Breaking News

LOCAL NEWS

ಮತ ಚಲಾಯಿಸಿದ 107 ವಯಸ್ಸಿನ ಅಜ್ಜಿ…

ಬೆಳಗಾವಿ-ಗೋಕಾಕ್ ನ ನಂದಗಾಂವ ಗ್ರಾಮದಲ್ಲಿ ಮತದಾನ ಮಾಡಿದ 107ರ ಅಜ್ಜಿ ಎಲ್ಲರ ಗಮನ ಸೆಳೆದರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡಲು,ಬಾಳವ್ವ ಮುಗದುಮ್ಮ ತಮ್ಮ ಕುಟುಂಬದವರ ಸಹಾಯದಿಂದ ಮತದಾನ ಮಾಡಿದ ಶತಾಯುಷಿ ಅಜ್ಜಿ,ತಮ್ಮ ಹಕ್ಕು ಚಲಾಯಿಸಿದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಮತದಾನ ಮಾಡಿದ ಅಜ್ಜಿ ಕುಟುಂಬಸ್ಥರ ಸಹಾಯದಿಂದ ಮತಕೇಂದ್ರಕ್ಕೆ ಆಗಮಿಸಿ ಮತದಾನ ಮಾಡುವ ಮೂಲಕ ಎಲ್ಲಲ ಗಮನ ಸೆಳೆದರು.

Read More »

ಲೋಕಲ್ ವಾರ್…ಮತಗಟ್ಟೆಯ ಅಧಿಕಾರಿ ಬಳಿ ರಿವಾಲ್ವರ್….!!

ಬೆಳಗಾವಿ – ಗ್ರಾಮ ಪಂಚಾಯತಿ ಚುನಾವಣೆಗೆ ಮೊದಲ ಹಂತದ ಮತದಾನ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿದೆ.ಬೆಳಗಾವಿ ಪಕ್ಕದ ದೇಸೂರ ಗ್ರಾಮದ ಮತಗಟ್ಟೆಯಲ್ಲಿ ನಡೆಯಬಾರದ ಘಟನೆ ನಡೆದಿದೆ ಮತಗಟ್ಟೆಯಲ್ಲಿ ಚುನಾವಣೆಯ ಡ್ಯುಟಿಗೆ ನಿಯೋಜನೆಗೊಂಡ ಅಧಿಕಾರಿಯ ಬಳಿ ರಿವಾಲ್ವರ್ ಪತ್ತೆಯಾಗಿದೆ. ಗ್ರಾಪಂ ಚುನಾವಣೆಯ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಬಳಿ ಪಿಸ್ತೂಲ್ ಪತ್ತೆಯಾಗಿದ್ದು, ಪೊಲೀಸರು ಪರೀಶಿಲನೆ ನಡೆಸುತ್ತಿದ್ದಾರೆ. ಬೆಳಗಾವಿ ತಾಲೂಕಿನ ದೇಸೂರ ಗ್ರಾಮದಲ್ಲಿ ಮತಗಟ್ಟೆಗೆ ನಿಯೋಜನೆಯಾಗಿದ್ದ ಅಧಿಕಾರಿ ಬಳಿ ಲೋಡೆಡ್ ಇರುವ ಪಿಸ್ತೂಲ್ ಇರುವುದನ್ನು ಗಮನಿಸಿದ …

Read More »

ಬಾಸ್ ಜೊತೆ ಮತಗಟ್ಟೆಗೆ ಆಗಮಿಸಿದ ಡಾಗ್….!!!

