Breaking News

LOCAL NEWS

ರೆಬೆಲ್ಸ್ ಬೇಟೆಗೆ, ಮಂಗಳವಾರ ಬೆಳಗಾವಿಗೆ ಕುಮಾರಣ್ಣ ಎಂಟ್ರಿ!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಹಲವಾರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು ಈ ಬಂಡಾಯ ಅಭ್ಯರ್ಥಿಗಳನ್ಬು ಜೆಡಿಎಸ್ ಬುಟ್ಟಿಗೆ ಹಾಕಿಕೊಳ್ಳಲು ಮಂಗಳವಾರ ಮಾಜಿ ಸಿಎಂ ಕುಮಾರಣ್ಣ ಬೆಳಗಾವಿಗೆ ಬರ್ತಿದ್ದಾರೆ. ನಾಳೆ ಬೆಳಗ್ಗೆ ಸವದತ್ತಿ ಯಲ್ಲಮ್ಮನ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ,ಚೋಪ್ರಾ ಅವರನ್ನು ಕುಮಾರಸ್ವಾಮಿ ಭೇಟಿಯಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆಗುವಂತೆ ಮನವೊಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಕಿತ್ತೂರ ಕ್ಷೇತ್ರದ ಡಿ.ಬಿ ಇನಾಮದಾರ್ ಅವರಿಗೂ ಈ ಬಾರಿ ಕಾಂಗ್ರೆಸ್ …

Read More »

ಬೆಳಗಾವಿ ಉತ್ತರ ಮತಕ್ಷೇತ್ರಕ್ಕೆ ಅಚ್ಚರಿ ಅಭ್ಯರ್ಥಿ ಘೋಷಿಸಿದ ಹೈಕಮಾಂಡ್!!

ಬೆಂಗಳೂರು-ಆಮ್ ಆದ್ಮಿ ಪಕ್ಷದಿಂದ ಮೂರನೇ ಪಟ್ಟಿ ಬಿಡುಗಡೆಯಾಗಿದ್ದು ರಾಜ್ಯ 28 ಕ್ಷೇತ್ರಗಳಿಗೆ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದೆ. ಬೆಳಗಾವಿ ನಿಪ್ಪಾಣಿ ಮತಕ್ಷೇತ್ರದಿಂದ ರಾಜೇಶ ಅಣ್ಣಾಸಾಹೇಬ ಬಸವಣ್ಣ, ಬೆಳಗಾವಿ ಉತ್ತರ ಮತಕ್ಷೇತ್ರದಿಂದ ರಾಜಕುಮಾರ ಟೋಪಣ್ಣವರ ಹಾಗೂ ಸವದತ್ತಿ ಮತಕ್ಷೇತ್ರದಿಂದ ಬಾಪುಗೌಡ ಪಾಟೀಲ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಆಮ್ ಆದ್ಮಿ ಪಕ್ಷ ಲಿಂಗಾಯತ ಸಮಾಜದ ಯುವ ನಾಯಕ ರಾಜೀವ ಟೋಪಣ್ಣವರ ಅವರಿಗೆ ಟಿಕೆಟ್ ನೀಡಿದೆ.ಲಿಂಗಾಯತ ಸಮಾಜ ಇವರ …

Read More »

ವಿಧಾನಸಭೆ ಚುನಾವಣೆ:ಬೆಳಗಾವಿಯಲ್ಲಿ, ನೋಡಲ್ ಅಧಿಕಾರಿಗಳ ಸಭೆ

ಬೆಳಗಾವಿ, -ವಿಧಾನಸಭಾ ಚುನಾವಣೆ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಎಂ.ಸಿ.ಸಿ. ಸೇರಿದಂತೆ ನೇಮಿಸಲಾಗಿರುವ ವಿವಿಧ ನೋಡಲ್ ಅಧಿಕಾರಿಗಳು ತಮಗೆ ವಹಿಸಲಾಗಿರುವ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಏ.10) ನಡೆದ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾದರಿ ನೀತಿ ಸಂಹಿತೆ, ತರಬೇತಿ, ಸಾರಿಗೆ ನಿರ್ವಹಣೆ, ಗಣಕೀಕರಣ, ಸೈಬರ್ ಭದ್ರತೆ, …

Read More »

ಇವತ್ತು ಯಾವುದೇ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್!

