Breaking News
Home / ಕ್ರೈಮ್ ಸುದ್ದಿ

ಕ್ರೈಮ್ ಸುದ್ದಿ

ಕ್ರೈಮ್ ಸುದ್ದಿ

ಡಾಲ್ಬಿಗೆ ಖರ್ಚು ಮಾಡುವ ಹಣ ಸಂತ್ರಸ್ಥರಿಗೆ ಖರ್ಚು ಮಾಡಲಿ

ಬೆಳಗಾವಿ ಗಣೇಶ ಉತ್ಸವದಲ್ಲಿ ಮಂಡಳಮುಖಂಡರು ಡಾಲ್ಬಿಗೆ ಖರ್ಚು ಮಾಡುವಹಣವನ್ನು ಕೊಡಗು, ಮಡಿಕೇರಿ ನೆರೆಸಂತ್ರಸ್ತರಿಗೆ ನೀಡಿ ಮಾದರಿಯಾಗಬೇಕುಎಂದು ಪೊಲೀಸ್ ಆಯುಕ್ತಡಾ.ಡಿ.ಸಿ.ರಾಜಪ್ಪ ಹೇಳಿದರು. ಶುಕ್ರವಾರ ನಗರದ ಪೊಲೀಸ್ ಜಿಮ್‍ಖಾನ್ ಸಭಾಂಗಣದಲ್ಲಿಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿಮಾತನಾಡಿದರು. ಗಣೇಶೋತ್ಸವಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ.ಅದರಲ್ಲಿ ಗಣೇಶ ಮಂಡಳದವರು ಡಾಲ್ಬಿಹಚ್ಚಿ ಲಕ್ಷಾಂತರ ರು. ಖರ್ಚು ಮಾಡುವಬದಲು ನೆರೆಯ ಸಂತ್ರಸ್ತರಿಗೆ ಆಹಣವನ್ನು ನೀಡಿದರೆಮಾದರೆಯಾಗುತ್ತದೆ. ಡಾಲ್ಬಿ ಹಚ್ಚುನಿರ್ಧಾರ ಮಾಡಿದರೆ ಕಳೆದ ಬಾರಿಯಕಾನೂನು ಚೌಕಟ್ಟಿನಲ್ಲಿ ಇತಿಮಿತಿಗಳನ್ನುಅಳವಡಿಸಲಾಗುವುದು ಎಂದರು. ಕಳೆದ ಬಾರಿ 357 ಮಂಡಳದವರುಗಣೇಶ ಮೂರ್ತಿಗಳನು ಪ್ರತಿಷ್ಠಾಮಾಡಿದ್ದರು. ಈ ವರ್ಷ 378 ಗಣೇಶಪ್ರತಿಷ್ಠಾಪನೆಯಾಗಿವೆ. ಯಾವುದೇ ರೀತಿಕಾನೂನು ಸುವ್ಯವಸ್ಥೆ ಕದಡದಂತೆಮಂಡಳದವರು ನೋಡಿಕೊಳ್ಳಬೇಕು.ಪೊಲೀಸರು ಎಲ್ಲ ರೀತಿಯಲ್ಲಿ ಸಹಕಾರನೀಡಲಾಗುವುದು. ಯಾವುದೇಕಾರಣಕ್ಕೂ ಅಹೀತಕರ ಘಟನೆನಡೆಯದಂತೆ ನೋಡಿಕೊಳ್ಳಬೇಕೆಂದರು. ಪಾಲಿಕೆ ಸದಸ್ಯ ರಮೇಶ ಸೊಂಟಕ್ಕಿ ಮಾತನಾಡಿ, ಪ್ರತಿವರ್ಷ ಗಣೇಶ ಹಬ್ಬದಂದು ಪ್ರತಿ ಮಂಡಳದವರಿಗೆಕೆಇಬಿ,ಅಗ್ನಿಶಾಮಕ, ಹೆಸ್ಕಾಂ ಸೇರಿದಂತೆ ಇನ್ನಿತರಇಲಾಖೆಗಳಿಂದ ಅನುಮತಿ ಪಡೆದುಕೊಳ್ಳಬೇಕಾದರೆ ತುಂಬತೊಂದರೆ ಉಂಟಾಗುತ್ತದೆ.ಆದ್ದರಿಂದ ಜಿಲ್ಲಾಡಳಿತವತಿಯಿಂದ ಸರಳವಾಗಿ ಅನುಮತಿ ನೀಡುವ ವ್ಯವಸ್ಥೆಮಾಡಬೇಕೆಂದರು. ಸಭೆಯಲ್ಲಿ ಜಿಲ್ಲಾಧಿಕಾರಿ ಜಿಯಾವುಲ್ಲಾಎಸ್., ಪಾಲಿಕೆ ಆಯುಕ್ತ ಶಶಿಧರಕುರೇರ್, ಡಿಸಿಪಿಗಳಾದ ಸೀಮಾಲಾಟ್ಕರ್, ಮಹಾನಿಂಗ ನಂದಗಾವಿ,ಗಣೇಶ ಮಂಡಳದ ರಮಾಕಾಂತಕೊಂಡುಸ್ಕರ್ ಸೇರಿದಂತೆಮೊದಲಾದವರು ಹಾಜರಿದ್ದರು.