ಬೆಳಗಾವಿ- ಬೆಳ್ಳಂ ಬೆಳಗ್ಗೆ ಮತದಾನ ಶುರುವಾಯಿತು,ಮತ ಚಲಾಯಿಸಲು ಎಲ್ಲರೂ ಸರದಿಯಲ್ಲಿ ನಿಂತರು.ಬಾಸ್ ಜೊತೆ ಮತಗಟ್ಟೆಗೆ ಆಗಮಿಸಿದ ಶ್ವಾನವೊಂದು ಎಲ್ಲರ ಗಮನ ಸೆಳೆಯಿತು ಮಾಲೀಕನ ಜೊತೆ ಮತದಾನಕ್ಕಾಗಿ ಮತಗಟ್ಟೆಗೆ ಆಗಮಿಸಿದ ಶ್ವಾನದ ಹೆಸರು ಶಿರೂ.ಮತಗಟ್ಟಿಯ ಎದುರು ನಿಂತಿದ್ದ ಸರದಿಯಲ್ಲಿ ನಾಯಿ ಅಂತಿದಿತ್ತ ಓಡಾಡುತ್ತಲೇ ಇತ್ತು.ಈ ದೃಶ್ಯ ಕಂಡು ಬಂದಿದ್ದು ಬೆಳಗಾವಿ ತಾಲೂಕಿನ ಕೆಎಚ್ ಕಂಗ್ರಾಳಿ ಮತಗಟ್ಟೆಯಲ್ಲಿ ಈ ಅಪರೂಪದ ಘಟನೆ ನಡೆದಿದ್ದು ಕಂಗ್ರಾಳಿ ಗ್ರಾಮದಲ್ಲಿ. ಜಿನ್ನಪ್ಪ ಮಾನೆ ಎಂಬುವವರ ಸಾಕು ನಾಯಿ …

Read More »

ಆಕರ್ಷಕ ಪ್ರಬಂಧ ಬರೆದವರಿಗೆ ಹೆಲಿಕಾಪ್ಟರ್ ವಿಹಾರ…!!!

ಬೆಳಗಾವಿ-ಸತೀಶ್ ಶುಗರ್ಸ್ ಅವಾರ್ಡ್ ಕಾರ್ಯಕ್ರಮದ ಮೂಲಕ ಸಾಂಸ್ಕೃತಿಕ ಲೋಕದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟು,ಗ್ರಾಮೀಣ ಪ್ರತಿಭೆಗಳು ಬೆಳಕಿಗೆ ಬರಲು ವೇದಿಕೆ ಕಲ್ಪಿಸಿಕೊಟ್ಟಿರುವ ಆದರ್ಶ ರಾಜಕಾರಣಿ, ಸತೀಶ್ ಜಾರಕಿಹೊಳಿ ಅವರು ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಪ್ರಬಂಧ ಸ್ಪರ್ದೆ ಏರ್ಪಡಿಸಿ ,ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ಕೊಡುವದು ಸಂಪ್ರದಾಯ,ಆದ್ರೆ ಸತೀಶ್ ಜಾರಕಿಹೊಳಿ ಸಾರಥ್ಯದ ಮಾನವ ಬಂಧುತ್ವ ವೇದಿಕೆ ಈ ವಿಚಾರದಲ್ಲಿ ವಿನೂತನವಾದ,ಆಕರ್ಷಕವಾದ,ಮೌಲ್ಯಾಧಾರಿತ ಸಂಪ್ರದಾಯವನ್ನು ಶುರು ಮಾಡಿದ್ದಾರೆ. ಹೊಸ ವರ್ಷ,ಹೊಸ ಯೋಜನೆ ,ಹೊಸ ಆಲೋಚನೆಯೊಂದಿಗೆ ಸತೀಶ್ ಜಾರಕಿಹೊಳಿ …

Read More »

ಹೊಡೀ ಶಿಕ್ಕಾ ಆಮ್ಯಾಲ ಕೇಳ ಲೆಕ್ಕಾ…ನೋಡಬ್ಯಾಡ ರೊಕ್ಕಾ…!!!

ಬೆಳಗಾವಿ ಜಿಲ್ಲೆಯಲ್ಲಿ ನಾಳೆ ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆ ನಡೆಯಲಿದೆ.ತಪ್ಪದೇ ಎಲ್ಲರೂ ಮತದಾನ ಮಾಡುವ ಮೂಲಕ ಎಲ್ಲ ಮತದಾರರು ತಮ್ಮ ಹಕ್ಕು ಚಲಾಯಿಸಿ,ಸಾಮಾಜಿಕ ಕಳಕಳಿ ಹೊಂದಿರುವ ಪ್ರಾಮಾಣಿಕ ಅಭ್ಯರ್ಥಿಯನ್ನು ಗೆಲ್ಲಿಸಿ.ಚುನಾವಣೆಯಲ್ಲಿ ಹಣ,ಹೆಂಡದ ಆಮೀಷಕ್ಕೆ ಒಳಗಾಗದೇ ಪ್ರಾಣಿಕರನ್ನು ಆಯ್ಕೆ ಮಾಡಿ… ಅಕ್ಕಾ..ಕಾಕಾ..ಯಪ್ಪಾ ತಮ್ಮಾ..ಹೊಡೀ ಶಿಕ್ಕಾ,ನೋಡಬ್ಯಾಡ ರೊಕ್ಕಾ…!!!! ಎರಡನೇ ಹಂತದ ಚುನಾವಣೆ: ಸವದತ್ತಿ, ರಾಮದುರ್ಗಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಭೇಟಿ ಬೆಳಗಾವಿ, – :ಎರಡನೇ ಹಂತದಲ್ಲಿ‌ ಗ್ರಾಮ‌ ಪಂಚಾಯತಿ ಚುನಾವಣೆ ನಡೆಯಲಿರುವ ರಾಮದುರ್ಗ …

