Breaking News

LOCAL NEWS

ಬೆಳಗಾವಿ ಸಮೀಪದ ಬಡೇಕೊಳ್ಳಮಠದ ಬಳಿ, ಬಸ್ ಪಲ್ಟಿ..

ಬೆಳಗಾವಿ-ಬೆಳಗಾವಿ ಜಿಲ್ಲೆಯಾದ್ಯಂತ ಮಳೆ ಅಬ್ಬರ‌ ಮುಂದುವರೆದಿದೆ.ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಹೊಡೆದಿದೆ. ಬೆಳಗಾವಿ ತಾಲೂಕಿನ ಬಡಕೊಳ್ಳಿ ಕ್ರಾಸ್‌ ಬಳಿ ಬಸ್ ಪಲ್ಟಿಯಾದ ಘಟನೆ ನಡೆದಿದೆ.ಬೆಳಗಾವಿಯಿಂದ ಹಿರೇಕೆರೂರಗೆ ಹೋಗುತ್ತಿದ್ದ ಸರ್ಕಾರಿ ಬಸ್, ಮಳೆಯಿಂದ ರಸ್ತೆ ಕಾಣದೇ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.ಅದೃಷ್ಟವಶಾತ್ ಬಸ್ ನಲ್ಲಿ ಪ್ರಯಾಣ ಮಾಡ್ತಿದ್ದ 35ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಐದು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ …

Read More »

ಬೆಳಗಾವಿಯಲ್ಲಿ,ಚಿರತೆ ಪತ್ತೆಗೆ ಕ್ಯಾಮರಾ ಪಹರೆ…!!!

ಬೆಳಗಾವಿ-ಕಳೆದ ಮೂರು ದಿನಗಳಿಂದ ಬೆಳಗಾವಿ ನಗರದಲ್ಲಿ ಕಣ್ಣು ಮುಚ್ಚಾಲೆಯಾಟ ಆಡುತ್ತಿರುವ ಚಿರತೆ ಪತ್ತೆಗೆ ಚಿರತೆ ಕಾಣಿಸಿಕೊಂಡ ಪ್ರದೇಶದಲ್ಲಿ ಸಿಸಿ ಟಿವ್ಹಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಕಾರ್ಮಿಕನ ಮೇಲೆ ಹಲ್ಲೆ ಮಾಡಿ ಮಾಯವಾಗಿರುವ,ಚಿರತೆ ಮರಳಿ ಗೂಡು ಸೇರಿದೆಯಾ..? ಅಥವಾ ಬೆಳಗಾವಿಯಲ್ಲೇ ಉಳಿದುಕೊಂಡಿದೆಯಾ..? ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನು ಅರಣ್ಯ ಇಲಾಖೆಯ ಸಿಬ್ಬಂಧಿಗಳು ನಡೆಸಿದ್ದಾರೆ. ಇವತ್ತು ಬೋನು ಗಾಲ್ಫ್ ಮೈದಾನಕ್ಕೆ ಶಿಪ್ಟ್ ಮಾಡಿದ್ದಾರೆ. ಚಿರತೆಯ ಮೇಲೆ ನಿಗಾ ಇಡಲು ಅರಣ್ಯ ಇಲಾಖೆಯ ಸಿಬ್ಬಂದಿ …

Read More »

ಅನಾಹುತದಿಂದ ಅಜ್ಜಾ,ಅಜ್ಜಿ ಜಸ್ಟ್ ಮಿಸ್..!