ಬೆಳಗಾವಿ-ಅಳೆದು ತೂಗಿ,ಪರಿಷ್ಕರಣೆ ಮಾಡಿದ ಬಳಿಕ ಸಮೀಕ್ಷೆಯಲ್ಲಿ ಮೇಲುಗೈ ಸಾಧಿಸಿರುವ,ಗೆಲುವಿನ ಹೊಸ್ತಿಲಲ್ಲಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಬಿಜೆಪಿ ಹೈಕಮಾಂಡ್ ಇವತ್ತು ಯಾವುದೇ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಲಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಜ್ಯದ ಬಿಜೆಪಿ ನಾಯಕರು ಹೇಗಾದರೂ ಮಾಡಿ ಈ ಬಾರಿ ಪೂರ್ಣ ಬಹುಮತ ಸಾಧಿಸಲು ತಂತ್ರ ರೂಪಿಸಿದ್ದು 224 ಅಭ್ಯರ್ಥಿಗಳ ಪಟ್ಟಿಯನ್ನು ರೆಡಿ ಮಾಡಿಕೊಂಡು ದೆಹಲಿಗೆ ತೆರಳಿದ್ದು,ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸಿಎಂ ಬಸವರಾಜ್ ಬೊಮ್ಮಾಯಿ,ನಳೀನ್ ಕುಮಾರ್ …

Read More »

ಚಿಕ್ಕೋಡಿ ಸದಲಗಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಆಗ್ತಾರಾ ರಮೇಶ್ ಕತ್ತಿ!!

ಬೆಳಗಾವಿ- ಚಿಕ್ಕೋಡಿ ಸದಲಗಾ ಕ್ಷೇತ್ರದಲ್ಲಿ ಪ್ರಕಾಶ್ ಹುಕ್ಕೇರಿ,ಗಣೇಶ್ ಹುಕ್ಕೇರಿ ಸೋಲಿಲ್ಲದ ಸರ್ದಾರರು,ಜೊತೆಗೆ ಕೆಲಸಗಾರರು,ಕ್ಷೇತ್ರದ ಜನರ ಕ್ರೀಯಾಶೀಲ ಸೇವಕರು, ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸಿ ಅಪಾರ ಜನಮೆಚ್ಚುಗೆ ಗಳಿಸಿರುವ ಇವರ ವಿರುದ್ಧ ಅಭ್ಯರ್ಥಿ ನಿಲ್ಲಿಸಲು ಬಿಜೆಪಿ ನಾಯಕರು ಎಲ್ಲಿಲ್ಲದ ಕಸರತ್ತು ನಡೆಸಿದ್ದು,ಈ ಕ್ಷೇತ್ರದಿಂದ ರಮೇಶ್ ಕತ್ತಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಾಯಕರು ಒತ್ತಡ ಹೇರುತ್ತಿದ್ದಾರೆ ಎನ್ನುವ ಸುದ್ದಿ ಬೆಳಗಾವಿ ಜಿಲ್ಲೆಯಾದ್ಯಂತ ಸಾಕಷ್ಟು ಪ್ರಚಾರ ಪಡೆದಿದೆ. ಚಿಕ್ಕೋಡಿ ಸದಲಗಾ ಕ್ಷೇತ್ರದಿಂದ ರಮೇಶ್ ಕತ್ತಿ …

Read More »

ಯಾಕಿಷ್ಟು ಚಡಪಡಿಸುತ್ತಿದ್ದೀಯಾ ಲಕ್ಷ್ಮಣ್ ಅಣ್ಣಾ? – ರಮೇಶ್ ಜಾರಕಿಹೊಳಿ ಪ್ರಶ್ನೆ.