Read More »

ನಿರಾಶ್ರಿತರು ಸಂಘಟನೆ ಮಾಡಿದ್ರೆ ಕಲ್ಲು ತಗೊಂಡ ಹೊಡೀತಾರಂತೆ

ಬೆಳಗಾವಿ-ರಾಜಕೀಯ ನಿರಾಶ್ರಿತರು ರಾಜ್ಯದಲ್ಲಿ ಶಿವಸೇನೆ ಕಟ್ಟಲು ಮುಂದಾದ್ರೆ ಕಲ್ಲು ತಗೊಂಡು ಹೊಡಿತಿವಿ ಅಂತಾ ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಭೀಮಾಶಂಕರ, ಕೆಲವರು ರಾಜಕೀಯ ತೆವಲಿಗಾಗಿ ನಾಡವಿರೋಧಿ ಶಿವಸೇನೆ ಪಕ್ಷವನ್ನ ರಾಜ್ಯದಲ್ಲಿ ಕಟ್ಟಲು ಹೊರಟಿದ್ದಾರೆ ಎಂದು ಪರೋಕ್ಷವಾಗಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿ ಮತ್ತು ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ ಯತ್ನಾಳ ವಿರುದ್ಧ ಕಿಡಿಕಾರಿದ್ದಾರೆ. ಬೆಳಗಾವಿ ಗಡಿ …

Read More »

ಮಿಲಿಟರಿ ನೌಕರಿಯ ನಕಲಿ ಆದೇಶ ಪ್ರತಿ ನೀಡುವ ಜಾಲ ಪತ್ತೆ

ಬೆಳಗಾವಿ- ದೇಶ ಸೇವೆ ಮಾಡುವ ಕನಸು ಹೊತ್ತಿದ್ದ ಯುವಕರಿಗೆ ಆರ್ಮಿಯಲ್ಲಿ ಕೆಲಸ ಕೊಡಿಸುವದಾಗಿ ನಂಬಸಿ ನೇಮಕಾತಿ ಆದೇಶದ ಪ್ರತಿಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿ ವಸುಲಿ ಮಾಡುತ್ತಿದ್ದ ಜಾಲವನ್ನ ಬೆಳಗಾವಿ ಮಾರ್ಕೆಟ್ ಪೋಲಿಸರು ಭೇದಿಸಿದ್ದಾರೆ . ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಸಾವಳಗಿ ಗ್ರಾಮದ ಶಾನೂಲ ಹತ್ತಿವಾಲೆ (೨೩), ಅನ್ನೊ ಆರೋಪಿಯನ್ನ ಬಂದಿಸಲಾಗಿದೆ ಇನ್ನೂ ದೇಶ ಸೇವೆ ಮಾಡಬೇಕೆಂಬ ಬಯಕೆ ಹೊತ್ತಿದ್ದ ಸದಾಶಿವ ಮಾದರ(೨೭) ಅನ್ನೊ ಯುವಕ ನಕಲಿ ಆದೇಶ ಪ್ರತಿಯನ್ನು …

Read More »

