Breaking News

LOCAL NEWS

18 ರಂದು ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಕೆ- ಪ್ರಿಯಾಂಕಾ ಜಾರಕಿಹೊಳಿ

ಏಪ್ರಿಲ್ 18ಕ್ಕೆ ನಾಮಪತ್ರ ಸರಳ ರೀತಿಯಲ್ಲಿ ಸಲ್ಲಿಸುತ್ತೇನೆ: ಪ್ರಿಯಂಕಾ ಜಾರಕಿಹೊಳಿ ಬೆಳಗಾವಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾನು ಏಪ್ರಿಲ್ 18 ರಂದು ನಾಮಪತ್ರವನ್ನು ಸರಳ ರೀತಿಯಲ್ಲಿ ಸಲ್ಲಿಸಲಿದ್ದೇನೆ. ಕಾರಣ ತಾವೆಲ್ಲರೂ ಸಹಕರಿಸಬೇಕು ಎಂದು ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, ಏಪ್ರಿಲ್ 18 ರಂದು ನಾಮಪತ್ರವನ್ನು ಸರಳ ರೀತಿಯಲ್ಲಿ ಸಲ್ಲಿಸಲಿದ್ದೇನೆ. ಅಂದು …

Read More »

ಮಿನಿಸ್ಟರ್ ಲಕ್ಷ್ಮೀ ಹೆಬ್ಬಾಳಕರ್ ಪುತ್ರನ ಆಸ್ತಿ ಎಷ್ಟು ಗೊತ್ತಾ..???

ಲಕ್ಷ್ಮೀ ಪುತ್ರ ಮೃಣಾಲ್ ಆಸ್ತಿ 13 ಕೋಟಿ….!! ಬೆಳಗಾವಿ: ಬೆಳಗಾವಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಇವತ್ತು ನಾಮಪತ್ರ ಸಲ್ಲಿಸಿದ್ದಾರೆ ನಾಮಪತ್ರದ ಜೊತೆ ಸಲ್ಲಿಸಿದ ದಾಖಲೆಗಳ ಪ್ರಕಾರ ಅವರ ಬಳಿ ₹13.63 ಕೋಟಿ ಮೌಲ್ಯದ ಆಸ್ತಿ ಇದೆ. ₹10.01 ಕೋಟಿ ಮೌಲ್ಯದ ಚರಾಸ್ತಿ, ₹3.62 ಕೋಟಿ ಸ್ಥಿರಾಸ್ತಿ ಇದೆ. ₹4.20 ಕೋಟಿ ಮೌಲ್ಯದ ವಿವಿಧ ಶೇರ್‌ಗಳಿವೆ. ₹6.16 ಕೋಟಿ ಸಾಲ ಮಾಡಿರುವ ಅವರ ಬಳಿ ಯಾವುದೇ ವಾಹನವಿಲ್ಲ. …

Read More »

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ ಎನ್ನುವದು ಪಬ್ಲಿಕ್ ಡಿಮ್ಯಾಂಡ್ ಕೂಡಾ ಇದೆ. ಧಾರವಾಡ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೆ ಏನು ಸಂಬಂಧ ? ಎಂದು ಎಲ್ಲರೂ ವಿಚಾರ ಮಾಡಬಹುದು ಧಾರವಾಡ ಅಭ್ಯರ್ಥಿ ಬದಲಾದ್ರೆ ಅದರ ಎಫೆಕ್ಟ್ ಬೆಳಗಾವಿ ಜಿಲ್ಲೆಗೂ ಆಗುವ ಎಲ್ಲ ಸಾಧ್ಯತೆಗಳಿವೆ. ಕಾಂಗ್ರೆಸ್ ಪಕ್ಷ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಿಂದ …

Read More »

ಸಂಜಯ ಪಾಟೀಲ ವಿರುದ್ಧ ದೂರು ದಾಖಲು…

ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ; ಸಂಜಯ್ ಪಾಟೀಲ್ ವಿರುದ್ಧ ಪ್ರಕರಣ ದಾಖಲು ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಿವಾದಾತ್ಮಕ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ರಾಜ್ಯ ಮಹಿಳಾ ಆಯೋಗ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿದೆ. ಈ ಕುರಿತಾಗಿ ಸಂಜಯ್ ಪಾಟೀಲ್ ಅವರಿಗೆ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ. ಈ ವಿಚಾರವಾಗಿ ನಿನ್ನೆ ಕಾಂಗ್ರೆಸ್ ಕಾರ್ಯಕರ್ತೆಯರು ಬೆಳಗಾವಿಯ ಆದರ್ಶ ನಗರದಲ್ಲಿರುವ …

Read More »

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಕಂಪ್ಲೇಂಟ್ ಕೊಟ್ಟ ಸಂಜಯ ಪಾಟೀಲ…!