ಬೆಳಗಾವಿ-ಬೆಳಗಾವಿ ನಗರದಲ್ಲಿ ಮಳೆಯ ಆರ್ಭಟ ಜೋರಾಗಿದೆ.ಧಾರಾಕಾರ ಮಳೆಗೆ ನಗರದಲ್ಲಿ ಮನೆಗಳು ಕುಸಿಯುತ್ತಿವೆ.ನಗರದಲ್ಲಿ ಬಿಡುವಿಲ್ಲದೇ ಸುರಿಯುತ್ತಿರುವ ಭಯಾನಕ ಮಳೆಗೆ ಶಹಾಪುರದ ಸಪಾರ್ ಗಲ್ಲೆಯಲ್ಲಿ ಎರಡು ಮನೆ ಕುಸಿದು ಬಿದ್ದಿವೆ. ಬೆಳಗಾವಿಯ ಶಹಾಪೂರ ಪ್ರದೇಶದ ಸಫಾರಿ ಗಲ್ಲಿಯ ಶಂಕ್ರೆವ್ವಾ ಹಂಗರಕಿ, ಮಲ್ಲವ್ವಾ ಕುಮಶೆಟ್ಟಿ ಎಂಬುವರ ಮನೆ ಕುಸಿದು ಅದೃಷ್ಟವಶಾತ್ ಅಜ್ಜ ಮತ್ತು ಅಜ್ಜಿ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಕುಸಿದು ಬೀಳುವ ಕ್ಷಣದಲ್ಲಿ ಅಜ್ಜ ನೀರು ತುಂಬಲು ಹೊರ ಬಂದಿದ್ದ, ಅಡುಗೆ ಮಾಡುತ್ತಿದ್ದ …

Read More »

ಬೆಳಗಾವಿಯಲ್ಲಿ ಫ್ರೆಂಡ್ ಶಿಪ್ ದಿನವೇ ಅಗಲಿದ ಚಡ್ಡಿ ದೋಸ್ತರು…

*ಬೆಳಗಾವಿಯಲ್ಲಿ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿ; ಸ್ನೇಹಿತರಿಬ್ಬರು ದುರ್ಮರಣ* ಬೆಳಗಾವಿ: ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಫ್ಕ್ಕಿರೆ ಹೊಡೆದ ಪರಿಣಾಮ ಆಪ್ತಸ್ನೇಹಿತರಿಬ್ಬರು ಸಾವನ್ನಪ್ಪಿದ ಘಟನೆ ತಾಲೂಕಿನ ಬಾಳೇಕುಂದ್ರಿಯ ಪಂತ ನಗರದಲ್ಲಿ ನಡೆದಿದೆ. ತಾಲೂಕಿನ‌ ಸುಳೇಭಾವಿ‌ ಗ್ರಾಮದ ಸೋಮಯ್ಯ ಪ್ರಭು ಖವಾಶಿ (22) ಹಾಗೂ ಮೂಲತಃ ಕಿತ್ತೂರು ತಾಲೂಕಿನ ಶಿವನೂರು ಗ್ರಾಮದ ಸದ್ಯ ಸುಳೇಭಾವಿ ನಿವಾಸಿ ವಿಠ್ಠಲ ಗಣಪತಿ ಡವಳಿ(22) ಎಂಬ ಇಬ್ಬರು ಸ್ನೇಹಿತರು ಸಾವನ್ನಪ್ಪಿದ್ದಾರೆ. ಮೃತ ಯುವಕರು ಬೆಳಗಾವಿಯಿಂದ ಸುಳೇಭಾವಿ ಕಡೆಗೆ …

Read More »

ಬೆಳಗಾವಿಯಲ್ಲಿ ಮೂರು ದಿನಗಳಿಂದ ಚಿರತೆ ನಾಪತ್ತೆ, ಸಾರ್ವಜನಿಕರಲ್ಲಿ ಆತಂಕ

ಬೆಳಗಾವಿಕಳೆದ ಮೂರು ದಿನಗಳಿಂದ ಬೆಳಗಾವಿಯಲ್ಲಿ ಚಿರತೆಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷವಾದ ಮಾಹಿತಿ ದೊರೆತ ಕಾರಣ,ಅರಣ್ಯ ಇಲಾಖೆ ಸಿಬ್ಬಂದಿಯಿಂದ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಕಳೆದ ಎರಡು ದಿನಗಳ ಹಿಂದೆ ಜಾಧವ ನಗರದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ನಾಪತ್ತೆಯಾಗಿದೆ.ಕಟ್ಟಡ ಕಾರ್ಮಿಕ ಸಿದರಾಯಿ ಎಂಬುವರ ಮೇಲೆ ದಾಳಿ ಮಾಡಿದ್ದ ಚಿರತೆ ಕಾಣದಂತೆ ಮಾಯವಾಗಿದೆ.ಜಾಧವ್ ನಗರದಲ್ಲಿ ಚಿರತೆ ಪ್ರತ್ಯಕ್ಷವಾದ ಸ್ಥಳದಿಂದ ಒಂದು ಕಿಲೋಮೀಟರ್ ಅಂತರದಲ್ಲಿರುವ ಗಾಲ್ಫ್ ಮೈದಾನವಿದ್ದು ಈ ಮೈದಾನದಲ್ಲಿ ಚಿರತೆ …

Read More »

ಲಾರಿ -ಬೈಕ್ ಡಿಕ್ಕಿ ಓರ್ವನ ಸಾವು. ಮತ್ತೋರ್ವನ ಸ್ಥಿತಿ ಚಿಂತಾಜನಕ….

