Breaking News
Home / ಬೆಳಗಾವಿ ನಗರ / ಅಧಿವೇಶನ ಪೂರ್ವತಯಾರಿ: ಸ್ಪೀಕರ್ ಸೋಮವಾರ ಬೆಳಗಾವಿಗೆ

ಅಧಿವೇಶನ ಪೂರ್ವತಯಾರಿ: ಸ್ಪೀಕರ್ ಸೋಮವಾರ ಬೆಳಗಾವಿಗೆ

ಬೆಳಗಾವಿ,  ಇದೇ 21ರಿಂದ ಆರಂಭಗೊಳ್ಳಲಿರುವ ಚಳಿಗಾಲ ಅಧಿವೇಶನದ ಪೂರ್ವತಯಾರಿ ಪರಿಶೀಲನೆಗಾಗಿ ಕರ್ನಾಟಕ ವಿಧಾನಸಭೆ ಅಧಕ್ಷ ಕೆ.ಬಿ.ಕೋಳಿವಾಡ ಅವರು ಸೋಮವಾರ(ನ.7) ನಗರಕ್ಕೆ ಆಗಮಿಸಲಿದ್ದು, ಎರಡು ದಿನಗಳ ಕಾಲ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.
ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಮಧ್ಯಾಹ್ನ 12.30 ಚಳಗಾಲ ಅಧಿವೇಶನದ ಪೂರ್ವತಯಾರಿ ಕುರಿತಂತೆ ಅಧಿಕಾರಿಗಳ ಸಭೆಯನ್ನು ಅವರು ನಡೆಸಲಿದ್ದಾರೆ.
ರಾತ್ರಿ ನಗರದಲ್ಲಿ ವಾಸ್ತವ್ಯ ಮಾಡಲಿರುವ ವಿಧಾನಸಭಾ ಅಧ್ಯಕ್ಷ ಕೋಳಿವಾಡ ಅವರು, ಮಂಗಳವಾರ(ನ.8) ಬೆಳಿಗ್ಗೆ 11 ಗಂಟೆಗೆ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಪೂರ್ವ ತಯಾರಿ ಕುರಿತು ಅಧಿಕಾರಿಗಳ ಸಭೆಯನ್ನು ನಡೆಸುವರು.
ಸಭೆಯ ಬಳಿಕ ಸಂಜೆ 4.25ಕ್ಕೆ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *