿ ಅಲೆಗಳು ನಮ್ಮ ಮಧ್ಯ ಧ್ವನಿ ಮಾಡುತ್ತಿವೆ. ಕನ್ನಡ ಸಾಂಸ್ಕೃತಿಕ ಲೋಕದ ಜೀವಪರ ಚಂಪಾ ಎಂಬ ಅಗಮ್ಯೆ …

Read More »

ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ರಶೀದ್ ನೇಮಕ..

ಬೆಳಗಾವಿ-ಬ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ವಿಂಗ್ ಸಂಘಟನೆಯ. ಬೆಳಗಾವಿ ಜಿಲ್ಲಾಧ್ಯಕ್ಷರನ್ನಾಗಿ ಗೋಕಾಕಿನ ರಶೀದ್ ಮಕಾನದಾರ ಅವರನ್ನು ನೇಮಕ ಮಾಡಲಾಗಿದೆ. ಈ ಸಂಘಟನೆಯ ಸಂಸ್ಥಾಪಕ, ರಾಜ್ಯಾಧ್ಯಕ್ಷೆ ವಿಜಯಲಕ್ಷ್ಮಿ ಧಾರವಾಡಕರ ಅವರು ರಶೀದ್ ಮಕಾನದಾರ್ ಅವರನ್ನು ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ವಿಂಗ್ ಸಂಘಟನೆಯ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದು ಬೆಳಗಾವಿ ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಗೊಳಿಸುವದರ ಜೊತೆಗೆ ಜಿಲ್ಲೆಯಲ್ಲಿ ಬ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸುವಂತೆ ಸೂಚಿಸಲಾಗಿದೆ. ರಶೀದ್ ಮಕಾನದಾರ ಅವರು …

Read More »

ಬೆಳಗಾವಿಯ ಖಾಸಗಿ ಆಸ್ಪತ್ರೆಗಳಿಗೆ ಡಿಸಿ ವಾರ್ನಿಂಗ್…!!

ಕೋವಿಡ್ ನಿರ್ವಹಣೆ: ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಸಭೆ ಸರಕಾರದ‌ ಮಾರ್ಗಸೂಚಿ ಪ್ರಕಾರ ಬೆಡ್ ಹಾಗೂ ಚಿಕಿತ್ಸೆ ಒದಗಿಸಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ ಬೆಳಗಾವಿ,- ಕೋವಿಡ್ ಮೂರನೇ ಅಲೆ ಸಂದರ್ಭದಲ್ಲಿ ನೋಂದಾಯಿತ ಎಲ್ಲ ಖಾಸಗಿ ಆಸ್ಪತ್ರೆಗಳು ಸರಕಾರದ ಮಾರ್ಗಸೂಚಿ ಪ್ರಕಾರ ಶೇ.50 ರಷ್ಟು ಬೆಡ್ ಗಳನ್ನು ಒದಗಿಸುವುದರ ಜತೆಗೆ ನಿಗದಿಪಡಿಸಿದ ದರದಲ್ಲಿ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದರು. ಸಂಭವನೀಯ …

Read More »

ಪಂಚ ರಾಜ್ಯಗಳಲ್ಲಿ ಚುನಾವಣೆ ಘೋಷಣೆ

ಕೊರೊನಾ ಮಹಾಮಾರಿ ನಡುವೆಯೂ 5 ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ ಮಾಡಿದ ಚುನಾವಣಾ ಆಯೋಗ ದೆಹಲಿ : ದೇಶದಲ್ಲಿ ಮತ್ತೆ ಕೊರೊನಾ ಮಹಾಮಾರಿಯ ಆರ್ಭಟ ತಾರಕಕ್ಕೇರಿದೆ. ಈ ನಡುವೆ ಕೇಂದ್ರ ಚುನಾವಣಾ ಆಯೋಗ 5 ರಾಜ್ಯಗಳಿಗೆ ಸಂಬಂಧಿಸಿ ಚುನಾವಣಾ ದಿನಾಂಕವನ್ನು ನಿಗದಿಗೊಳಿಸಿದೆ. ದೇಶದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ, ಮಣಿಪುರ ರಾಜ್ಯಗಳ ವಿಧಾನ ಸಭಾ ಚುನಾವಣೆ ದಿನಾಂಕ ಇಂದು ಘೋಷಣೆ ಆಗಿದೆ. ದೆಹಲಿಯಲ್ಲಿ ಕೇಂದ್ರ …

Read More »