ಬೆಳಗಾವಿ- ಲಾರಿ ಮತ್ತು ಬೈಕ್ ನಡುವೆ ಭಾರಿ ರಸ್ತೆ ಅಪಘಾತ ಸಂಭವಿಸಿದೆ.ಚಾಲಕನ ನಿಯಂತ್ರಣ ತಪ್ಪಿ ಬೈಕ್ ಸವಾರರ ಮೇಲೆ ಹಾರಿದ ಲಾರಿ ಓರ್ವನನ್ನು ಬಲಿ ಪಡೆದಿದೆ. ಈ ಅಪಘಾತದಲ್ಲಿ, ಸ್ಥಳದಲ್ಲಿ ಓರ್ವ ಸಾವು,ಮತೊರ್ವನ ಪರಿಸ್ಥಿತಿ ಚಿಂತಾಜನಕವಾಗಿದೆ. ಬೆಳಗಾವಿ ಸಮೀಪದ ಪಂತನಗರ ಬಳಿ ಘಟನೆ ನಡೆದಿದೆ.ಸ್ಥಳಕ್ಕೆ ದೌಡಾಯಿಸಿದ್ದ ಮಾರಿಹಾಳ ಪೋಲಿಸರು ಗಾಯಗೊಂಡವನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ‌.ಸದ್ಯ ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಅಂಧರ್ ಬಾಹರ್ ಆಡುವಾಗ ರೇಡ್ ಬಿತ್ತು,ಲಕ್ಷ,ಲಕ್ಷ ಸಿಕ್ತು ನೋಡ್ರಿ…

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಪೋಲೀಸ್ರು ಅಂಧರ್- ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವಾಗ ಪೋಲೀಸರು ರೇಡ್ ಮಾಡಿ 12 ಜನರನ್ನು ವಶಕ್ಕೆ ಪಡೆದು ಬರೊಬ್ಬರಿ ಒಂದು ಲಕ್ಷ 85 ಸಾವಿರ ₹ ನಗದು ಹಣವನ್ನು ಜಪ್ತು ಮಾಡಿಕೊಂಡಿದ್ದಾರೆ. ಗೋಕಾಕ್ ತಾಲ್ಲೂಕಿನ ಕೊಣ್ಣೂರ ಗ್ರಾಮದಲ್ಲಿ ಇಸ್ಪೀಟ್ ಆಟ ನಡೆದಿತ್ತು ಸಿಇಎನ್ ಪೋಲೀಸ್ರು ರೇಡ್ ಮಾಡಿದ್ರು ಕೆಲವು ಜನ ಓಡಿ ಹೋದ್ರು 12 ಜನ ಪೋಲೀಸರ ಬಲೆಗೆ ಬಿದ್ರು,ಜೂಜಾಟ ಅಡುತ್ತಿದ್ದ 1.85000 ಸಾವಿರ ಹಣ ಕೂಡಾ …

Read More »

