Breaking News

LOCAL NEWS

ಕಿತ್ತೂರು ಉತ್ಸವ ನಾಳೆಗೆ ಮುಂದೂಡಿಕೆ

ಬೆಳಗಾವಿ: ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ನಿಧನವಾಗಿದ್ದರಿಂದ ಕಿತ್ತೂರಿನಲ್ಲಿ ಅ.23ರಿಂದ ಆರಂಭವಾಗಬೇಕಿದ್ದ ಕಿತ್ತೂರು ಉತ್ಸವವನ್ನು ಮುಂದೂಡಿಕೆ ಮಾಡಿ ಡಿಸಿ ಆದೇಶ ಹೊರಡಿಸಿದ್ದಾರೆ. ಅ.24ರಿಂದ ಕಿತ್ತೂರು ಉತ್ಸವ ನಾಳೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

Read More »

ಆನಂದ ಮಾಮನಿ ಇನ್ನಿಲ್ಲ…..

ಬೆಳಗಾವಿ- ವಿಧಾನಸಭೆಯ ಡೆಪ್ತುಟಿ ಸ್ಪೀಕರ್ ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ ಆನಂದ ಮಾಮನಿ ಅವರು ಶನಿವಾರ ಮದ್ಯರಾತ್ರಿ ಮನಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮನಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆನಂದ ಮಾಮನಿ ಶನಿವಾರ ರಾತ್ರಿ ನಿಧನರಾಗಿದ್ದಾರೆ‌. ಮೃದು ಸ್ವಭಾವದ ಮೂಲಕ,ಅಪಾರ ಜನಮೆಚ್ಚುಗೆ ಗಳಿಸಿದ್ದ ಅವರು,ಸವದತ್ತಿ ಯಲ್ಲಮ್ಮನ ಕ್ಷೇತ್ರದಲ್ಲಿ ಅಭಿವೃದ್ದಿಯ ಹೊಳೆ ಹರಿಸಿದ್ದರು.ಕಳೆದ ಒಂದು ತಿಂಗಳಿನಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು,ವಿಡಿಯೋ …

Read More »

ಕ್ರಾಂತಿಯ ನೆಲ,ಕಿತ್ತೂರಿ‌ನಲ್ಲಿ ಹಬ್ಬದ ಕಳೆ….!!

ಬೆಳಗಾವಿ, -ಮೊದಲ ಬಾರಿಗೆ ರಾಜ್ಯಮಟ್ಟದ ಚನ್ನಮ್ಮನ ಕಿತ್ತೂರು ಉತ್ಸವ ಹಮ್ಮಿಕೊಳ್ಳಲಾಗಿದ್ದು, ವ್ಯವಸ್ಥಿತ, ಅದ್ಧೂರಿ ಉತ್ಸವ ಆಚರಣೆಗೆ ಸರ್ವ ರೀತಿಯಲ್ಲೂ ಸಿದ್ಧತೆ ಕೈಗೊಳ್ಳಲಾಗಿದೆ. ಭಾನುವಾರ (ಅ.23) ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚನ್ನಮ್ಮನ ಕಿತ್ತೂರು ಉತ್ಸವವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ಅವರು ತಿಳಿಸಿದರು. ಶನಿವಾರ (ಅ.22)ಉತ್ಸವದ ಪೂರ್ವಸಿದ್ಧತೆಯ ಕಾರ್ಯಪ್ರಗತಿಯನ್ನು ಪರಿಶೀಲಿಸಿದ ನಂತರ ಕೋಟೆ ಆವರಣದಲ್ಲಿರುವ ಗ್ರಾಮ ದೇವತೆ ದೇವಸ್ಥಾನದಲ್ಲಿ ಸುದ್ದಿಗಾರರಿಗೆ ಅವರು ಮಾಹಿತಿ ನೀಡಿದರು. …

Read More »