ಬೆಳಗಾವಿ-ಅಥಣಿ ಬಿಜೆಪಿ ಟಿಕೆಟ್‌ಗೆ ಸವದಿ – ಕುಮಟಳ್ಳಿ ಮಧ್ಯೆ ಫೈಟ್ ನಡೆದಿದ್ದು ಈ ವಿಚಾರವಾಗಿ ರಮೇಶ್ ಜಾರಕಿಹೊಳಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು,ಯಾಕಿಷ್ಟು ಚಡಪಡಿಸುತ್ತಿದ್ದೀಯಾ ಲಕ್ಷ್ಮಣ್ ಅಣ್ಣಾ?,ದಯವಿಟ್ಟು ಅರಾಮಾಗಿರು ಎಂದು ರಮೇಶ್ ಸವದಿಗೆ ಟಾಂಗ್ ಕೊಟ್ಟಿದ್ದಾರೆ. ಮಹಾರಾಷ್ಟ್ರದ ಶಿನ್ನೊಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದು,ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಲು ಆಗಲ್ಲ, ನನಗೆ ನೂರಕ್ಕೆ ನೂರರಷ್ಟು ವಿಶ್ವಾಸ ಇದೆ, ಮಹೇಶ ಕುಮಟಳ್ಳಿಗೆ ಬಿಜೆಪಿ ಟಿಕೆಟ್ ಸಿಗುತ್ತೆ.ಮಹೇಶ್ ಜೊತೆಗೆ ಶ್ರೀಮಂತ ಪಾಟೀಲ …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಳಗ,ಪಕ್ಕದ ಮಹಾರಾಷ್ಟ್ರಕ್ಕೆ ಶಿಪ್ಟ್!!

*ಇದು ಲಕ್ಷ್ಮೀ ಹೆಬ್ಬಾಳಕರ್  ಟೈಲೆಂಟ್….!!* *ಲಕ್ಷ್ಮೀ-ರಮೇಶ್ ಜಾರಕಿಹೊಳಿ ನಡುವಿನ ಟಾಕ್ ವಾರ್ ಸೈಲೆಂಟ್…!!* *ಆದ್ರೆ ಇಬ್ವರ ನಡುವಿನ ರಾಜಕೀಯ ಜಗಳ ಪರ್ಮನೆಂಟ್..!!* ಬೆಳಗಾವಿ-ಲಕ್ಷ್ಮೀ ಹೆಬ್ಬಾಳಕರ ಮತ್ತು ರಮೇಶ್ ಜಾರಕಿಹೊಳಿ ನಡುವೆ ಜೋರಾಗಿ ನಡೆಯುತ್ತಿದ್ದ ಟಾಕ್ ವಾರ್ ಕಳೆದ ಎರಡು ವಾರಗಳಿಂದ ಸೈಲೆಂಟ್ ಆಗಿದೆ.ಈ ವಿಚಾರದಲ್ಲಿ ಲಕ್ಷ್ಮೀ ಹೆಬ್ಬಾಳಕರ ಟೈಲೆಂಟ್  ಜಾಣ ನಡೆ ಅನುಸರಿಸಿ ಮೌನಕ್ಕೆ ಶರಣಾಗಿದ್ದಾರೆ. ಈ ವಿಚಾರದಲ್ಲಿ ರಮೇಶ್ ಜಾರಕಿಹೊಳಿ ಅವರೂ ಸಹ ಕಳೆದ ಎರಡು ವಾರಗಳಿಂದ ತಮ್ಮ …

Read More »

ಬೈಲಹೊಂಗಲದಲ್ಲಿ ಬಿಜೆಪಿ ಅಭ್ಯರ್ಥಿ, ನಾನಾ ನೀನಾ!!

ಬೆಳಗಾವಿ – ಬಿಜೆಪಿ ಟಿಕೆಟ್ ಗಾಗಿ,ಇಕ್ಕಟ್ಟು ಬಿಕ್ಕಟ್ಟು ಎಲ್ಲಾದ್ರು ಇದ್ರೆ ಅದು ಬೈಲಹೊಂಗಲದಲ್ಲಿ ಯಾಕಂದ್ರೆ ಇಲ್ಲಿ ಇಬ್ಬರು ಮಾಜಿ ಶಾಸಕರ ನಡುವೆ ಬಿಜೆಪಿ ಟಿಕೆಟ್ ಗಾಗಿ ಗುದ್ದಾಟ ನಡೆದಿದೆ.ಬಿಜೆಪಿ ಅಭ್ಯರ್ಥಿ ನಾನಾ ನೀನಾ ಎನ್ನುವ ಪೈಟ್ ನಡೆಯುತ್ತಿದೆ. ಮಾಜಿ ಶಾಸಕ ಜಗದೀಶ್ ಮೆಟಗುಡ್ ಹಾಗು ಮಾಜಿ ಶಾಸಕ ವಿ ಆಯ್ ಪಾಟೀಲ ಇಬ್ಬರೂ ಬೈಲಹೊಂಗಲ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಎಲ್ಲಿಲ್ಲದ ಲಾಭಿ ನಡೆಸಿದ್ದಾರೆ.ವಿಆಯ್ ಪಾಟೀಲ ಅವರಿಗೆ ಮಾಜಿ ಸಿಎಂ …