9 ನೇ ತಾರೀಖಿಗೆ ಗೌನ್ ಕೊಡ್ತೀವಿ, 15 ಕ್ಕೇ ಅವರೇ, ಧ್ವಜ ಹಾರಿಸಲಿ- ಸತೀಶ್ ಜಾರಕಿಹೊಳಿ

ಬೆಳಗಾವಿ-ವಿಧಾನಸಭೆ ಚುನಾವಣೆ ಮುಗಿಯುವ ವರೆಗೂ ಬೆಳಗಾವಿ ಮಹಾಪೌರ,ಉಪಮಹಾಪೌರ ಚುನಾವಣೆ ನಡೆಯೋದಿಲ್ಲ ಅಲ್ಲಿಯವರೆಗೂ ಸ್ಥಳೀಯ ಇಬ್ಬರು ಶಾಸಕರು ಆ ಸ್ಥಾನದ ಜವಾಬ್ದಾರಿ ನಿರ್ವಹಿಸುತ್ತಾರೆ.ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ,ಪಕ್ಕದ ಹುಬ್ಬಳ್ಳಿಯಲ್ಲಿ ಮೇಯರ್ ಉಪ ಮೇಯರ್ ಚುನಾವಣೆ ಆಗಿದೆ.ನಮ್ಮಲ್ಲಿ ಏಕೆ ಆಗುತ್ತಿಲ್ಲ,ಎನ್ನುವ ಚರ್ಚೆ ಬಿಜೆಪಿಯಲ್ಲೇ ಶುರುವಾಗಿದೆ‌.ಎಂಎಲ್ಎ ಇಲೆಕ್ಷನ್ ಆಗುವವರೆಗೂ ಬಹುಶ ಬೆಳಗಾವಿ ಮೇಯರ್ ಉಪ ಮೇಯರ್ ಚುನಾವಣೆ ಆಗೋದಿಲ್ಲ,ಅಲ್ಲಿಯವರೆಗೂ ಇಬ್ಬರು …

Read More »

ಬೆಳಗಾವಿ ಜಿಲ್ಲೆಯಲ್ಲಿ ಸೆಂಚ್ಯುರಿ ಬಾರಿಸಿದ ಕೊರೋನಾ ಮಹಾಮಾರಿ…!!

ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ನೂರರ ಗಡಿ ದಾಟಿದ ಕೋವಿಡ್ ಸೋಂಕಿತ ಪ್ರಕರಣಗಳು…! ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ‌ಕೋವಿಡ್ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ ಆಗಿದ್ದು ನೂರರ ಗಡಿದಾಟಿದೆ. ಜಿಲ್ಲೆಯಲ್ಲಿ ಮತ್ತೆ ಕೊರೊನಾ ಆತಂಕದ ಭೀತಿ ಎದುರಾಗಿದ್ದು ಜಿಲ್ಲಾಡಳಿತ ಅನಾಹುತ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳಬೇಕಿದೆ. ಬೆಳಗಾವಿ ಜಿಲ್ಲಾ ಆರೋಗ್ಯ ಇಲಾಖೆ ಹೊರಡಿಸಿರುವ ಇಂದಿನ ಕೋವಿಡ್ ಬುಲೆಟಿನ್ ನಲ್ಲಿ 110ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಅಥಣಿಯಲ್ಲಿ 12, ಬೆಳಗಾವಿ ತಾಲೂಕಿನಲ್ಲಿ 14, …

Read More »

ಬೆಳಗಾವಿಗೆ ನುಗ್ಗಿದ ಚಿರತೆಯ ಶೋಧ ಕಾರ್ಯಾಚರಣೆಯ ಫುಲ್ ರಿಪೋರ್ಟ್…!!

ಚಿರತೆ ಸಿಗಲಿಲ್ಲ,ಶೋಧಕಾರ್ಯಾಚರಣೆ ನಿಂತಿಲ್ಲ….!! ಬೆಳಗಾವಿ- ಇಂದು ಬೆಳಗ್ಗೆ ಬೆಳಗಾವಿ ನಗರದಲ್ಲಿ ಚಿರತೆ ನುಗ್ಗಿ ಕಟ್ಟಡ ಕಾರ್ಮಿಕನ ಮೇಲೆ ಅಟ್ಯಾಕ್ ಮಾಡಿ ಮಾಯವಾಗುವದರ ಮೂಲಕ ಈ ಚಿರತೆ ಬೆಳಗಾವಿ ಮಹಾನಗರದಲ್ಲಿ ಆತಂಕ ಸೃಷ್ಟಿಸಿತು. ಚಿರತೆ ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆಯೇ ಪೋಲೀಸರು,ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಚಿರತೆಯ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಿದ್ರು, ಪೋಲೀಸ್ರು ಜಾಧವ ನಗರದ ಪ್ರತಿಯೊಂದು ಮನೆಯ ಸಿಸಿ ಟಿವ್ಹಿ ಕ್ಯಾಮರಾ ಚೆಕ್ ಮಾಡಿದ್ರು,ಚಿರತೆಯ ಚಲನವಲನಗಳ ಬಗ್ಗೆ ಮಾಹಿತಿ …

Read More »

ಸ್ಮಾರ್ಟ್ ಸೊಲ್ಯೂಷನ್ಸ್ ಚಾಲೆಂಜ್‌ನಲ್ಲಿ ಬೆಳಗಾವಿ ಪ್ರಥಮ..