ಅಫೀಮ ಮಾರಾಟ ಜಾಲ ಪತ್ತೆ,ಇಬ್ಬರ ಅರೆಸ್ಟ್…

ಬೆಳಗಾವಿ- ಖಚಿತ ಮಾಹಿತಿ ಆದರಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸ್ ಇನ್ಸಪೆಕ್ಟರ್ ನಿಂಗನಗೌಡ ಪಾಟೀಲ್ ರವರ ನೇತೃತ್ವದ ತಂಡ ಬೆಳಗಾವಿ ನಗರದ ಆಟೋ ನಗರದಲ್ಲಿ ದಾಳಿ ಮಾಡಿ,ಆಫೀಮು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ನಿಷೇಧಿತ ಅಫೀಮ ಮಾರಾಟ ಮಾಡುತ್ತಿದ್ದ, 1) *ರೋಹಿತಾಶ್ವ ಭಗವಾನರಾಮ ಬಿಷ್ನೋಯಿ (24 ) ಸಾ: ಜೋಧಪುರ, ರಾಜಸ್ಥಾನ ಹಾಲಿ ಎಮ್.ಕೆ ಹುಬ್ಬಳ್ಳಿ, ಬೆಳಗಾವಿ* 2) *ರಾಜಕುಮಾರ್ ಜುಗತಾರಾಮ್ ಬಿಶ್ನೊಯಿ(22) ವರ್ಷ, ಸಾ: ಜೋಧಪುರ, ರಾಜಸ್ಥಾನ …

Read More »

ವಿಜಯಪೂರಕ್ಕೆ ನ್ಯಾಯ ಐತಿಹಾಸಿಕ ಬೆಳಗಾವಿಗೆ ಅನ್ಯಾಯ…!!!

ಬೆಳಗಾವಿ-ವಿಜಯಪೂರದ ವಿಮಾನ ನಿಲ್ಧಾಣಕ್ಕೆ ಜಗಜ್ಯೋತಿ ಬಸವೇಶ್ವರ ವಿಮಾನ ನಿಲ್ಧಾಣ ಎಂದು ನಾಮಕರಣ ಮಾಡಲು ಇಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.ಜೊತೆಗೆ ವಿಜಯಪುರ ವಿಮಾನ ನಿಲ್ಧಾಣದ ಅಭಿವೃದ್ಧಿಗೆ ಸುಮಾರು 350 ಕೋಟಿ ರೂ ಸರ್ಕಾರ ಮಂಜೂರು ಮಾಡಿದೆ. ಬೆಳಗಾವಿಯ ಸಾಂಬ್ರಾ, ವಿಮಾನ ನಿಕ್ಧಾಣಕ್ಕೆ ವೀರರಾಣಿ ಚನ್ನಮ್ಮಾಜಿಯ ಹೆಸರು ನಾಮಕರಣ ಮಾಡುವಂತೆ ಕಳೆದ ಒಂದು ದಶಕದಿಂದ ನಡೆದ ಹೋರಾಟಕ್ಕೆ ಸರ್ಕಾರ ಸ್ಪಂದಿಸದೇ ಇರುವುದು ದುರ್ದೈವದ ಸಂಗತಿಯಾಗಿದೆ. ಸಾಂಬ್ರಾ ವಿಮಾನ …

Read More »

ಬೆಳಗಾವಿಯಲ್ಲಿ, SSLC ವಿಧ್ಯಾರ್ಥಿಯ ಕೊಲೆ….!!

ಬೆಳಗಾವಿ-ನಾಪತ್ತೆಯಾಗಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಬರ್ಬರವಾಗಿ ಹತ್ಯೆ ಮಾಡಿದ ಘಟನೆಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮುಚ್ಚಂಡಿ ಗ್ರಾಮದ ಹೊರವಲಯದಲ್ಲಿ ವಿದ್ಯಾರ್ಥಿ ಶವ ಪತ್ತೆಯಾಗಿದೆ.ಬೆನ್ನಿಗೆ ಮಾರಕಾಸ್ತ್ರದಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ದುಷ್ಕರ್ಮಿಗಳು ಕೊಲೆಗೈದಿದ್ದಾರೆ. ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿ ನಾಪತ್ತೆ ಪ್ರಕರಣ ದಾಖಲಾಗಿತ್ತು,ನಿನ್ನೆ ರಾತ್ರಿ ವಿದ್ಯಾರ್ಥಿಯನ್ನ ಕೊಲೆ ಮಾಡಿ ಎಸೆದಿರುವ ಹಂತಕರು ಪರಾರಿಯಾಗಿದ್ದಾರೆ. ಶಿವಾಜಿ ನಗರ ನಿವಾಸಿ ಪ್ರಜ್ವಲ್ ಶಿವಾನಂದ ಕರಿಗಾರ(16) ಕೊಲೆಯಾದ ವಿದ್ಯಾರ್ಥಿ,ಬೆಳಗಾವಿಯ ಖಾಸಗಿ …

Read More »

ಸೆಬ್ಸಿಡಿ ರಿಲೀಸ್ ಮಾಡಲು 50 ಸಾವಿರ ಲಂಚ ಕೇಳಿದ್ದರು…!!

ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಸೇರಿ ಇಬ್ಬರು ಲೋಕಾಯುಕ್ತರ ಬಲೆಗೆ ಬೆಳಗಾವಿ: ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳ ತಂಡ ಬುಧವಾರ ರಾತ್ರಿ ಬೀಸಿದ ಬಲೆಗೆ ಬೆಳಗಾವಿ ಉದ್ಯಮಬಾಗದಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರ ( ಡಿಐಸಿ) ಕಚೇರಿಯ ಜಂಟಿ ನಿರ್ದೇಶಕ ಸೇರಿ ಇಬ್ಬರು ಅಧಿಕಾರಿಗಳು ಸಿಕ್ಕಿ ಬಿದ್ದಿದ್ದಾರೆ. ಜಂಟಿ ನಿರ್ದೇಶಕ ಶಿವಪುತ್ರಪ್ಪ ಆರ್.ಎಚ್. ಮತ್ತು ಸಹಾಯಕ ನಿರ್ದೇಶಕ ಪದ್ಮಕಾಂತ ಜಿ. ಎಂಬುವರೇ ಲೋಕಾಯುಕ್ತರ ಬಲೆಗೆ ಬಿದ್ದವರು. ಈ ಇಬ್ಬರೂ ಅಧಿಕಾರಿಗಳು ಸಬ್ಸಿಡಿ …

Read More »

ಥರ್ಡ್ ಗೇಟ್, ಥರ್ಡ್ ಕ್ಲಾಸ್ ಕಾಮಗಾರಿಗೆ 20 ಲಕ್ಷ ರೂ ದಂಡ…!!

ಬೆಳಗಾವಿ: ಉದ್ಘಾಟನೆಗೊಂಡ ಎರಡೇ ದಿನದಲ್ಲಿ ತನ್ನ ಕಳಪೆ ಕಾಮಗಾರಿಯಿಂದ ಭಾರೀ ಚರ್ಚೆಗೀಡಾಗಿದ್ದ ಟಿಳಕವಾಡಿಯ ೩ನೇ ರೈಲ್ವೆ ಗೇಟ್ ಬಳಿಯಲ್ಲಿ ಲೆವೆಟಲ್ ಕ್ರಾಸಿಂಗ್ ಗೇಟ್ ಸಂಖ್ಯೆ ೩೮೧ಕ್ಕೆ ಬದಲಾಗಿ ನಿರ್ಮಿಸಲಾದ ರಸ್ತೆ ಮೇಲ್ಸೇತುವೆ ಕಾಮಗಾರಿ ಗುತ್ತಿಗೆದಾರನಿಗೆ ₹ ೨೦ ಲಕ್ಷ ದಂಡ ವಿಧಿಸಲಾಗಿದೆ. ರೈಲ್ವೆ ಇಲಾಖೆಯ ಮುಖ್ಯ ಆಡಳಿತಾತ್ಮಕ ಅಧಿಕಾರಿ ನಿರ್ದೇಶನದ ಮೇರೆಗೆ ಮುಖ್ಯ ಎಂಜಿನಿಯರ್ ಈ ರೈಲ್ವೆ ರಸ್ತೆ ಮೇಲ್ಸೇತುವೆ ಕಾಮಗಾರಿ ಕುರಿತು ತನಿಖೆ ಕೈಗೊಂಡಿದ್ದರು. ರೈಲ್ವೆ ಮೇಲ್ಸೇತುವೆ ಮೇಲೆ …