ಬೆಳಗಾವಿಯಲ್ಲಿ ಶತಕ ಬಾರಿಸಿದ ಕೊರೋನಾ..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕು ಅತೀ ವೇಗವಾಗಿ ಹರಡುತ್ತಿದ್ದು,ಇವತ್ತು ಒಂದೇ ದಿನ 114 ಜನ ಸೊಂಕಿತರು ಪತ್ತೆಯಾಗಿದ್ದಾರೆ. ಸರ್ಕಾರ ರಾಜ್ಯದಲ್ಲಿ ವಿಕೆಂಡ್ ಕರ್ಫ್ಯು ಜಾರಿ ಮಾಡಿದ ಬೆನ್ನಲ್ಲಿಯೇ ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಸಂಚ್ಯುರಿ ಬಾರಿಸಿದ್ದು ಬೆಳಗಾವಿ ಜಿಲ್ಲಾಡಳಿತ ವಿಕೆಂಡ್ ಕರ್ಫ್ಯು ಕಟ್ಟು ನಿಟ್ಟಾಗಿ ಜಾರಿ ಮಾಡಲಿದೆ. ಇಂದು ಶುಕ್ರವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಕರ್ಫ್ಯು ಜಾರಿಯಲ್ಲಿದ್ದು ಪೋಲೀಸರು ನಗರದಲ್ಲಿ …

Read More »

ಬೆಳಗಾವಿ ಜಿಲ್ಲೆಯ ಒಂಬತ್ತು ದೇವಸ್ಥಾನಗಳು ಬಂದ್….

ಬೆಳಗಾವಿ- ಕೋವೀಡ್ ಸೊಂಕು ರಾಜ್ಯದಲ್ಲಿ ಅತೀ ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಟಫ್ ರೂಲ್ಸ್ ಗಳನ್ನು ಜಾರಿಗೆ ತಂದಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಒಂಬತ್ತು ಪ್ರಮುಖ ದೇವಸ್ಥಾನಗಳು ಅನಿಗದಿತ ಅವಧಿಯವರೆಗೆ ಬಂದ್ ಆಗಿವೆ. ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ,ಚಿಂಚಲಿ ಮಾಯಕ್ಕ ರಾಮದುರ್ಗದ ವೀರಭದ್ರೇಶ್ವರ, ಹೊಳೆಮ್ಮಾ,ದೇವಸ್ಥಾನ ಸೇರಿದಂತೆ ಒಟ್ಟು ಒಂಬತ್ತು ದೇವಸ್ಥಾನಗಳಲ್ಲಿ ಸಾರ್ವಜನಿಕರ ದರ್ಶನ ನಿಷೇಧಿಸಿ ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಸವದತ್ತಿ ಯಲ್ಲಮ್ಮನ ದೇವಸ್ಥಾನ ಕ್ಕೆ ಸಂಕ್ರಾಂತಿ ಹಬ್ಬದ …

Read More »

ಬೆಳಗಾವಿ ಕೈ ತಪ್ಪಿದ ಮತ್ತೊಂದು ಮಹತ್ವದ ಕೇಂದ್ರ

ಕೇಂದ್ರ ಸರ್ಕಾರ ಬೆಳಗಾವಿ ಹಾಗೂ ಕಲಬುರಗಿಯಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಆರಂಭಿಸುವುದಾಗಿ ಹೇಳಿತ್ತು. ಇದೀಗ ಬೆಳಗಾವಿ ಬದಲು ಹುಬ್ಬಳ್ಳಿಗೆ ಆದ್ಯತೆ ನೀಡಿದೆ. ಈ ಮೂಲಕ ಬೆಳಗಾವಿಗೆ ಮತ್ತೊಮ್ಮೆ ಘೋರ ಅನ್ಯಾಯ ಆಗಿದೆ. ಬೆಳಗಾವಿಗೆ ಆಗುತ್ತಿರುವ ಅನ್ಯಾಯದ ಪರಮಾವಧಿ ಇದಾಗಿದೆ. ಹಿಂದೆಯೂ ವಿಭಾಗೀಯ ಕೇಂದ್ರ ಬೆಳಗಾವಿಗೆ ಬರಬೇಕಿದ್ದ ಅನೇಕ ಯೋಜನೆಗಳು ಹುಬ್ಬಳ್ಳಿ ಧಾರವಾಡ ಪಾಲಾಗಿದ್ದವು. ಇದೀಗ ಈ ಪಟ್ಟಿಗೆ ವಿಮಾನ ಚಾಲನಾ ತರಬೇತಿ ಕೇಂದ್ರ ಹೊಸ ಸೇರ್ಪಡೆ ಆದಂತಾಗಿದೆ. ಬೆಳಗಾವಿ …

Read More »