Read More »

ಟಿಕೆಟ್.. ಟಿಕೆಟ್ ನಾ ಕೊಡೇ…ನೀ..ಬಿಡೇ..!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಮಾಜಿ ಶಾಸಕ ಸಂಜಯ ಪಾಟೀಲ ಧರ್ಮಸ್ಥಳದ ಮಂಜುನಾಥನ ಮೊರೆ ಹೋಗಿ ಶ್ರೀ ವಿರೇಂದ್ರ ಹೆಗಡೆ ಅವರನ್ನು ಭೇಟಿಯಾಗಿ ಅವರಿಂದ ಆಶೀರ್ವಾದ ಪಡೆದು ಟಿಕೆಟ್ ಅನೌನ್ಸ್ ಯಾವಾಗ ಆಗುತ್ತೆ ಎನ್ನುವ ಟೇನಶ್ಯನ್ ದಲ್ಲಿ ಇರುವಾಗಲೇ ದೀಪಾ ಕುಡಚಿ ನನಗೂ ಗ್ರಾಮೀಣ ಕ್ಷೇತ್ರದ ಟಿಕೆಟ್ ಕೊಡಿ ಎಂದು ಸಂಜಯ ಪಾಟೀಲರಿಗೆ ಅರ್ಜಿ ಕೊಡುವ ಮೂಲಕ ಸಂಜಯ ಪಾಟೀಲರ ಟೇನಶ್ಯನ್ ಮತ್ತಷ್ಟು ಹೆಚ್ಚಿಸಿದ್ದಾರೆ. ಬೆಳಗಾವಿ …

Read More »

ಕಾಂಗ್ರೆಸ್ ಗೆ ರಿಸೈನ್ ಮಾಡಲು ಡಿ.ಬಿ ಇನಾಮದಾರ್ ಕುಟುಂಬದ ನಿರ್ಧಾರ!

ಬೆಳಗಾವಿ- ಕಿತ್ತೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಬಾಬಾಸಾಹೇಬ್ ಪಾಟೀಲ ಅವರನ್ನು ಕಣಕ್ಕಿಳಿಸುವ ನಿರ್ಧಾರ ಹೊರಬೀಳುತ್ತಿದ್ದಂತೆಯೇ ಕಿತ್ತೂರು ಕ್ಷೇತ್ರದಲ್ಲಿ ಬಂಡಾಯದ ಬಿರುಗಾಳಿ ಭುಗಿಲೆದ್ದಿದೆ. ಕಾಂಗ್ರೆಸ್ ಪಕ್ಷದ ನಿರ್ಧಾರವನ್ನು ಖಂಡಿಸಿ ಡಿ.ಬಿ ಇನಾಮದಾರ್ ಅಭಿಮಾನಿಗಳು ನೇಗಿನಹಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಿದ ಬೆನ್ನಲ್ಲಿಯೇ ಡಿ.ಬಿ ಇನಾಮದಾರ್ ಕುಟುಂಬದ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕವಾಗಿ ರಿಸೈನ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಗುರುವಾರ ಸಂಜೆ ನೇಗಿನಹಾಳ ಗ್ರಾಮದ ಡಿ.ಬಿ ಇನಾಮದಾರ್ ಮನೆಯಲ್ಲಿ ಸೇರಿದ ಅಭಿಮಾನಿಗಳನ್ನು …

Read More »

1989 ರಲ್ಲಿ ಅನೀಲ ಪೋತದಾರ ಇಲೆಕ್ಷನ್ ನಿಂತಾಗ ಏನ್ ಆಗಿತ್ತು ಗೊತ್ತಾ??