Read More »

ಬೆಳಗಾವಿಯಲ್ಲಿ, ಪಾಲಿಕೆ ಜಾಗೆ ಅತಿಕ್ರಮಣ ತೆರವು

ಬೆಳಗಾವಿ- ಬೆಳಗಾವಿಯ ಬಸವೇಶ್ವರ ಸರ್ಕಲ್ ( ಗೋವಾ ವೇಸ್) ಹತ್ತಿರ ಪಾಲಿಕೆ ಜಾಗೆಯ ಅತಿಕ್ರಮಣ ವನ್ನು ಪಾಲಿಕೆ ಅಧಿಕಾರಿಗಳು ಇಂದು ಬೆಳಗ್ಗೆಯಿಂದ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ಪಾಲಿಕೆ ಜಾಗೆಯಲ್ಲಿ,ಕೆಲವರು ಸಣ್ಣಪುಟ್ಟ ಅಂಗಡಿ ಮತ್ತು ಮನೆಗಳನ್ನು ನಿರ್ಮಿಸಿಕೊಂಡಿದ್ದರು, ಬೆಳಗಾವಿ ಪಾಲಿಕೆ ವತಿಯಿಂದ ಜಾಗೆಯನ್ನು ತೆರವು ಮಾಡುವಂತೆ ನೋಟೀಸ್ ನೀಡಲಾಗಿತ್ತು. ಆದರೂ ಜಾಗೆಯನ್ನು ಅತೀಕ್ರಮಣದಾರರು ತೆರವು ಮಾಡದೇ ಇರುವದರಿಂದ ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆ ಶುರು …

Read More »

ಇವರಿಬ್ಬರು ಸೇರಿ ಬರೊಬ್ಬರಿ ಇಪ್ಪತ್ತೆರಡು ಜನ ಆದ್ರು ನೋಡಿ…!!

ಕೆಪಿಟಿಸಿಎಲ್ ಅಕ್ರಮ ಪರೀಕ್ಷಾ ಪ್ರಕರಣ ಮತ್ತಿಬ್ಬರ ಆರೋಪಿಗಳ ಬಂಧನ ಬೆಳಗಾವಿ- ಕೆಪಿಟಿಸಿಎಲ್ ಅಕ್ರಮ ಪರೀಕ್ಷಾ ಹರಗಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತ ಆರೋಪಿಗಳ ಸಂಖ್ಯೆ 22ಕ್ಕೇರಿದೆ. ಗೋಕಾಕ ತಾಲೂಕಿನ ಲೋಳಸೂರ ಗ್ರಾಮದ ಯಲ್ಲಪ್ಪ ಮಹದೇವ ರಕ್ಷಿ ( 26) ಮತ್ತು ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದ ನಾಗಪ್ಪ ಶಿವಪ್ಪ ದೊಡಮನಿ ( 27) ಎಂಬುವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ …

Read More »

ಹಿಂಡಲಗಾ ಜೈಲಿನಿಂದ ಬಿಡುಗಡೆ ಆದ್ಮೇಲೆ ಮತ್ತೆ ಅರೆಸ್ಟ್ ಆದ. ಆರೋಪಿ….!!!