ಬೆಳಗಾವಿ -ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಮಾಜಿ ಶಾಸಕ ಸಂಜಯ ಪಾಟೀಲ ಅವರು ಅವಮಾನಿಸಿದ ಪ್ರಕರಣ ಈಗ ಪೋಲೀಸ್ ಠಾಣೆಯ ಮೆಟ್ಟಲೇರಿದೆ. ನಿನ್ನೆ ರಾತ್ರಿ ಲಕ್ಷ್ಮೀ ಹೆಬ್ಬಾಳಕರ್ ಬೆಂಬಲಿಗರು ತಮ್ಮ ನಿವಾಸಕ್ಕೆ ಮುತ್ತಿಗೆ ಹಾಕಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಅವರ ಬೆಂಬಲಿಗ ಮಹಿಳೆಯರ ಮೇಲೆ ದೂರು ಸಲ್ಲಿಸಿದ್ದಾರೆ. ಸಂಜಯ ಪಾಟೀಲ ಅವರ ಮನೆ ಮುಂದೆ ಕಾನೂನು ಬಾಹಿರವಾಗಿ …

Read More »

ಪೆಗ್ ಅಂದ್ರೆ ಎನರ್ಜಿ ಡ್ರಿಂಕ್ ಅಂದ್ರು ಸಂಜಯ ಪಾಟೀಲ…..!!

ಬೆಳಗಾವಿ-ನಾನು ನಿನ್ನೆ ಹಿಂಡಲಗಾದಲ್ಲಿ ಮಾಡಿದ ಭಾಷಣದಲ್ಲಿ ಹೆಬ್ಬಾಳಕರ್ ಅವರಿಗೆ ನಿಜವಾಗಿಯೂ ಹಿಂದುತ್ವದ ಬಗ್ಗೆ ಕಾಳಜಿ ಇದ್ದಲ್ಲಿ, ಅವರು ಗೋ ಹತ್ಯೆ ನಿಷೇಧ ಕಾನೂನು,ಮತಾಂದರ ಕಾಯ್ದೆಗೆ ಸಪೋರ್ಟ್ ಮಾಡಲಿ ಎಂದು ಮಾತಾಡಿದ್ದೇನೆ.ಅವರ ಬಗ್ಗೆ ಹಗುರವಾಗಿ ಮಾತಾಡಿಲ್ಲ.ಒಂದು ಪೆಗ್ ಬಗ್ಗೆ ಮಾತಾಡಿದ್ದೇನೆ.ಎಲ್ಲಿಯೂ ಅವರ ಹೆಸರು ಉಲ್ಲೇಖ ಮಾಡಿಲ್ಲ,ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ,ಪೆಗ್ ಅಂದ್ರೆ ಶೆರೆ ಅಂತಾ ಯಾಕೆ ತಿಳ್ಕೋತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್ ಎಂದು ಮಾಜಿ ಶಾಸಕ ಸಂಜಯ …

Read More »

ನಾಳೆ ಬೆಳಗಾವಿಗೆ ಡಿ.ಕೆ ಬರ್ತಾರೆ, ಮೀಟೀಂಗ್ ಮಾಡ್ತಾರೆ….!!

ಬೆಳಗಾವಿ: ನಾಳೆ ಸೋಮವಾರದಿಂದ ಬೆಳಗಾವಿಯಲ್ಲಿ ಲೋಕಸಭಾ ಚುನಾವಣೆ ರಂಗೇರಲಿದೆ.ಬೆಳಗಾವಿ ಲೋಕಸಭಾ ಕ್ಷೇತ್ರದ ಜನ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಬೆಳಗ್ಗೆ ಸುಳೇಬಾವಿ ಮಹಾಲಕ್ಷ್ಮೀ ದೇವಸ್ಥಾನ ಮತ್ತು ಹಿಂಡಲಗಾ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ 11 ಗಂಟೆಗೆ ಮೆರವಣಿಗೆಯಲ್ಲಿ ಆಗಮಿಸಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವರು.ಹಿಂಡಲಗಾ ಗಣಪತಿ ಮಂದಿರದಿಂದ ಭವ್ಯ ಮೆರವಣಿಗೆ ಆರಂಭವಾಗಿ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಳ್ಳಲಿದೆ.ಮೆರವಣಿಗೆಯಲ್ಲಿ ಸಹಸ್ರಾರು ಜನ ಪಾಲ್ಗೊಳ್ಳುತ್ತಾರೆ.ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ …

Read More »

ಬೆಳಗಾವಿಯ ಶಾಸಕ, ಪಕ್ಷ ಸಂಘಟನೆಯ ವಿಚಾರದಲ್ಲೂ, ಪ್ರಚಾರದಲ್ಲೂ ಸ್ಟಾರ್….!!

ಬೆಳಗಾವಿಯ ಶಾಸಕನಿಗೆ ಹೊರ ರಾಜ್ಯಗಳಲ್ಲೂ ಡಿಮ್ಯಾಂಡು…!! ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲರಿಗೆ ಈಗ ಕರ್ನಾಟಕ ಹೊರತುಪಡಿಸಿ ಹೊರ ರಾಜ್ಯಗಳಲ್ಲೂ ಫುಲ್ ಡಿಮ್ಯಾಂಡು.ಆಂದ್ರದಲ್ಲಿ,ತೆಲಂಗಾಣ ರಾಜ್ಯಗಳಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಯಶಸ್ವಿ ಸಂಘಟನಾ ಚತುರತೆ ಪ್ರದರ್ಶಿಸಿದ ಶಾಸಕ ಅಭಯ ಪಾಟೀಲರು ಪಕ್ಕದ ಗೋವಾ ರಾಜ್ಯದ ಲೋಕಸಭಾ ಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ, ತೆಲಂಗಾಣ,ಹಾಗೂ ಗೋವಾ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ …

Read More »

ಬೆಳಗಾವಿಯ,ಟ್ರಾಫಿಕ್ ಪೋಲೀಸನಿಂದ ಡ್ಯಾಮೇಜ್ ಕಂಟ್ರೋಲ್…!!

ಬೆಳಗಾವಿ- ಟ್ರಾಫಿಕ್ ಪೋಲೀಸರು ಟ್ರಾಫಿಕ್ ಕಂಟ್ರೋಲ್ ಮಾಡಿದ್ದನ್ನು ನಾವು ನೋಡಿದ್ದೇವೆ ಕೇಳಿದ್ದೇವೆ.ಆದ್ರೆ ಬೆಳಗಾವಿಯ ಟ್ರಾಫಿಕ್ ಹವಾಲ್ದಾರ್ ಒಬ್ರು ಟ್ರಾಫಿಕ್ ಕಂಟ್ರೋಲ್ ಮಾಡುವದರ ಜೊತೆಗೆ ದೊಡ್ಡ ಡ್ಯಾಮೇಜ್ ದೊಡ್ಡ ಅನಾಹುತ ಆಗುವದನ್ನು ಸಮಯ ಪ್ರಜ್ಞೆಯಿಂದ ಕಂಟ್ರೋಲ್ ಮಾಡಿದ ಘಟನೆ ನಡೆದಿದೆ. ಬೆಳಗಾವಿಯಲ್ಲಿ ನಿನ್ನೆ ಧಾರಾಕಾರವಾಗಿ ಮಳೆ ಸುರಿದು ಅಲ್ಲಲ್ಲಿ ಗಿಡದ ಟೊಂಗೆ ಮುರಿದು ಬಿದ್ದ ಘಟನೆಗಳು ನಡೆದಿದ್ದವು ಬೆಳಗಾವಿಯ ಜೀಜಾಮಾತಾ ಚೌಕ್ ನಲ್ಲಿ ಡಿವೈಡರ್ ನಲ್ಲಿ ಇದ್ದ ವಿದ್ಯುತ್ ಕಂಬದ ಮೂಲಕ …

Read More »

ಸಂಜಯ ಪಾಟೀಲ ಹೇಳಿಕೆಗೆ ಹೆಬ್ಬಾಳಕರ್ ಗರಂ…!!