VTU ಯುನಿವರ್ಸಿಟಿ, ಐಐಎಸ್ಸಿ ಮತ್ತು ಐಐಟಿಗಳ ಮಟ್ಟಕ್ಕೆ ಬೆಳೆಸಲು ಯೋಜನೆ…

`5 ವರ್ಷಗಳಲ್ಲಿ 400 ಶತಕೋಟಿ ಡಾಲರ್ ಡಿಜಿಟಲ್ ಆರ್ಥಿಕತೆಯ ಗುರಿ’ *ಬೆಳಗಾವಿ ಸಿಇಒ ಶೃಂಗಸಭೆಯಲ್ಲಿ ಸಚಿವ ಡಾ.ಅಶ್ವತ್ಥನಾರಾಯಣ* ಬೆಳಗಾವಿ: ರಾಜ್ಯದ ಎಲ್ಲ ಭಾಗಗಳಲ್ಲೂ ಸಮಾನವಾಗಿ ಉದ್ಯಮಗಳನ್ನು ಬೆಳೆಸುವ ಮೂಲಕ ಮುಂದಿನ ಐದು ವರ್ಷಗಳಲ್ಲಿ 400 ಶತಕೋಟಿ ಡಾಲರ್ ಮೌಲ್ಯದ ಡಿಜಿಟಲ್ ಆರ್ಥಿಕತೆಯನ್ನು ಬೆಳೆಸುವ ಗುರಿಯನ್ನು ಸರಕಾರ ಇಟ್ಟುಕೊಂಡಿದೆ ಎಂದು ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆ-ಡಿಇಎಂ) `ಬಿಯಾಂಡ್ ಬೆಂಗಳೂರು’ …

Read More »

Saturday & sunday lockdown….night curfew extend two weekks

Government has extended night curfew for two more weeks. Weekend curfew will be implemented for two weeks. Marriages in open air venue can have 200 attendence and those indoor 100 attendance. All attending marriages should be vaccinated. All kind of protests and demonstrations banned for two weeksSchool r close only …

Read More »

ಬೆಳಗಾವಿಯಲ್ಲಿ ಮತ್ತೆ ಸೊಂಕಿತರ ಸಂಖ್ಯೆ ಜಾಸ್ತಿ…!!

ಬೆಳಗಾವಿ- ಕೊರೋನಾ ಅಟ್ಟಹಾಸಕ್ಕೆ ಮತ್ತೆ ಗಡಿನಾಡು ಗುಡಿ ಬೆಳಗಾವಿ ಜಿಲ್ಲೆ ಗಡಗಡಾ ಅಂತ ನಡುಗುತ್ತಿದೆ ಯಾಕಂದ್ರೆ ಇವತ್ತು ಏಕಾ ಏಕಿ ಒಂದೇ ದಿನ ಜಿಲ್ಲೆಯಲ್ಲಿ 45 ಜನ ಸೊಂಕಿತರು ಪತ್ತೆಯಾಗಿದ್ದಾರೆ. ಇಂದು ಸಂಜೆ ಬಿಡುಗಡೆಯಾದ ಹೆಲ್ತ್ ಬುಲಿಟೀನ್ ಜಿಲ್ಲೆಯ ಜನರ ನಿದ್ದೆಗೆಡಿಸಿದೆ.ಬೆಳಗಾವಿ ನಗರ, ಮತ್ತು ತಾಲ್ಲೂಕಿನಲ್ಲಿ 36 ಜನ ಸೊಂಕಿತರು ಪತ್ತೆಯಾಗಿದ್ದು ಆತಂಕಕಾರಿ ಬೆಳವಣಿಗೆ ಆಗಿದೆ. ಕರ್ನಾಟಕ,ಗೋವಾ,ಮತ್ತು ಮಹಾರಾಷ್ಟ್ರ ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವ ಬೆಳಗಾವಿ ನಗರದಲ್ಲಿ ಕೊರೋನಾ ಸೊಂಕಿನ ತಾಂಡವ …

Read More »

ಈ ವಿಚಾರದಲ್ಲೂ ಬೆಳಗಾವಿ ರಾಜ್ಯದಲ್ಲೇ ನಂ 1

ಬೆಳಗಾವಿ- ಸರ್ಕಾರದ ಕಾರ್ಯಕ್ರಮ ಯಾವುದೇ ಇರಲಿ ಅದನ್ನು ದಾಖಲೆ ಪ್ರಮಾಣದಲ್ಲಿ ಬೆಳಗಾವಿ ಜಿಲ್ಲಾಡಳಿತ ಅನುಷ್ಠಾನಗೊಳಿಸುತ್ತ ಬಂದಿದ್ದು, ಈಗ ಮಕ್ಕಳಿಗೆ ವ್ಯಾಕ್ಸೀನ್ ಕೊಡುವ ವಿಚಾರದಲ್ಲೂ ಬೆಳಗಾವಿ ಜಿಲ್ಲೆ ರಾಜ್ಯದಲ್ಲೇ ದಾಖಲೆ ಮಾಡಿದ್ದು ನಂಬರ್ ಒನ್ ಸ್ಥಾನ ಪಡೆದಿದೆ. 15 ರಿಂದ 18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡುವ ವಿಚಾರದಲ್ಲಿ,ಮಕ್ಕಳ ಲಸಿಕಾಕರಣ ಅಭಿಯಾನದಲ್ಲಿ ಬೆಳಗಾವಿ ಜಿಲ್ಲಾಡಳಿತ ದಾಖಲೆ ಮಾಡಿದ್ದು,ಮಕ್ಕಳ ಲಸಿಕಾಕರಣ ಅಭಿಯಾನಕ್ಕೆ ಬೆಳಗಾವಿಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. *ನಿನ್ನೆ ಒಂದೇ ದಿನ …

Read More »