ಬೆಳಗಾವಿ-ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಭಂದಿಸಿದಂತೆ, ಪ್ರಮುಖ ಆರೋಪಿಗೆ ಜಾಮೀನು ಸಿಕ್ಕು ಹೊರಬರುತ್ತಿದ್ದಂತೆ ಮತ್ತೆ ಅರೆಸ್ಟ್ ಆದ ಪ್ರಸಂಗ ಬೆಳಗಾವಿಯಲ್ಲಿ ನಡೆಯಿತು. ಬೆಳಗಾವಿ ಹಿಂಡಲಗಾ ಜೈಲು ಮುಂದೆಯೇ ಸಿಐಡಿ ಅಧಿಕಾರಿಗಳಿಂದ ಆರೋಪಿ ಅರೆಸ್ಟ್ ಆಗಿದ್ದಾನೆ.ಮೂಡಲಗಿ ತಾಲೂಕಿನ ಸಂಜೀವ ಭಂಡಾರಿಯನ್ನು ಸಿಐಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.2021 ರಲ್ಲಿ ನಡೆದಿದ್ದ ಪೊಲೀಸ್ ಕಾನ್ಸಸ್ಟೇಬಲ್ ನೇಮಕಾತಿಯಲ್ಲೂ ಅಕ್ರಮ ಎಸಗಿರುವ ಆರೋಪದ ಮೇಲೆ ಜಾಮೀನು ಪಡೆದ ಆರೋಪಿ ಮತ್ತೆ ಬಂಧನಕ್ಕೊಳಗಾಗಿದ್ದಾನೆ. ಕೆಪಿಟಿಸಿಎಲ್ ಕಿರಿಯ …

Read More »

ಮನೆ,ಮನೆಗೆ ಕನ್ನಡದ ಪತಾಕೆ ಹಾರಿಸಿ ಅಂತಾ ಹೇಳಿದ್ರು…!!

ಬೆಂಗಳೂರು: ಕನ್ನಡಿಗರ ಸ್ವಾಭಿಮಾನದ ಪ್ರತೀಕವಾದ ಕನ್ನಡದ ಧ್ವಜವನ್ನು ರಾಜ್ಯೋತ್ಸವದ ದಿನದಂದು ಎಲ್ಲ ಕನ್ನಡಿಗರು ತಮ್ಮ ಮನೆಯ ಮೇಲೆ ಹಾರಿಸುವ ಮೂಲಕ, ಕನ್ನಡದ ಕಣ್ವ ಎಂದೇ ಖ್ಯಾತರಾದ ಬಿ.ಎಮ್,ಶ್ರೀಕಂಠಯ್ಯನವರು ರಚಿಸಿದ “*ಏರಿಸಿ ಹಾರಿಸಿ ಕನ್ನಡದ ಬಾವುಟ, ಹಾರಿಸಿ ತೋರಿಸಿ ಕೆಚ್ಚೆದೆಯ ಬಾವುಟ*” ಎನ್ನುವಂತೆ ಅರ್ಥಪೂರ್ಣವಾಗಿ ಕನ್ನಡ ಪ್ರೇಮವನ್ನು ಮೆರೆಯೋಣ ಎಂದು *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಕರೆ* ನೀಡಿದ್ದಾರೆ. ನವೆಂಬರ್ ೧ ರಂದು ರಾಜ್ಯೋತ್ಸವವನ್ನು ಪ್ರತಿಯೊಬ್ಬ …

Read More »

ಫೈನಾನ್ಸ್ ಲೂಟಿ ಮಾಡಿದ ದರೋಡೆಕೋರರು ಅರೆಸ್ಟ್..

ಬೆಳಗಾವಿ- ಚಿಕ್ಕೋಡಿ ಪಟ್ಟಣದಲ್ಲಿರುವ ಪಿನ್ ಕೇರ್ ಸ್ಮಾಲ್ ಫನೈನಾನ್ಸ ಬ್ಯಾಂಕಿನ ಕೀಲಿ ಮುರಿದು ರಾತ್ರೋ ರಾತ್ರಿ ಲಕ್ಷಾಂತರ ರೂ ಲೂಟಿ ಮಾಡಿದ ದರೋಡೆಕೋರರನ್ನು ಚಿಕ್ಕೋಡಿ ಪೋಲೀಸರು ಅರೆಸ್ಟ್ ಮಾಡಿದ್ದಾರೆ. ಪಿನ್ ಕೇರ್ ಫೈನಾನ್ಸ್ ಸ್ಮಾಲ್ ಬ್ಯಾಂಕಿನ ಕೀಲಿ ಮುರಿದು ಸುಮಾರು ಆರು ಲಕ್ಷಕ್ಕೂ ಅಧಿಕ ಹಣವನ್ನು ಲೂಟಿ ಮಾಡಿ ಪರಾರಿಯಾಗಿದ್ದ ದರೋಡೆಕೋರರ ಜಾಲವನ್ನು ಚಿಕ್ಕೋಡಿ ಸಿಪಿಐ ಆರ್ ಆರ್ ಪಾಟೀಲ ಪತ್ತೆ ಮಾಡಿ ಲೂಟಿಕೋರರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. …