ಹಿರಿಯರಿಲ್ಲದೇ ಕೇವಲ ಯುವಕರೇ ಸೇರಿ ಎದುರಿಸಿದ 1989 ರ ಬೆಳಗಾವಿ ಚುನಾವಣೆ! 1989.ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆ ಸೇರಿಯೇ ಚುನಾವಣೆ.ಆ ವರ್ಷದ ಅಕ್ಟೋಬರ 30 ರಂದು ದೀಪಾವಳಿ.ಕೊತ್ವಾಲ ಬೀದಿಯಲ್ಲಿದ್ದ ನನ್ನ ” ಚಂದರಗಿ ಪ್ರಿಂಟರ್ಸ” ಮುದ್ರಣಾಲಯದಲ್ಲಿ ಪೂಜೆ.ರಸ್ತೆಯ ಮೇಲೆಯೇ ಇಪ್ಪತ್ತು ಮೂವತ್ತು ಖುರ್ಚಿ ಹಾಕಿಸಿದ್ದೆ.ಪ್ರೆಸ್ ಮುಂದೆ ದಿನಾಲೂ ಸಂಜೆ ಮೂವತ್ತರ ಆಸುಪಾಸಿನ ಕನ್ನಡ ಹೋರಾಟಗಾರರು,ರಾಜಕೀಯ ಪಕ್ಷಗಳ ಕಾರ್ಯಕರ್ತರು ಸೇರುವ ಸ್ಥಳವದು.ಪೂಜೆಗೂ ಸೇರಿದ್ದರು. ನವ್ಹೆಂಬರ್ ನಲ್ಲಿ ನಡೆಯಲಿದ್ದ ಚುನಾವಣೆ ಬಗ್ಗೆ …

Read More »

ಬೆಳಗಾವಿ ಗ್ರಾಮೀಣ: ಕೈ ಮೇಲೆ ಮೂಡಿದ ಸಂಜಯ ದಾದಾ!!

ಬೆಳಗಾವಿ: ಜಿಲ್ಲೆಯ ಅತ್ಯಂತ ಹೈ ವೋಲ್ಟೇಜ್ ಕ್ಷೇತ್ರವಾಗಿರುವ ಗ್ರಾಮೀಣ ಕ್ಷೇತ್ರದಲ್ಲಿ ಚುನಾವಣೆಯ ಬಿಸಿ ಏರುತ್ತಿರುವ ಸಂದರ್ಭದಲ್ಲಿ ಮಾಜಿ ಶಾಸಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲರ ಭಾವಚಿತ್ರವನ್ನು ಯುವಕನೋರ್ವ ತನ್ನ ಬಲಗೈಯ ಮೇಲೆ ಖಾಯಂ ಅಚ್ಚು ಹಾಕಿಕೊಳ್ಳುವ ಮೂಲಕ ತನ್ನ ಅಭಿಮಾನದ ಪರಕಾಷ್ಟೆಯನ್ನೆ ವ್ಯಕ್ತ ಪಡಿಸಿದ್ದಾನೆ. ಗ್ರಾಮೀಣ ಕ್ಷೇತ್ರದ ಬಡಸ್ ಕೆ.ಎಚ್.ಗ್ರಾಮದ ಯುವಕ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ಸುನೀಲ್ ದಳವಾಯಿ ಎಂಬಾತನು ಹನುಮಜಯಂತಿ ಹಾಗೂ ಬಿಜೆಪಿ ಸಂಸ್ಥಾಪನಾ ದಿನದ ನಿಮಿತ್ಯ …

Read More »

ಗೋಕಾಕ್ ಟಿಕೆಟ್ ತಪ್ಪಿದ ಬಳಿಕ ಅಶೋಕ ಪೂಜಾರಿ ಏನಂದ್ರು ಗೊತ್ತಾ??

ಡಾ.ಮಹಾಂತೇಶ ಕಡಾಡಿಗೆ ಕಾಂಗ್ರೆಸ್ ಟಿಕೆಟ್ : ಮೌನಕ್ಕೆ ಶರಣಾದ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಗೋಕಾಕ ಏ 6 : ಕಾಂಗ್ರೆಸ್ ಪಕ್ಷದ ಟಿಕೆಟ್ ಡಾ.ಮಹಾಂತೇಶ ಕಡಾಡಿಗೆ ಘೋಷಣೆಯಾಗುತ್ತಿದ್ದಂತೆ ಪ್ರಬಲ ಟಿಕೆಟ್ ಆಕಾಂಕ್ಷಿ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಮೌನಕ್ಕೆ ಶರಣಾಗಿದ್ದಾರೆ. ಈ ಕುರಿತು ಪ್ರತಿಕೆಯೊಂದಿಗೆ ಮಾತನಾಡಿದ ಅಶೋಕ ಪೂಜಾರಿ ಅವರು ಕಳೆದ ಹಲವು ದಿನಗಳಿಂದ ಸಕ್ರಿಯವಾಗಿದ್ದು ಕಾಂಗ್ರೆಸ್ ಟಿಕೆಟ್ ಘೋಷಣೆಯಿಂದ ನನ್ನ ಮೇಲಿದ್ದ ಒತ್ತಡದಿಂದ ಮುಕ್ತನಾದಂತಾಗಿದ್ದು, ಎರಡ್ಮೂರು ದಿನಗಳವರೆಗೆ …

