Breaking News

LOCAL NEWS

ಬೆಳಗಾವಿಯಲ್ಲಿ ನಡೆದ ಎಮ್ಮೆಗಳ ರೇಸ್ ಮಹಾರಾಷ್ಟ್ರದಲ್ಲೂ ಫೇಮಸ್..!!

ಬೆಳಗಾವಿ- ಬೆಳಗಾವಿ ಮಹಾನಗರ,ವಿಭಿನ್ನ, ವಿಶಿಷ್ಟ,ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದೆ.ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದ ಎಮ್ಮೆಗಳ ರೇಸ್ ಪಕ್ಕದ ಮಹಾರಾಷ್ಟ್ರದಲ್ಲೂ ಪ್ರಭಾವ ಬೀರಿದೆ. ಅಂತರ್ ರಾಜ್ಯಗಳಲ್ಲಿ ಗಮನ ಸೆಳೆದಿರುವ ಬೆಳಗಾವಿಯಲ್ಲಿ ನಡೆದ ಎಮ್ಮೆಗಳ ಓಟವನ್ನು ಬೆಳಗಾವಿಯ ಕುಲಕರ್ಣಿ ಗಕ್ಲಿಯ ಗವಳಿ ಸಮಾಜದವರು ಆಯೋಜನೆ ಮಾಡಿದ್ಸರು ಈ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡ ಮುರುಘೇಂದ್ರ ಗೌಡ ಪಾಟೀಲ (ಕಣಬರ್ಗಿ) ಅವರು ಪ್ರಾಯೋಜಕತ್ವ ನೀಡಿದ್ದರು. ಎಮ್ಮೆಗಳ ರೇಸ್ ನಲ್ಲಿ ವಿಜೇತರಾದವರಿಗೆ ಮುರುಘೇಂದ್ರಗೌಡ್ರು ನಗದು ಬಹುಮಾನ ನೀಡಿ,ಗವಳಿ ಸಮಾಜ ಆಯೋಜಿಸಿದ …

Read More »

ಕೊನೆಗೂ,ಬೆಳಗಾವಿ ಮೇಯರ್ ಇಲೆಕ್ಷನ್ ಗೆ ಮುಹೂರ್ತ ಫಿಕ್ಸ್…!!

ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಉಪ ಮಹಾಪೌರ ಆಯ್ಕೆಗೆ ಫೆಬ್ರವರಿ 6, 2023 ರಂದು ಚುನಾವಣೆ ನಿಗದಿಪಡಿಸಲಾಗಿದೆ ಎಂದು ಪ್ರಾದೇಶಿಕ ಆಯುಕ್ತರಾದ ಎಂ‌.ಜಿ.ಹಿರೇಮಠ ತಿಳಿಸಿದ್ದಾರೆ. ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ, ಉಪ ಮೇಯರ್ ಸ್ಣಾನ ಹಿದುಳಿದ ಬ ವರ್ಗದ ಮಹಿಳೆಗೆ ಮಿಸಲಿಡಲಾಗಿದೆ.ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇದ್ದು ಬಿಜೆಪಿ ಪಕ್ಷದಿಂದ ಚುನಾಯಿತರಾದ ನಗರಸೇವಕಿಯರು ಮೇಯರ್ ಉಪ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗುವದು ಖಚಿತವಾಗಿದೆ. ಫೆಬ್ರುವರಿ 6 …

Read More »

ಬಿಜೆಪಿ ಪತ್ರಿಕಾಗೋಷ್ಠಿಯಲ್ಲಿ , ಕುಕ್ಕರ್ ಅವಾಜ್…ಟೆಂಗಿನಕಾಯಿ ಫೈಟ್….!!!