Read More »

ಗೋಕಾಕ್ ಸಾಹುಕಾರ್ ಬಂದು ಹೋದ್ಮೇಲೆ ಅಥಣಿ ಸಾಹುಕಾರ್ ಬಂದ್ರು…!!

ಬೆಳಗಾವಿ-ಸಂಡೇ ಎಲ್ಲ ನಾಯಕರು ರಜಾ ಮೂಡ್ ನಲ್ಲಿದ್ದರು ಸಂಡೇ ಸಂಜೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಬೆಳಗಾವಿ ಪ್ರವಾಸಿ ಮಂದಿರಕ್ಕೆ ಬರುತ್ತಿದ್ದಂತೆಯೇ ಬೆಳಗಾವಿ ಜಿಲ್ಲೆಯ ಬಹುತೇಕ ಎಲ್ಲ ಬಿಜೆಪಿ ನಾಯಕರು ಅಲ್ಲಿಗೆ ದೌಡಾಯಿಸಿದರು. ಸಂಜೆ 6 ಗಂಟೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಬೆಳಗಾವಿಯ ಸರ್ಕ್ಯೂಟ್ ಹೌಸ್ ಗೆ ಬಂದ್ರು,ಅರುಣ್ ಸಿಂಗ್ ಅವರು ರಮೇಶ್ ಜಾರಕಿಹೊಳಿ ಅವರ ಜೊತೆ ಸುಮಾರು ಒಂದು ಗಂಟೆ ಕಾಲ ಪ್ರತ್ಯೇಕವಾಗಿ …

Read More »

ಕಿಕ್ಕು ಏರಿತ್ತು….. ಕರೆಂಟ್ ಟಿಸಿ ಹಾರಿ ಹೋಗಿತ್ತು ಕಾರು ಪುಟ್ಪಾತ್ ಗೆ ನುಗ್ಗಿತ್ತು…..!!

ಪುಟ್ ಪಾತ್ ಮೇಲೆ ಹರಿದ ಕಾರು…!! ಬೆಳಗಾವಿ- ಕಳೆದ ರಾತ್ರಿ ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ವಾಹನವೊಂದು ರಸ್ತೆ ಬೀದಿಬದಿಯ ಪುಟ್ ಪಾತ್ ಮೇಲೆ ಹರಿದ ಘಟನೆ ಬೆಳಗಾವಿಯ ಸಿವ್ಹಿಲ್ ಆಸ್ಪತ್ರೆ ಎದುರಿನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರಸ್ತೆಯಲ್ಲಿ ನಡೆದಿದೆ. ಕಾರು ಪುಟ್ ಪಾತ್ ಮೇಲೆ ಹರಿದ ಪರಿಣಾಮವಾಗಿ ವಾಹನವು ಸಂಪೂರ್ಣ ಜಖಂಗೊಂಡಿದೆ. ಹೆಸ್ಕಾಂನ ಟಿಸಿ ಒಂದಕ್ಕೆ ರಭಸದಿಂದ ಡಿಕ್ಕಿ ಹೊಡದ ಪರಿಣಾಮ ಟಿಸಿಯು ಸಂಪೂರ್ಣ ಹಾಳಾಗಿದ್ದು, ಅದೃಷ್ಠಶಾವತ ಯಾವುದೇ ಪ್ರಾಣ ಹಾನಿಯು ಸಂಭವಿಸಿಲ್ಲ.. …

Read More »