ಡಾಲ್ಬಿ ಮೇಲಿಂದ ಬಿದ್ದು ಬೆಳಗಾವಿಯ ಯುವಕ ಸಾವು

ಬೆಳಗಾವಿ- ನಗರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಆವಘಡ ಸಂಭವಿಸಿದೆ ಡಾಲ್ಬೀ ಮೇಲಿಂದ ಆಯ ತಪ್ಪಿ ಕೆಳಗೆ ಬಿದ್ದು ಯುವಕನೊಬ್ಬ ಮೃತ ಪಟ್ಟ ಘಟನೆ ನಗರದ ಸಿಪಿಎಡ್ ಮೈದಾನದ ಬಳಿ ನೆದಿದೆ ಮೃತ ಪಟ್ಟ ಯುವಕನನ್ನು ಕಪಿಲೇಶ್ವರ ರಸ್ತೆಯ ಸಾಂಗಲಿ ಗಲ್ಲಿಯ ವೈಭವ ಸಂಬಾಜಿ ಭೋಸಲೆ ಎಂದು ಗುರುತಿಸಲಾಗಿದೆ ಈ ಯುವಕ ಡಾಲ್ಬಿ ಮೇಲೆ ಹತ್ತಿ ಕುಣಿಯುತ್ತಿರುವಾಗ ಸ್ಪೀಡ್ ಬ್ರೆಕರ್ ಬಂದಿದೆ ವಾಹನ ಜಂಪ್ ಆಗಿ ಯುವಕ ಆಯ …

Read More »

ರಥದ ಚಕ್ರಕ್ಕೆ ಸಿಲುಕಿ ಓರ್ವನ ಸಾವು..

ಬೆಳಗಾವಿ: ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಹೀರೆನಂದಿಯಲ್ಲಿ ಬಸವೇಶ್ವರ ಜಾತ್ರೆ ವೇಳೆ ರಥದ ಚಕ್ರಕ್ಕೆ ಸಿಲುಕಿ ಓರ್ವ ಭಕ್ತ ಮೃತ ಪಟ್ಟ ಘಟನೆ ನಡೆದಿದೆ . ರಥೋತ್ಸವದ ವೇಳೆ ರಥದ ಚಕ್ರಕ್ಕೆ ಆಯತಪ್ಪಿ ಸಿಲುಕಿ ವ. ಕಲ್ಲಯ್ಯ ಮಠದ್ ಮೃತಪಟ್ಟ  ದುರ್ದೈವಿಯಾಗಿದ್ದಾನೆ . ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More »

ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು ಓರ್ವನ ಸಾವು

ಬೆಳಗಾವಿ- ಹಲಗಾ ಸಮೀಪ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕಿತ್ತೂರ ತಾಲ್ಲೂಕಿನ ಬೈಲೂರ ಗ್ರಾಮದ ಯುವಕನೊಬ್ಬ ಸಾವನ್ನಪ್ಪಿದ್ದು ಇನ್ನೊಬ್ಬನ ಸ್ಥಿತಿ ಚಿಂತಾಜನಕವಾಗಿದೆ ಬೈಲೂರ ಗ್ರಾಮದ ಶಂಕರಗೌಡ ಬಸನಗೌಡ ಹನಮಸಾಗರ 28 ಮೃತ ದುರ್ದೈವಿಯಾಗಿದ್ದು ನಾಗೇಶ ಚನ್ನಬಸಪ್ಪ ಜಿಂಗೋಡಿ ಎಂಬಾತ ಗಂಭೀರವಾಗಿ ಗಾಯಗೊಂಡು ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಇವರಿಬ್ಬರು ಅನಮೋಡ ದಿಂದ ಬೈಲೂರಿಗೆ ತೆರಳುವಾಗ ಹಲಗಾ ಸಮೀಪ ಬೈಕ್ ನಿಯಂತ್ರಣ ತಪ್ಪಿ ಡುವೈಡರ್ ಗೆ ಡಿಕ್ಕಿ ಹೊಡೆದಿದೆ …

Read More »

ಬೈಕ್ ಕದಿಯುವ ಗ್ಯಾಂಗ್ CCIB ಪೋಲೀಸರ ಬಲೆಗೆ..