ಬೆಳಗಾವಿ-ಬೆಳಗಾವಿಯಲ್ಲಿ ಬಿಜೆಪಿ ನಾಯಕರು ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಬೆಳಗಾವಿ ಗ್ರಾಮೀಣದಲ್ಲಿ ಹಂಚಿಕೆಯಾದ ಕುಕ್ಕರ್ ಹಂಚಿಕೆಯಾಗುತ್ತಿರುವ ಮಿಕ್ಸರ್ ಜೊತೆಗೆ ಟೆಂಗಿನಕಾಯಿ ಪ್ರಮಾಣ ಸದ್ದು ಮಾಡಿದ್ದು ಈ ವಿಚಾರದ ಕುರಿತು ಮಾಜಿ ಶಾಸಕ ಸಂಜಯ ಪಾಟೀಲ ಮಾದ್ಯಮ ಮಿತ್ರರಜೊತೆ ವಾಗ್ವಾದ ಮಾಡಿ, ನಂತರ ಕ್ಷಮೆಯಾಚಿಸಿದ ಪ್ರಸಂಗ ನಡೆದಿದೆ. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಎಂ.ಬಿ ಝಿರಲಿ, ಸಂಜಯ ಪಾಟೀಲ ಸಂಸದೆ ಮಂಗಲಾ ಅಂಗಡಿ,ಶಾಸಕ ಅನೀಲ ಬೆನಕೆ ಸೇರಿದಂತೆ ಹಲವಾರು ಜನ ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಎಂ.ಬಿ …

Read More »

ಬೆಳಗಾವಿ ಜಿಲ್ಲೆಯಲ್ಲಿ ನಿರ್ಮಿಸಿರುವ. ರಾಕ್ ಗಾರ್ಡನ್ ಅದ್ಛುತ!!

ಬೆಳಗಾವಿ-   ಸಂಗೊಳ್ಳಿ ರಾಯಣ್ಣ ಅವರ ಪ್ರಾಮಾಣಿಕತೆ, ದೇಶಪ್ರೇಮ, ಯುವ ಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂಗೊಳ್ಳಿ ರಾಯಣ್ಣ ಉತ್ಸವ ಮುಂಬರುವ ದಿನಗಳಲ್ಲಿ ರಾಜ್ಯಮಟ್ಟದ ಉತ್ಸವವಾಗಿ ಬೆಳೆಯಲಿದೆ ಎಂದು ಬೈಲಹೊಂಗಲ ವಿಧಾನಸಭಾ ಮತಕ್ಷೇತ್ರದ ಶಾಸಕ ಮಹಾಂತೇಶ ಕೌಜಲಗಿ ಅವರು ತಿಳಿಸಿದರು. ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರ (ಜ.12) ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ -2023 ರ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕ್ರಾಂತಿವೀರ …

Read More »

ಕಾಂಗ್ರೆಸ್ ನಾಯಕರಿಗೆ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ಸುಣ್ಣ ಬಣ್ಣ ಹಚ್ವುವ ಯೋಗ್ಯತೆಯೂ ಇಲ್ಲ- ಟೋಪಣ್ಣವರ

ಬೆಳಗಾವಿಯ ಕಾಂಗ್ರೆಸ್ ಬಾವಿ,ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿ ಅವರು ಏಕೈಕ ಕಾಂಗ್ರೆಸ್ ಅಧಿವೇಶನ ಮಾಡಿದ ಐತಿಹಾಸಿಕ ಸ್ಥಳ,ಈ ಸ್ಥಳದಿಂದಲೇ ಕಸಗೂಡಿಸಿ, ಮಾದ್ಯಮಗಳಿಗೆ ಬ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಆಂದೋಲನ ಎಂಬ ಪೋಜು ಕೊಟ್ಟ ಕಾಂಗ್ರೆಸ್ ನಾಯಕರು ಲಕ್ಷಾಂತರ ರೂ ಖರ್ಚು ಮಾಡಿ ಕಟೌಟ್ ಬ್ಯಾನರ್ ಹಚ್ಚಿ ಪ್ರಜಾಧ್ವನಿ ಎಂಬ ಬಸ್ ಯಾತ್ರೆ ಆರಂಭಿಸಿರುವ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಬೆಳಗಾವಿಯ ಐತಿಹಾಸಿಕ ಮಹಾತ್ಮಾ ಗಾಂಧಿ ಅವರ ಸ್ಮಾರಕಕ್ಕೆ ಸುಣ್ಣ ಬಣ್ಣ ಹಚ್ವುವ ಯೋಗ್ಯತೆ ಇಲ್ಲ,ಎಂದು …

Read More »

ಬೆಳಗಾವಿ ಗ್ರಾಮೀಣದಲ್ಲಿ,ಸಿಂಗಲ್ ಡಬಲ್,ಜೊತೆಗೆ ಟೆಂಗಿನಕಾಯಿ ಟ್ರಬಲ್…!!