“ಇನ್ ಕ್ಲೂಸಿವ್ ಸಿಟಿ ಅವಾರ್ಡ್-2022” ರ ಗರಿ ಮುಡಿಗೇರಿಸಿಕೊಂಡ ಬೆಳಗಾವಿ ಸ್ಮಾರ್ಟಸಿಟಿ ಬೆಳಗಾವಿ: 28: ಬೆಳಗಾವಿ ಸ್ಮಾರ್ಟ್ ಸಿಟಿಯು ಪ್ರತಿಷ್ಠಿತ ವಿಶ್ವಸಂಸ್ಥೆ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್ (ಓIUಂ) ಏರ್ಪಡಿಸಿದ ಸರ್ವ ತೋಮುಖ ನಗರ ಸ್ಪರ್ಧೆಯ ಸ್ಮಾರ್ಟ್ ಸೊಲ್ಯೂಷನ್ಸ್ ಚಾಲೆಂಜ್‌ನಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದೆ. ಪ್ಯಾನ್ ಸಿಟಿ ಇಂಪ್ಲಿಮೆಂಟೆಡ್ ಸೊಲ್ಯೂಷನ್ಸ್ ವಿಭಾಗದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಹಾಗೂ ಅದರ ಬಹು ಆಯಾಮದ ಒಳಗೊಳ್ಳುವಿಕೆಗಾಗಿ ಬೆಳಗಾವಿ ಸ್ಮಾರ್ಟ್ …

Read More »

ಮಗನ ಮೇಲೆ ಚಿರತೆ ದಾಳಿ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವು

ಬೆಳಗಾವಿ-ಬೆಳಗಾವಿಯಲ್ಲಿ ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ ಪ್ರಕರಣಕ್ಕೆ ಸಮಂಧಿಸಿದಂತೆ ಕಟ್ಟಡ ಕಾರ್ಮಿಕನಿಗೆ ಸಣ್ಣ ಪುಟ್ಟ ಗಾಯ ಆಗಿದ್ದು,ಆದ್ರೆಮಗನ ಮೇಲೆ ಚಿರತೆ ದಾಳಿ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವನ್ನಪ್ಪಿದ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಖನಗಾವಿ ಕೆ.ಹೆಚ್. ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು‌.ಇಂದು ಮಧ್ಯಾಹ್ನ ಜಾಧವ್ ನಗರದಲ್ಲಿ ಕಾರ್ಮಿಕನ ಮೇಲೆ ದಾಳಿ ಮಾಡಿದ್ದ ಚಿರತೆ ಕಾಣೆಯಾಗಿದೆ.ಒಂದು ಕಡೆ ಚಿರತೆಯ ಪತ್ತೆ ಮಾಡಲು ಶೋಧ ಕಾರ್ಯಾಚರಣೆ ನಡೆಯುತ್ತಿದ್ದು,ಚಿರತೆ ದಾಳಿಯಿಂದ …

Read More »

ಬೆಳಗಾವಿಯ ಗಣ್ಯರು ವಾಸಿಸುವ ಬಡಾವಣೆಯಲ್ಲಿ ಕಾಣದಂತೆ ಮಾಯವಾದ ಚಿರತೆ…!!

  ಬೆಳಗಾವಿ-ಇಂದು ಬೆಳಗ್ಗೆ ಚಿರತೆಯೊಂದು ಬೆಳಗಾವಿಯ ವಿವಿಐಪಿ ಬಡಾವಣೆಗೆ ನುಗ್ಗಿದೆ.ಕಟ್ಟಡ ಕಾರ್ಮಿಕನ ಮೇಲೆ ದಾಳಿ ಮಾಡಿರುವ ಚಿರತೆ ಈಗ ನಾಪತ್ತೆಯಾಗಿದೆ. ಬೆಳಗಾವಿಯ ವಿವಿಐಪಿ ಬಡಾವಣೆ ಎಂದೇ ಕರೆಲ್ಪಡುವ ಹನುಮಾನ ನಗರ,ಜಾಧವ ನಗರದ ಪರಿಸರದಲ್ಲಿ ಚಿರತೆ ನುಗ್ಗಿರುವ ವಿಚಾರ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಕಾರ್ಮಿಕನ ಮೇಲೆ ಅಟ್ಯಾಕ್ ಮಾಡಿರುವ ಚಿರತೆ,ಜಾಧವ ನಗರ ಹನುಮಾನ ನಗರದ ಪ್ರದೇಶದಲ್ಲಿ ಮಾಯವಾಗಿದ್ದು,ಚಿರತೆ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಚಿರತೆ ಕಾಣೆಯಾದ ಪ್ರದೇಶದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ …

Read More »

ಚಿರತೆ ಹಿಡಿಯಲು ಗದಗದಿಂದ ಬೆಳಗಾವಿಗೆ ಬರುತ್ತಿದೆ.ಫಾರೆಸ್ಟ್ ತಂಡ..

ಬೆಳಗಾವಿ- ಇಂದು ಬೆಳಗ್ಗೆ ಬೆಳಗಾವಿ ಮಹಾನಗರದ ಹನುಮಾನ ನಗರಕ್ಕೆ ಹೊಂದಿಕೊಂಡಿರುವ ಜಾಧವ ನಗರದ ಈಜುಕೋಳದ ಬಳಿ ಚಿರತೆಯೊಂದು ಕಟ್ಟಡ ಕಾರ್ಮಿಕನ ಮೇಲೆ ಅಟ್ಯಾಕ್ ಮಾಡಿದೆ. ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದ ಕಾರ್ಮಿಕನ ಮೇಲೆ ಅಟ್ಯಾಕ್ ಮಾಡಿರುವ ಚಿರತೆ,ಕಂಪೌಂಡ್ ಗೋಡೆ ಜಿಗಿದು, ಜಾಧವ ನಗರದ ಓಪನ್ ಫೇಸ್ ನಲ್ಲಿ ಬೆಳೆದು ನಿಂತಿರುವ ಗಿಡಗಂಟೆಗಳಲ್ಲಿ ಅಡಗಿದೆ.ಸ್ಥ ಳಕ್ಕೆ ಪೋಲೀಸ್ ಅಧಿಕಾರಿಗಳು,ಅರಣ್ಯ ಇಲಾಖೆಯ ಅಧಿಕಾರಿಗಳು,ಎಸ್ ಡಿ ಆರ್ ಎಫ್ ತಂಡ ಆಗಮಿಸಿ ಚಿರತೆ ಪತ್ತೆಗಾಗಿ ಶೋಧ …

Read More »

ಗ್ಯಾಸ್ ಲಿಕೇಜ್, ಬೆಂಕಿ ಅವಘಡ ಸಾರ್ವಜನಿಕರಲ್ಲಿ ಆತಂಕ..

ಬೆಳಗಾವಿ- ಗ್ಯಾಸ್ ಲಿಕೇಜ್ ಆಗಿ ಓಮಿನಿ ಕಾರೊಂದು ಧಗಧಗ ಬೆಂಕಿಯಲ್ಲಿ ಸುಟ್ಟು ಭಸ್ಮವಾದ ಘಟನೆ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ. ಇಂದು ಬೆಳಗ್ಗೆ ಸಂಕೇಶ್ವರ ಪಟ್ಟಣದ ಬಸ್ ನಿಲ್ಧಾಣದ ಬಳಿ ಓಮಿನಿ ಕಾರಿನಲ್ಲಿ ಹೊಗೆ ಕಾಣಿಸಿದ ಕಾರಣ ಕಾರು ನಿಲ್ಲಿಸಿ ಹೊರಗೆ ಬರುವಷ್ಟರಲ್ಲಿ ಕಾರಿನಲ್ಲಿ ಬೆಂಕಿ ಹರಡಿ ಕ್ಷಣಾರ್ಧದಲ್ಲಿ ಓಮಿನಿ ಕಾರಿನಲ್ಲಿ ಧಗಧಗ ಹೊತ್ತಿ ಉರಿದಿದೆ.ಬೆಂಕಿ ಅವಘಡ ಸಂಭವಿಸುತ್ತಿದ್ದಂತೆಯೇ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿ ಕೆಲ ಕಾಲ ಇಲ್ಲಿ …

Read More »