Breaking News

ದ್ವಿಚಕ್ರ ವಾಹನ, ಶ್ರೀಗಂಧದ ತುಂಡು ಮುಟ್ಟುಗೋಲು

ದ್ವಿಚಕ್ರ ವಾಹನ, ಶ್ರೀಗಂಧದ ತುಂಡು ಮುಟ್ಟುಗೋಲು

ಬೆಳಗಾವಿ, ಜ.1(ಕರ್ನಾಟಕ ವಾರ್ತೆ): ಸದಲಗಾ ಪೊಲೀಸ್ ಠಾಣೆಯ ಪ್ರಕರಣ ಸಂಖ್ಯೆ 81/2015 ದಿನಾಂಕ 30-6-2015 ರಲ್ಲಿ ಅಮಾನತುಪಡಿಸಿಕೊಂಡ ಹಿರೋ ಹೊಂಡಾ ಸ್ಪ್ಲೆಂಡರ್ ಮೋಟರ್ ಸೈಕಲ್ ನಂ. ಎಂಎಚ್-16 ಪಿ-3661 ಅನ್ನು ಶ್ರೀಗಂಧದ 4 ತುಂಡುಗಳ ಸಮೇತ ಸರ್ಕಾರದ ಪರ ಮುಟ್ಟುಗೋಲು ಹಾಕಿಕೊಳ್ಳಲಾಗಿರುತ್ತದೆ.

ಅದೇ ರೀತಿ ಕಾಗವಾಡ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಸಂಖ್ಯೆ 18/2016 ದಿನಾಂಕ 26-1-2016 ರಲ್ಲಿ ಅಮಾನತುಪಡಿಸಿಕೊಂಡ ಟಿವಿಎಸ್ ಮೋಟಾರು ಸೈಕಲ್ ಹಾಗೂ 27 ಶ್ರೀಗಂಧದ ತುಂಡುಗಳನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಸದರಿ ವಾಹನ ಮತ್ತು ಶ್ರೀಗಂಧದ ತುಂಡುಗಳನ್ನು ಸರ್ಕಾರದ ಪರ ಮುಟ್ಟುಗೋಲು ಮಾಡಿ ಘಟಪ್ರಭಾ ವಿಭಾಗದ ಅಧಿಕೃತ ಅಧಿಕಾರಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜೆ.ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ.
****

Check Also

ಬೆಳಗಾವಿಗೆ ವಂದೇ ಭಾರತ ರೈಲು ಬರತೈತಿ ಅಂತಾ ಅವರು ಹೇಳಿದ್ದಾರೆ,ಇವರು ತಿಳಿಸಿದ್ದಾರೆ

ಬೆಳಗಾವಿಗೆ ಹೊಸ ವಂದೇ ಭಾರತ ರೈಲು ಬರತೈತಿ ಅಂತಾ ದೆಹಲಿಯವರು ಹೇಳಿದ್ದಾರೆ ಬೆಳಗಾವಿಯವರು ತಿಳಿಸಿದ್ದಾರೆ. ಬೆಂಗಳೂರು ಧಾರವಾಡ ನಡುವೆ ಸದ್ಯ …

Leave a Reply

Your email address will not be published. Required fields are marked *