ಬೆಳಗಾವಿ-ಬೆಳಗಾವಿ ಗ್ರಾಮೀಣದಲ್ಲಿ ಇಲೆಕ್ಷನ್ ಯಾವ ರೀತಿ ನಡೆಯುತ್ತದೆ,ಮತದಾರರನ್ನು ಓಲೈಸಲು ಯಾರು ಯಾವ ಗಿಫ್ಟ್ ಕೊಡಬಹುದು,ಅನ್ನೋದನ್ನು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ.ಯಾಕಂದ್ರೆ ಈ ಕ್ಷೇತ್ರದಲ್ಲಿ ಗಿಫ್ಟ್ ಕೊಡುವ ವಿಚಾರದಲ್ಲಿ ಸಿಂಗಲ್ ಡಬಲ್ ಎನ್ನುವ ಪೈಪೋಟಿ ಈಗಿನಿಂದಲೇ ಶುರುವಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಹಳದಿ ಕುಂಕುಮ ಕಾರ್ಯಕ್ರಮದ ಮೂಲಕ ಈ ಕ್ಷೇತ್ರದ ಮಹಿಳೆಯರಿಗೆ ಸೀರೆ ಹಂಚಿರುವ ಲಕ್ಷ್ಮೀ ಹೆಬ್ಬಾಳಕರ,ನಂತರ ಟಿಫೀನ್ ಬಾಕ್ಸ,ಕೊಟ್ಟ ನಂತರ,ಮಾಜಿ ಶಾಸಕ ಸಂಜಯ ಪಾಟೀಲ ತಮ್ಮ ಜನ್ಮದಿನದ ಕಾರ್ಯಕ್ರಮದಲ್ಲಿ …

Read More »

ಕಳಸಾ ಬಂಡೂರಿ ಪ್ರದೇಶದಲ್ಲಿ ಕೇಂದ್ರದ ಅಧಿಕಾರಿಗಳು ಸುತ್ತಾಡಿದ್ದು ಯಾಕೆ ಗೊತ್ತಾ ??

ಖಾನಾಪುರ: ಮಂಗಳವಾರ ತಾಲೂಕಿನ ಕಣಕುಂಬಿ ಗ್ರಾಮದ ಸುತ್ತಮುತ್ತಲಿನ ಮಲಪ್ರಭಾ ಹಾಗೂಮಹದಾಯಿ ನದಿ, ಕಳಸಾ ಹಳ್ಳ ಮತ್ತು ಅಕ್ಕಪಕ್ಕದ ಜಲಾನಯನ ಪ್ರದೇಶಕ್ಕೆ ಹಿರಿಯ ಐಎಫ್ಎಸ್ಅಧಿಕಾರಿ ಅಂಜನಕುಮಾರ್ ಭೇಟಿ ನೀಡಿ ಕಣಕುಂಬಿ ಬಳಿ ಕರ್ನಾಟಕ ನೀರಾವರಿ ನಿಗಮದಿಂದಕೈಗೊಂಡಿರುವ ಕಾಮಗಾರಿಯನ್ನು ಪರಿಶೀಲಿಸಿದರು. ಕೇಂದ್ರ ಸರ್ಕಾರದ ಕೇಂದ್ರ ಪರಿಸರ ಸಚಿವಾಲಯದ ಸೂಚನೆ ಮೇರೆಗೆ ಮಲಪ್ರಭಾ ಮತ್ತು ಮಹದಾಯಿ ಜಲಾನಯನ ಪ್ರದೇಶಗಳಿಗೆ ತೆರಳಿ ವಸ್ತುಸ್ಥಿತಿ ವೀಕ್ಷಿಸಿದ ಅವರು, ಕಣಕುಂಬಿ ಸುತ್ತಮುತ್ತ ರಾಜ್ಯ ಸರ್ಕಾರದಿಂದ ಕೈಗೆತ್ತಿಕೊಂಡಿರುವ ಕಳಸಾ ಕಾಲುವೆಯ …

Read More »