ಬೆಳಗಾವಿ-ಮಾಜಿ ಶಾಸಕ ಸಂಜಯ ಪಾಟೀಲ‌ ಹೇಳಿಕೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗರಂ ಆಗಿದ್ದಾರೆ.ಇಂದು ಮಧ್ಯಾಹ್ನ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ ಹೆಬ್ಬಾಳಕರ್ ಕುರಿತು ಹಗುರವಾಗಿ ಮಾತನಾಡಿದ ಹಿನ್ನಲೆಯಲ್ಲಿ,ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಲಕ್ಷ್ಮೀ ಹೆಬ್ಬಾಳಕರ್ ಶಾಸಕ ಸಂಜಯ್ ಪಾಟೀಲ್ ವಿರುದ್ಧ ಹರಿಹಾಯ್ದಿದ್ದಾರೆ. ಹೆಬ್ಬಾಳಕರ್ ಅವರಿಗೆ ಬಿಜೆಪಿ ಸಮಾವೇಶದಲ್ಲಿ ಇಷ್ಟೊಂದು ಜನ ಸೇರಿದ್ದನ್ನು ನೋಡಿ,ಇಂದು ರಾತ್ರಿ ನಿದ್ದೆ ಬರೋಲ್ಲ, …

Read More »

ವಿಶೇಷ ವಿಮಾನದಲ್ಲಿ ಸೋಮವಾರ ಡಿ.ಕೆ.ಶಿವಕುಮಾರ ಬೆಳಗಾವಿಗೆ ಬರ್ತಾರೆ.

ಬೆಳಗಾವಿ: ಬರುವ ಸೋಮವಾರದಿಂದ ಬೆಳಗಾವಿಯಲ್ಲಿ ಲೋಕಸಭಾ ಚುನಾವಣೆ ರಂಗೇರಲಿದೆ.ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಬೆಳಗ್ಗೆ ಸುಳೇಬಾವಿ ಮಹಾಲಕ್ಷ್ಮೀ ದೇವಸ್ಥಾನ ಮತ್ತು ಹಿಂಡಲಗಾ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ 11 ಗಂಟೆಗೆ ಮೆರವಣಿಗೆಯಲ್ಲಿ ಆಗಮಿಸಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವರು. ಉಪಮುಖ್ಯಮಂತ್ರಿಗಳೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮೃಣಾಲ ಹೆಬ್ಬಾಳಕರ್ ನಾಮಪತ್ರ ಸಲ್ಲಿಸುವ ವೇಳೆ ಹಾಜರಿರಲಿದ್ದಾರೆ. ಭಾನುವಾರ ರಾತ್ರಿ ಮೈಸೂರಿನಿಂದ …

Read More »

ಶೆಟ್ಟರ್ ಹಂಗ್ ಮಾಡಿದ್ರು..ಹಿಂಗ್ ಮಾಡಿದ್ರು ಎನ್ನುವ ಸುಳ್ಳು ಆರೋಪಗಳಲ್ಲಿ ಸತ್ಯಾಂಶ ಇಲ್ಲ.

ಬೆಳಗಾವಿ- ನನಗೂ ಬೆಳಗಾವಿಗೂ 25 ವರ್ಷಗಳ ನಂಟಿದೆ ನಾನು ಅಧಿಕಾರದಲ್ಲಿ ಇದ್ದಾಗ ನಾನು ಬೆಳಗಾವಿಯ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ.ಶೆಟ್ಟರ್ ಹಂಗ್ ಮಾಡಿದ್ರು,ಹಿಂಗ್ ಮಾಡಿದ್ರು ಎಂದು ಕಾಂಗ್ರೆಸ್ ನಾಯಕರು ಮಾಡುವ ಆರೋಪಗಳಲ್ಲಿ ಸತ್ಯಾಂಶ ಇಲ್ಲ.ನಾನು ಬೆಳಗಾವಿಯ ಜನಪ್ರತಿನಿಧಿಯಾಗಿ ಕೆಲಸ ಮಾಡ್ತೀನಿ, ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಬೆಳಗಾವಿ ಜನತೆಗೆ ಭರವಸೆ ನೀಡಿದ್ದಾರೆ. ಬೆಳಗಾವಿಯಲ್ಲಿ ಚುನಾವಣಾ ಪ್ರಚಾರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಶೆಟ್ಟರ್ ನಾನು  17 ರಂದು ಮೆರವಣಿಗೆ …

Read More »

ಜಗದೀಶ್ ಶೆಟ್ಟರ್ ಕಚೇರಿ ಈಗ C/O “ಲಕ್ಷ್ಮೀ” ಕಾಂಪ್ಲೆಕ್ಸ್….!!!