Read More »

ಹಿರಿಯ ಪತ್ರಕರ್ತ. ರಾಘವೇಂದ್ರ ಜೋಶಿ ಇನ್ನಿಲ್ಲ!

ಬೆಳಗಾವಿ-ಇಂದು ಸೋಮವಾರ ಮುಂಜಾನೆವಾಕಿಂಗ್ ಮುಗಿಸಿ ಮನೆಗೆ ಮರಳುತ್ತಲೇಕುಸಿದು ಬಿದ್ದ ಅವರು ಹೃದಯಾಘಾತದಿಂದಕೊನೆಯುಸಿರೆಳೆದರು.ಅವರಿಗೆಇದೇ ಡಿಸೆಂಬರ್ 8 ರಂದು 78 ವರ್ಷವಯಸ್ಸಾಗಿತ್ತು. ರಾಘವೇಂದ್ರ ಜೋಶಿ ಅವರು ತಮ್ಮ ಹಿಂದೆ ಪತ್ನಿ, ಇಬ್ಬರು ಪುತ್ರರು ಓರ್ವ ಪುತ್ರಿ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಬೆಳಗಾವಿಯ ಭಾಗ್ಯ ನಗರದ ಏಳನೇ ಕ್ರಾಸ್ ನಲ್ಲಿ ಜೋಶಿಯವರ ಮನೆಯಿದ್ದು ಸಂಜೆ 5 ಗಂಟೆಗೆ ಹಿಂದವಾಡಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Read More »

ಕಳ್ಳನೆಂದು ಭಾವಿಸಿ,ಹಲ್ಲೆ ಮಾಡಿ, ಮರ್ಡರ್….

ಬೆಳಗಾವಿ- ಈಗ ಗ್ರಾಮ ಪಂಚಾಯತಿ ಚುನಾವಣೆ, ಎಲ್ಲ ಕಡೆ ಮಟನ್ ಪಾರ್ಟಿ,ಚಿಕನ್ ಪಾರ್ಟಿಗಳು ನಡೆಯುತ್ತಿವೆ‌.ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯೆಕ್ತಿಯೊಬ್ಬನನ್ನು ಕಳ್ಳನೆಂದು ಭಾವಿಸಿ ಆತನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಮಾರಿಹಾಳ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆನಂದ ಮಾರುತಿ ಕೋಲಕಾರ (58) ಎಂಬಾತ ಮೂಲತಹ ಮುಚ್ಚಂಡಿ ಗ್ರಾಮದವನಾಗಿದ್ದು ಈತ ಧಾಭಾದಲ್ಲಿ ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿರುವಾಗ ಖನಗಾಂವ ಗ್ರಾಮದ ಹದ್ದಿಯಲ್ಲಿ ಇತನನ್ನು ಕಳ್ಳನೆಂದು ಭಾವಿಸಿ,ಈತನ ಮೇಲೆ …

Read More »

ಬೆಳಗಾವಿ ಜಿಲ್ಲೆಯಲ್ಲಿ ಕ್ರಿಟಕಲ್ ಮತ್ತು ನಾನ್ ಕ್ರಿಟಿಕಲ್ ಮತಗಟ್ಟೆಗಳು ಎಷ್ಟು ಗೊತ್ತಾ..?