ಬೆಳಗಾವಿ: ಸಂಪ್ ನಲ್ಲಿ ಬಿದ್ದು ಇಬ್ಬರು ಬಾಲಕರ ಸಾವು

ಬೆಳಗಾವಿ-ನಿರ್ಮಾಣ ಹಂತದ ಕಟ್ಟಡದಲ್ಲಿದ್ದ ಸಂಪ್‌ಗೆ ಬಿದ್ದು ಇಬ್ಬರು ಬಾಲಕರ ಸಾವನ್ನಪ್ಪಿದ ಘಟನೆಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಗುರ್ಲಹೊಸೂರ ಕಾಲೋನಿಯಲ್ಲಿ ನಡೆದಿದೆ.ಆಟವಾಡುತ್ತ ಸಂಪ್‌ಗೆ ಬಿದ್ದಿರುವ ನಾಲ್ಕು ವರ್ಷದ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ.ಸ್ಥಳಕ್ಕೆ ಸವದತ್ತಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಶ್ಲೋಕ ಗುಡಿ(4), ಚಿದಾನಂದ ಸಾಳುಂಕೆ(4) ಮೃತ ಮಕ್ಕಳು, ವಾಲ್ಮೀಕ ಭವನದ ಕಟ್ಟಡದ ನೀರು ಸಂಗ್ರಹ ಸಂಪ್ ನಲ್ಲಿ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಪ್ರಗತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳು. …

Read More »

ಅರ್ಚನಾ ಪಾಟೀಲಗೆ “ತ್ರಿವೇಣಿ ರತ್ನ” ರಾಜ್ಯ ಪ್ರಶಸ್ತಿ

ಮೊಳಕಾಲ್ಮೂರು -ಮೊಳಕಾಲ್ಮೂರು ತಾಲ್ಲೂಕು ಚಿತ್ರದುರ್ಗ ಜಿಲ್ಲೆಯ ತನುಶ್ರೀ ಪ್ರಕಾಶನವು ಪ್ರತಿವರ್ಷದಂತೆ ಕರೆಯಲಾದ ಅರ್ಜಿಗಳಲ್ಲಿ ಇವರ ಸಾಹಿತ್ಯ ಸಾಧನಾ ಪರಿಚಯ ಪರಿಶೀಲಿಸಿ ಅಂತಿಮವಾಗಿ ನುರಿತ ತೀರ್ಪುಗಾರರು ಮತ್ತು ವಿಮರ್ಶಕರು ಆಯ್ಕೆ ಸಮಿತಿಯಲ್ಲಿ ಪ್ರತಿಷ್ಠಿತ “ತ್ರಿವೇಣಿ ರತ್ನ ಪುರಸ್ಕಾರ” ಎಂಬ ರಾಜ್ಯ ಪ್ರಶಸ್ತಿಗೆ ಹಾವೇರಿಯ ಯುವಸಾಹಿತಿ ಅರ್ಚನಾ ಎನ್ ಪಾಟೀಲರನ್ನು ಆಯ್ಕೆ ಮಾಡಲಾಗಿದೆ. ಜ.15 ರಂದು ಚಳ್ಳಕೆರೆಯಲ್ಲಿ ನಡೆಯುವ ದ್ವಿತೀಯ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತನುಶ್ರೀ ಪ್ರಕಾಶನದ …

Read More »

ಬೆಳಗಾವಿಯ ಸವದತ್ತಿ ಕ್ಷೇತ್ರದಿಂದಲೂ ಸಿದ್ಧರಾಮಯ್ಯ…??

ಬೆಳಗಾವಿ-ಮಾಜಿ ಮುಖ್ಯಮಂತ್ರಿ,ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ,ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಕೋಲಾರ್ ಕ್ಷೇತ್ರದಿಂದ ಸ್ಪರ್ದೆ ಮಾಡುವದಾಗಿ,ಸೋಮವಾರ ಘೋಷಣೆ ಮಾಡಿದ್ದು,ಬೆಳಗಾವಿಯ ಸವದತ್ತಿ ಕ್ಷೇತ್ರದಿಂದಲೂ ಸ್ಪರ್ದೆ ಮಾಡುವ ವಿಚಾರವನ್ನು ಗೌಪ್ಯವಾಗಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಸಿದ್ಧರಾಮಯ್ಯನವರು ಕೋಲಾರ್ ಮತ್ತು ಬೆಳಗಾವಿಯ ಸವದತ್ತಿ,ಈ ಎರಡೂ ಕ್ಷೇತ್ರಗಳಿಂದ ಸ್ಪರ್ದೆ ಮಾಡುವುದು ಖಚಿತ ಎನ್ನುವ ಸುದ್ದಿ ಇದೆ.ಈ ವಿಚಾರ ಬೆಳಗಾವಿಯ ಕಾಂಗ್ರೆಸ್ ನಾಯಕರಿಗೆ ಗೊತ್ತಿದೆ,ಎಂದು ಹೇಳಲಾಗುತ್ತಿದ್ದು,ಸಿದ್ಧರಾಮಯ್ಯನವರು ಕೇವಲ ಕೋಲಾರ್ ದಿಂದ ಸ್ಪರ್ದೆ ಮಾಡುವ ವಿಚಾರವನ್ನು ಮಾತ್ರ ಬಹಿರಂಗ ಪಡಿಸಿದ್ದು …