Read More »

ಕಿತ್ತೂರಿಗೆ ಬ್ರೇಕಿಂಗ್,ಗೋಕಾಕಿಗೆ ಶಾಕೀಂಗ್ ನ್ಯೂಸ್!!

ಬೆಳಗಾವಿ – ಕಾಂಗ್ರೆಸ್ ಪಕ್ಷ ಎರಡನೇಯ ಕಂತಿನ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ್ದು,ಗೋಕಾಕ್ ಕ್ಷೇತ್ರದಿಂದ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು,ಕಿತ್ತೂರಿನಿಂದ ಬಾಬಾಸಾಹೇಬ್ ಪಾಟೀಲ ಅವರ ಹೆಸರನ್ಬು ಕೊನೆಗೂ ಪೈನಲ್ ಮಾಡಿದೆ. ಕಾಂಗ್ರೆಸ್ಸಿನ ಎರಡನೇಯ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಲಾಗಿದೆ. ಗೋಕಾಕ್ ಕ್ಷೇತ್ರದಿಂದ ಅಶೋಕ ಪೂಜಾರಿ ಅವರನ್ನು ಕೈಬಿಟ್ಟು,ಮಹಾಂತೇಶ್ ಕಡಾಡಿ,ಸವದತ್ರಿ ಕ್ಷೇತ್ರದಿಂದ ವಿಶ್ವಾಸ್ ವೈದ್ಯ,ಕಿತ್ತೂರಿನಿಂದ ಬಾಬಾಸಾಹೇಬ್ ಪಾಟೀಲ,ನಿಪ್ಪಾಣಿಯಿಂದ ಕಾಕಾಸಾಹೇಬ್ ಪಾಟೀಲ ಅವರ ಹೆಸರನ್ನು ಪೈನಲ್ ಮಾಡಲಾಗಿದೆ. ಇಂದು …

Read More »

ಬೆಳಗಾವಿ: ಖೊಟ್ಟಿ ಪಟ್ಟಿಯಲ್ಲಿ, ವಿನಯ ನಾವಲಗಟ್ಟಿ!!

  ಬೆಳಗಾವಿ- ಸೋಶೀಯಲ್ ಮೀಡಿಯಾ ಖಿಲಾಡಿಗಳು ರಿಲೀಸ್ ಮಾಡುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಖೊಟ್ಟಿ ಪಟ್ಟಿಗಳ ಹಾವಳಿ ಬೆಳಗಾವಿ ಜಿಲ್ಲೆಯಲ್ಲಿ ಕೋಲಾಹಲ ಸೃಷ್ಢಿಸಿವೆ. ಅತ್ಯಂತ ವ್ಯವಸ್ಥಿತವಾಗಿ ಯಾರಿಗೂ ಅಮುಮಾನ ಬಾರದ ರೀತಿಯಲ್ಲಿ ಪಕ್ಷದ ಸೀಲು ಜೊತೆಗೆ ಪಕ್ಷದ ಪ್ರಮುಖರ ಸಹಿಯೊಂದಿಗೆ ಫೇಕ್ ಪಟ್ಟಿಯನ್ನು ಖಿಲಾಡಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ.ಇವತ್ತು ಬೆಳ್ಳಂ ಬೆಳಗ್ಗೆ ಕಾಂಗ್ರೆಸ್ಸಿನ ಎರಡನೇಯ ಕಂತಿನ ಪಟ್ಟಿಯನ್ನು ರಿಲೀಸ್ ಮಾಡಿ ಎಲ್ಲರೂ ಹೌಹಾರುವಂತೆ ಮಾಡಿದ್ದು ಸತ್ಯ ಯಾಕಂದ್ರೆ ಈ …

Read More »