ಬೆಳಗಾವಿ ಜಿಲ್ಲೆಯಲ್ಲಿ 22.12.2020 ರಂದು ಹಾಗೂ 27.12.2020 ರಂದು ನಡೆಯಲಿರುವ ಪ್ರಥಮ ಹಾಗೂ ದ್ವೀತಿಯ ಹಂತದ ಗ್ರಾಮ ಪಂಚಾಯತಿ ಚುನಾವಣೆಯ ಮತದಾನ ನಡೆಯಲಿದ್ದು,ಜಿಲ್ಲೆಯಲ್ಲಿ ಬಿಗಿ ಪೋಲೀಸ್ ಬಂದೋಬಸ್ತಿಯನ್ನು ನಿಯೋಜಿಸಲಾಗಿದೆ. ಪ್ರಥಮ ಹಂತದಲ್ಲಿ ಖಾನಾಪೂರ, ಹುಕ್ಕೇರಿ, ಬೈಲಹೊಂಗಲ, ಕಿತ್ತೂರ ಗೋಕಾಕ ಹಾಗೂ ಮೂಡಲಗಿ ತಾಲೂಕಾ ವ್ಯಾಪ್ತಿಗಳಲ್ಲಿ, ಅದೇ ರೀತಿಯಾಗಿ ದ್ವಿತೀಯ ಹಂತದಲ್ಲಿ ಸವದತ್ತಿ, ರಾಮದುರ್ಗ, ಚಿಕ್ಕೋಡಿ, ನಿಪ್ಪಾಣಿ, ಅಥಣಿ, ಕಾಗವಾಡ ಮತ್ತು ರಾಯಬಾಗ ತಾಲೂಕಾ ವ್ಯಾಪ್ತಿಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಯಲಿದ್ದು.ಅದಕ್ಕಾಗಿ …

Read More »

ಚುನಾವಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ-ಡಿಸಿ

ಬೆಳಗಾವಿ, – ಜಿಲ್ಲೆಯ ಕೆಲ ತಾಲ್ಲೂಕುಗಳಲ್ಲಿ ಎರಡನೇ ಹಂತದಲ್ಲಿ‌ ನಡೆಯಲಿರುವ ಗ್ರಾಮ‌ ಪಂಚಾಯತಿ ಚುನಾವಣೆಯ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಪರಿಶೀಲಿಸಿದರು. ಅಥಣಿ, ಕಾಗವಾಡ, ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕುಗಳಿಗೆ ಭಾನುವಾರ (ಡಿ.20) ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಸಿದ್ಧತೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಚುನಾವಣೆಗೆ ನಿಯೋಜಿತಗೊಂಡು ತರಬೇತಿ ಪಡೆಯುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಜತೆ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಚುನಾವಣಾ ಪ್ರಕ್ರಿಯೆ ಸುಸೂತ್ರವಾಗಿ …

Read More »

ಬೆಳಗಾವಿ ಜಿಲ್ಲೆಯ ಶಾಸಕನ ಕಚೇರಿ..ಚೋರಿ,ಚೋರಿ..!!!

ಬೆಳಗಾವಿ-ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ಕಚೇರಿಯನ್ನೂ ಕಳ್ಳರು ಟಾರ್ಗೆಟ್ ಮಾಡಿದ್ದು ಕಚೇರಿಯಲ್ಲಿ ಕಳ್ಳತನ ನಡೆದಿದೆ. ಬೆಳಗಾವಿ ಜಿಲ್ಲೆ ರಾಮದುರ್ಗದ ಪಟ್ಟಣದಲ್ಲಿರುವ ಶಾಸಕರ ಕಚೇರಿಯಲ್ಲಿ ತಡರಾತ್ರಿ ಕಳ್ಳತನ ನಡೆದಿದೆ.ಮಹಾದೇವಪ್ಪ ಯಾದವಾಡ್, ರಾಮದುರ್ಗ ಬಿಜೆಪಿ ಶಾಸಕರಾಗಿದ್ದು ಇವರ ಕಚೇರಿ ಕಳ್ಳರ ಕಣ್ಣಿಗೆ ಬಿದ್ದಿದೆ. ಕಚೇರಿ ಬೀಗ ಮುರಿದು ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿದ ಮುಸುಕುಧಾರಿಗಳು. ಕಚೇರಿ ಬಳಿಯ ಸಿಸಿ ಕ್ಯಾಮರಾದಲ್ಲಿ ಮುಸುಕುಧಾರಿಗಳ ಚಲನವಲನ ಸೆರೆಯಾಗಿದೆ ಕಚೇರಿಯಲ್ಲಿ ಏನು ಕಳ್ಳತನವಾಗಿದೆ ಎಂಬ ಗುಟ್ಟು ಬಿಟ್ಟು ಕೊಡದ …

Read More »

ಕಿತವಾಡ ಫಾಲ್ಸ್ ನಲ್ಲಿ ಬೆಳಗಾವಿಯ ಯುವಕ ನಾಪತ್ತೆ….