Read More »

ಬೆಳಗಾವಿ: ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಹಾಕಿದ ಹಿರಿಯ ಪತ್ರಕರ್ತ….!!

ಬೆಳಗಾವಿ-ಚುನಾವಣೆ ಸಮೀಪಿಸುತ್ತಿದ್ದಂತೆ, ಬೆಳಗಾವಿ ಜಿಲ್ಲೆಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ.ಕಾಂಗ್ರೆಸ್ ಟಿಕೆಟ್ ಗಾಗಿ ಅನೇಕ ಘಟಾನುಘಟಿಗಳು ಅರ್ಜಿ ಹಾಕಿದ್ದು,ಗೋಕಾಕ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡುವಂತೆ ಹಿರಿಯ ಪತ್ರಕರ್ತರೊಬ್ಬರು ಅರ್ಜಿ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಸುಮಾರು ಮೂರು ದಶಕಗಳ ಕಾಲ ಗೋಕಾಕ್ ತಾಲ್ಲೂಕಿ‌ನ ವರದಿಗಾರರಾಗಿ ಸೇವೆಗೈದಿರುವ ಚಂದ್ರಶೇಖರ ಕೊಣ್ಣೂರ, ಗೋಕಾಕ್ ತಾಲ್ಲೂಕಿನ ರಾಜಕಾರಣದ ಆಳ ಅಗಲ ಬಲ್ಲವರಾಗಿದ್ದು ಗ್ರಾಮ ಪಂಚಾಯತಿ ತಾಲ್ಲೂಕಾ ಪಂಚಾಯತಿ ಸದಸ್ಯರಾಗಿ ತಾಲ್ಲೂಕಿನ ಜನರ ಜೊತೆ ಉತ್ತಮ …

Read More »

ಶ್ರೀರಾಮಸೇನೆ ಜಿಲ್ಲಾಧ್ಯಕ್ಷನ ಮೇಲೆ ಫೈರಿಂಗ್ ಮಾಡಿದ ಆರೋಪಿಗಳು ಇವರೇ…!!

ಬೆಳಗಾವಿ-ಬೆಳಗಾವಿ ಪಕ್ಕದ ಹಿಂಡಲಗಾ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದ ಗುಂಡಿನ ದಾಳಿ ಪ್ರಕರಣವನ್ನು ಭೇದಿಸುವ ಮೂಲಕ ಬೆಳಗಾವಿ ಪೋಲೀಸರು ಅನೇಕ ರಾಜಕೀಯ ಆಟಗಳಿಗೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಕುಂದಾನಗರಿಯಲ್ಲಿ ಕಂಟ್ರಿ ಪಿಸ್ತೂಲ್ ಮತ್ತೆ ಸದ್ದು ಮಾಡಿದೆ. ಸೂರ್ಯ ಮುಳುಗುವ ಹೊತ್ತಿನಲ್ಲೇ ಬೆಳಗಾವಿಯಲ್ಲಿ ಗುಂಡಿನ ಸದ್ದು ಮೊಳಗಿತ್ತು. ಹಿಂದೂ ಮುಖಂಡನ ಗುರಿಯಾಗಿಸಿಯೇ ನಿನ್ನೆ ಸಂಜೆ ಫೈರಿಂಗ್ ಮಾಡಲಾಗಿತ್ತು. ಇದು ದೊಡ್ಡಮಟ್ಟದ ಸುದ್ದಿಯಾಗಿ ಸದ್ದನ್ನೂ‌ ಮಾಡಿತ್ತು. ಘಟನೆ ನಡೆಯುತ್ತಿದ್ದಂತೆ‌ ಕಾರ್ಯ ಪ್ರವರ್ತರಾದ‌ ಪೊಲೀಸರು …

Read More »