ಬೆಳಗಾವಿ- ದಿವಂಗತ ಸುರೇಶ್ ಅಂಗಡಿ ಅವರು ತಮ್ಮ ಕಚೇರಿ ಕಟ್ಟಡಕ್ಕೆ ಲಕ್ಷ್ಮೀ ಎಂದು ಹೆಸರಿಟ್ಟಿದ್ದು ಯಾಕೆ ? ಇದೇ ಲಕ್ಷ್ಮೀ ತಮಗೆ ಚುನಾವಣೆಯಲ್ಲಿ ಎದುರಾಳಿ ಆಗಬಹುದೇ ಎನ್ನುವ ಕಲ್ಪನೆ ಅವರಿಗಿತ್ತೋ ಅಥವಾ ಇದೊಂದು ಕಾಕತಾಳೀಯೋ ಗೊತ್ತಿಲ್ಲ.ಆದ್ರೆ ಜಗದೀಶ್ ಶೆಟ್ಟರ್ ಅವರು ಈಗ ದಿವಂಗತ ಸುರೇಶ್ ಅಂಗಡಿಯವರ ಮುಖ್ಯ ಕಾರ್ಯಸ್ಥಾನವಾಗಿದ್ದ ಸದಾಶಿವನಗರದ ಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿಯೇ ತಮ್ಮ ಚುನಾವಣಾ ಕಚೇರಿಯನ್ನು ಇಂದು ಬೆಳಗ್ಗೆ ಕಾರ್ಯಾರಂಭ ಮಾಡಲಿದ್ದಾರೆ. ಇಂದು ಲಕ್ಷ್ಮೀ ವಾರ,ಶುಭ ಶುಕ್ರವಾರದ …

Read More »

ಎಸ್ ಬಿ ಸಿಧ್ನಾಳ ಪುತ್ರ,ಶಿವಕಾಂತ ಸಿಧ್ನಾಳ ಇನ್ನಿಲ್ಲ…

ಬೆಳಗಾವಿ- ಬೆಳಗಾವಿಯ ಪ್ರಸಿದ್ಧ ಉದ್ಯಮಿ, ಎಸ್ ಬಿ ಸಿಧ್ನಾಳ ಅವರ ಸುಪುತ್ರ,VRL ಮಾಲೀಕ ವಿಜಯ ಸಂಕೇಶ್ವರ ಅವರ ಅಳಿಯ ಶಿವಕಾಂತ ಸಿಧ್ನಾಳ ಇಂದು ಶನಿವಾರ ನಿಧನರಾಗಿದ್ದಾರೆ. ಶಿವಕಾಂತ ಸಿಧ್ನಾಳ ಅವರ ಆರೋಗ್ಯ ಹಲವಾರು ದಿನಗಳಿಂದ ಸರಿ ಇರಲಿಲ್ಲ.ಆದ್ರೆ ಇಂದು ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ ಕ್ಯಾಂಪ್ ಪ್ರದೇಶದಲ್ಲಿ ಇರುವ ಶಿವಕಾಂತ ನಿವಾಸಕ್ಕೆ ಸಂಬಂಧಿಕರು, ಗಣ್ಯರು,ದೌಡಾಯಿಸಿದ್ದಾರೆ.

Read More »

ಇಂದು ಬೆಳಗಾವಿಯಲ್ಲಿ ಬಿಜೆಪಿ ಕೋರ್ ಕಮೀಟಿ ಮೀಟೀಂಗ್…

ಬೆಳಗಾವಿ-ಬೆಳಗಾವಿ ಜಿಲ್ಲೆಯ ಬೆಳಗಾವಿ,ಹಾಗೂ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ತಂತ್ರ ರೂಪಿಸಲು ಇಂದು ಬೆಳಗಾವಿ ನಗರದ ಸಂಕಮ್ ಹೊಟೇಲ್ ನಲ್ಲಿ ಬಿಜೆಪಿ ಕೋರ್ ಕಮೀಟಿ ಸಭೆ ನಡೆಯಲಿದೆ. ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಬಿಜೆಪಿ ಕೋರ್ ಕಮೀಟಿಯ ಸದಸ್ಯರು ಹಾಗೂ ಬೆಳಗಾವಿ ಜಿಲ್ಲೆಯ ಬಿಜೆಪಿಯ ಪ್ರಮುಖ ನಾಯಕರು ಮತ್ತು ಚುನಾವಣೆಯ ಬಿಜೆಪಿ ಉಸ್ತುವಾರಿ ಹೊಂದಿರುವ ರಾಜ್ಯದ ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ. …

Read More »