ಬೆಳಗಾವಿ-ಕರ್ನಾಟಕದ ಗಡಿ ಅಂಚಿನಲ್ಲಿರುವ,ಮಹಾರಾಷ್ಟ್ರ ಚಂದಗಡ ಹದ್ದಿಯಲ್ಲಿ ಬರುವ ಕಿತವಾಡ ಫಾಲ್ಸ್ ನಲ್ಲಿ ಬೆಳಗಾವಿಯ ಯುವಕನೊಬ್ಬ ನಾಪತ್ತೆಯಾಗಿದ್ದಾನೆ. ಬೆಳಗಾವಿಯ ಮಾಳಮಾರುತಿ ಬಡಾವಣೆಯ ನಿವಾಸಿ ಅಭಿಷೇಕ ಸಜ್ಜನ್ (24) ಎಂಬಾತ ಕಿತವಾಡ ಮಿನಿ ಜಲಪಾತದಲ್ಲಿ ನಾಪತ್ತೆಯಾಗಿದ್ದು,ಚಂದಗಡ ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಭಿಷೇಕ ಸಜ್ಜನ್ ಇಂದು ಬೆಳಿಗ್ಗೆ ತನ್ನ ಕುಟುಂಬ ಸದಸ್ಯರೊಂದಿಗೆ ಕಿತವಾಡ ಜಲಪಾತಕ್ಕೆ ತೆರಳಿದ್ದ,ಮಧ್ಯಾಹ್ನ 2-30 ರ ಸುಮಾರಿಗೆ ಜಲಪಾತದಲ್ಲಿ ಜಲ ವಿಹಾರ ಮಾಡುತ್ತಿರುವಾಗ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದ್ದು ಚಂದಗಡ ಪೋಲೀಸರು …

Read More »

ದನಗೋಳದಾವ್ರ…ಮನಿಗೋಳದಾವ್ರ,ಅಂಗಡಿಗೋಳದಾವ್ರ,ಹುಷಾರ್ಲೇ ಮಲಕೋರ್ರೀಪೋ..!!

ಬೆಳಗಾವಿ- ಗಡಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ.ಥರ,ಥರಾ ನಡುಗುವ ಚಳಿಯಲ್ಲಿ ಬೆಚ್ಚಗೆ ಕವದಿ ಹೊತ್ತು ಬೆಚ್ಚಗೆ ಮಲಗಿದ್ರೆ ಬೆಳಗಾಗುವಷ್ಟರಲ್ಲಿ ಬೆಚ್ವಿ ಬಿಳೋದು ಗ್ಯಾರಂಟಿ….. ಅಥಣಿ ಚಿಕ್ಕೋಡಿ,ನಿಪ್ಪಾಣಿ,ರಾಯಬಾಗ ಸೇರಿದಂತೆ,ಮಹಾರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಡಂಗುರ ಸಾರುವ ಮೂಲಕ ಸಾರ್ವಜನಿಕರನ್ನು ಎಚ್ಚರಿಸುವ ಕಾರ್ಯ ನಡೆದಿದೆ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ,ಗಡಿ ಭಾಗದ,ಗ್ರಾಮಗಳಲ್ಲಿ,ದನಗೋಳದಾವ್ರ…ಮನಿಗೋಳದಾವ್ರ,ಅಂಗಡಿಗೋಳದಾವ್ರ,ಹುಷಾರ್ಲೇ,ಮಲಕೋರ್ರೀಪೋ..!! ಎಂದು ಡಂಗುರ ಸಾರುತ್ತಿರುವದು ಸಾಮಾನ್ಯವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಈಗ ಮೈಕೊರೆಯುವ ಚಳಿ. …

Read More »