ಫೈರೀಂಗ್ ಪ್ರಕರಣ ಮೂರು ಜನ ಆರೋಪಿಗಳ ಅರೆಸ್ಟ್

ಬೆಳಗಾವಿ-ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ಮೇಲೆ ನಡೆದ ಫೈರಿಂಗ್ ಪ್ರಕರಣವನ್ನು ಬೆಳಗಾವಿ ಪೋಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿ ನಗರ ಪೋಲೀಸ್ ಆಯುಕ್ತರು ನಿನ್ನೆ ರಾತ್ರಿ ಘಟನೆ ನಡೆದ ತಕ್ಷಣ ನಾಲ್ಕು ತಂಡಗಳನ್ನು ರಚಿಸಿ ತನಿಖೆಗೆ ಸೂಚನೆ ನೀಡಿದ್ದರು.ಬೆಳಗಾವಿ ನಗರ ಪೊಲೀಸರ ಶೀಫ್ರ ಕಾರ್ಯಾಚರಣೆಯಿಂದಾಗಿ ಮೂರು ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ನಗರ ಪೋಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಅವರು ಪತ್ರಿಕಾ ಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಘಟನೆ …

Read More »

ಬೆಳಗಾವಿಯಲ್ಲಿ ಧೂಳೆಬ್ಬಿಸಿದ ಬೆನಕೆ ಟ್ರೋಫಿ !

ಬೆಳಗಾವಿ :ಬೆಳಗಾವಿ ಉತ್ತರ ಮತಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಅವರು ಏರ್ಪಡಿಸಿರುವ ಕ್ರಿಕೆಟ್ ಪಂದ್ಯಾವಳಿ ಇದೀಗ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡಿದೆ. ಬೆಳಗಾವಿ ನಗರದ ಹೃದಯ ಭಾಗವಾದ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಈ ಪ್ರತಿಷ್ಠಿತ ಪಂದ್ಯಾವಳಿ ನಡೆಯುತ್ತಿದೆ. ಕ್ರಿಕೆಟ್ ಪಂದ್ಯಾವಳಿಗೆ ‘ಅನಿಲ್ ಬೆನಕೆ ಟ್ರೋಫಿ’ ಎಂದು ಹೆಸರಿಸಲಾಗಿದೆ. ಪ್ರತಿಷ್ಠಿತ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವುದು ವಿಶೇಷ ಆಕರ್ಷಣೆಯಾಗಿದೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ವಿಶೇಷ ಬಹುಮಾನ ಘೋಷಣೆ ಮಾಡಲಾಗಿದೆ. ಅದರಲ್ಲೂ …

Read More »

ಬೆಳಗಾವಿಯ, ಹಿಂದೂ ಸಂಘಟನೆಯ ನಾಯಕ ರವಿ ಕೋಕಿತ್ಕರ್ ಮೇಲೆ ಫೈರೀಂಗ್…

ಬೆಳಗಾವಿ- ಹಿಂದೂ ಸಂಘಟನೆಯ ನಾಯಕ ರವಿ ಕೋಕೀತ್ಕರ್ ಮೇಲೆ ದುಷ್ಕರ್ಮಿಗಳು ಫೈರೀಂಗ್ ಮಾಡಿದ ಘಟನೆ ಇಂದು ಸಂಜೆ ಹಿಂಡಲಗಾ ಗ್ರಾಮದಲ್ಲಿ ನಡೆದಿದೆ. ಇಂದು ಸಂಜೆ ಹಿಂದೂ ಸಂಘಟನೆಯ ನಾಯಕ, ಶ್ರೀರಾಮಸೇನೆಯ ಮಾಜಿ ಮುಖಂಡ ರವಿ ಕೋಕೀತ್ಕರ್ ಇಂದು ಸಂಜೆ ಕಾರಿನಲ್ಲಿ ತೆರಳುವಾಗ ದುಷ್ಕರ್ಮಿಗಳು ಫೈರಿಂಗ್ ಮಾಡಿದ್ದಾರೆ.ರವಿ ಕೋಕಿತ್ಕರ್ ಕುತ್ತಿಗೆಗೆ ಗುಂಡು ತಗಲಿದ್ದು ಅವರು ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ರವಿ ಕೋಕೀತ್ಕರ್ ಸದ್ಯಕ್ಕೆ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅವರ …

Read More »