ಸಚಿವ ರಮೇಶ್ ಜಾರಕಿಹೊಳಿ ನನ್ನ ಸ್ನೇಹಿತ – ಅಶೋಕ ಪೂಜಾರಿ

ಬೆಳಗಾವಿ-ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣ ಮಾಡಲಾಗಿದೆ ಅಂತಾ ಜನ ನಂಬಿದ್ದರು,ಉತ್ತರ ಕರ್ನಾಟಕದ ಅಭಿವೃದ್ಧಿ ಆಗಬಹುದೆಂಬ ಅತೀವ ಆತ್ಮವಿಶ್ವಾಸ ಜನರಿಗೆ ಇತ್ತು ಆದ್ರೆ ಸುವರ್ಣಸೌಧ ನಿರ್ಮಿಸಿದ ಉದ್ದೇಶ ಇನ್ನುವರೆಗೆ ಈಡೇರಿಲ್ಲ ಎಂದು ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸಮೀತಿಯ ಅದ್ಯಕ್ಚ ಅಶೋಕ ಪೂಜಾರಿ ಅಸಮಾಧಾನ ವ್ಯೆಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,ಸರ್ಕಾರ ಬೆಳಗಾವಿಯ ಸುವರ್ಣಸೌಧದಲ್ಲಿ, ಅಧಿವೇಶನ ನಡೆಸುತ್ತಿಲ್ಲ,ಈ ಸುವರ್ಣಸೌಧದಲ್ಲಿ ಲೈಟ್ ಹಚ್ಚೋರು ಗತಿ ಇಲ್ಲ,ಸುವರ್ಣಸೌಧ ಉತ್ತರ ಕರ್ನಾಟಕ ಆಡಳಿತಾತ್ಮಕ …

Read More »

ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆ

ಬೆಳಗಾವಿ -ಲಿಂಗಾಯತ ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ 4ನೇ ಹಂತದ ಚಳವಳಿಯನ್ನು ಜ. 14 ರಂದು ಕೂಡಲಸಂಗಮದಿಂದ ಬೆಂಗಳೂರಿನ ವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು. ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿ ವರ್ಷ ನಮ್ಮ‌‌ ಭಕ್ತರು ಅದ್ದೂರಿಯಾಗಿ ಜನ್ಮ ದಿನಾಚಾರಣೆ ಮಾಡುತ್ತಿದ್ದರು. ಆದರೆ ಕೋವಿಡ್-19 ಇರುವುದರಿಂದ ಡಿ.23 ರಂದು ರಾಜ್ಯಾದ್ಯಂತ ರಕ್ತದಾಸೋಹ ಮಾಡಲು …

Read More »

ಲೋಕಲ್ ಕಾರ್ಬಾರ್..ಮಟನ್ ಪಾರ್ಟಿ…ಉಳವಿ ಪ್ರವಾಸ…!!!

ಬೆಳಗಾವಿ- ಬೆಳಗಾವಿ ತಾಲ್ಲೂಕಿನ ಪುಟ್ಟ ಗ್ರಾಮ,ಈ ಗ್ರಾಮದಲ್ಲಿ ಬರೋದು ಒಂದೇ ವಾರ್ಡು,ಎರಡು ಸ್ಥಾನ.ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು ಇನ್ನೊಂದು ಸ್ಥಾನಕ್ಕೆ ಗ್ರಾಮದ ಇಬ್ಬರು ಬಲಾಡ್ಯರ ನಡುವೆ ಬಿರುಸಿನ ಸ್ಪರ್ದೆ ನಡೆಯುತ್ತಿದೆ. ಬೆಳಗಾವಿ ತಾಲ್ಲೂಕಿನ ಮುತ್ನಾಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ವಿರುಪನಕೊಪ್ಪ ಗ್ರಾಮದಲ್ಲಿ ನಡೆದಿರುವ ಲೋಕಲ್ ವಾರ್ ನಲ್ಲಿ ಗ್ರಾಮದ ಇಬ್ಬರು ಗೌಡ್ರು ಸ್ಪರ್ದೆ ಮಾಡಿದ್ದಾರೆ.ಇಬ್ಬರ ನಡುವೆ ನಡೆಯುತ್ತಿರುವ ಪೈಪೋಟಿ ನೋಡಿದ್ರೆ ಇದೊಂದು ಮಿನಿ ವಿಧಾನಸಭೆ ಸಮರ ಎನ್ನುಂತೆ ಕಾಣುತ್ತಿದೆ. …

Read More »