ಬೆಳಗಾವಿ- ಶಾಲಾ ಕಾಲೇಜುಗಳ ಮದೆ ಹೊಟೇಲ್ ,ಆಸ್ಪತ್ರೆಗಳ ಮುಂದೆ ನಿಲ್ಲಿಸಲಾಗುಬ ಬೈಕ್ ಗಳನ್ನು ಕದಿಯುವ ಗ್ಯಾಂಗ್ ಸಿಸಿಐಬಿ ಪೋಲೀಸರ ಬಲೆಗೆ ಬಿದ್ದಿದೆ ಬೆಳಗಾವಿಯಲ್ಲಿ ಪೊಲೀಸ್ ಆಯುಕ್ತ ಟಿ.ಜಿ.ಕೃಷ್ಣಭಟ್ ಸುದ್ದಿಗೋಷ್ಠಿ‌. ನಡೆಸಿ ಗ್ಯಾಂಗ್ ಕುರಿತು ಮಾಹಿತಿ ನೀಡಿದ್ದಾರೆ ಸಿಸಿಐಬಿ ಇನ್ಸಪೇಕ್ಟರ್ ಎ.ಎಸ.ಗುದಿಗೊಪ್ಪ ತಂಡದ ಕಾರ್ಯಾಚರಣೆ ನಡೆಸಿ ನಾಲ್ವರು ಅಂತರಾಜ್ಯ ಬೈಕ್ ಕಳ್ಳರ ಬಂಧಿಸಿದ್ದಾರೆ. ಬಂಧಿತರಿಂದ 9ಲಕ್ಷ ಮೌಲ್ಯದ 19 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೋಲೀಸ್ ಆಯುಕ್ತರು ಮಾಹಿತಿ ನೀಡಿದರು …

Read More »

ಅಮಾಯಕರನ್ನು ಹೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ರೌಡಿ ಅರೆಸ್ಟ..

ಬೆಳಗಾವಿ ಒಂಟಿಯಾಗಿ ಹೋಗುವವರನ್ನು ಹಿಂಬಾಲಿಸಿ ಅವರನ್ನು ಹೆದರಿಸಿ ಬೆದರಿಸಿ ಅವರ ಬಳಿ ಇರುವ ಹಣ,ಮೋಬೈಲ್ ಕಸಿದುಕೊಳ್ಳುವ ಖದೀಮನೊಬ್ಬ ಈಗ ಪೋಲೀಸರ ಅತಿಥಿಯಾಗಿದ್ದಾನೆ ಬೆಳಗಾವಿಯಲ್ಲಿ ಒಂಟಿ ವ್ಯಕ್ತಿಗಳನ್ನ ಟಾರ್ಗೇಟ್ ಮಾಡುತ್ತಿದ್ದ ರೌಡಿ ಶೀಟರ್ ಒಬ್ಬ ಅವರ ಮೇಲೆ ಹಲ್ಲೆ ನಡೆಸಿ, ಅವರ ಬಳಿಯಿದ್ದ ಮೊಬೈಲ್ ಮತ್ತು ಹಣವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದ. ಹೀಗೆ ಅಮಾಯಕರನ್ನ ಹೆದರಿಸಿ ಹಣ ಸುಲಿಗೆ ಮಾಡುತ್ತಿದ್ದವನು ಬೆಳಗಾವಿಯ ಕ್ಯಾಂಪ್ ನಿವಾಸಿ 22 ವರ್ಷದ ರೌಡಿ ಶೀಟರ್ ವಾಸೀಮ್ ಪಟೇಲ್. …

Read More »

ಶೀಲ ಶಂಕಿಸಿ ಗಂಡನಿಂದಲೇ ಹೆಂಡತಿಯ ಕೊಲೆ

ಬೆಳಗಾವಿ- ಮಗುವಿನ ಮುಖ ತನಗೆ ಹೋಲುತ್ತಿಲ್ಲ ಎಂದು ತನ್ನ ಹೆಂಡತಿಯ ಶೀಲದ ಮೇಲೆ ಅನುಮಾನಪಟ್ಟ ಗಂಡನೊಬ್ಬ ತನ್ನ ಹೆಂಡತಿಯನ್ನು ಕೊಲೆ ಮಾಡಿದ ಘಟನೆ ಬೆಳಗಾವಿಯ ಉದ್ಯಮಬಾಗ ಪೋಲೀಸ್ ಠಾಣೆಯ ಮಹಾವೀರ ನಗರದಲ್ಲಿ ನಡೆದಿದೆ 26 ವರ್ಷದ ಶಿಲ್ಪಾ ಬಡಿಗೇರ ಹತ್ಯೆಗೀಡಾದ ದುರ್ದೈವಿಯಾಗಿದ್ದು ಆರೋಪಿ ಗಂಡ ಪ್ರವೀಣ ಬಡಿಗೇರ ಉದ್ಯಮಬಾಗ ಠಾಣೆಯಲ್ಲಿ ಶರಣಾಗಿದ್ದಾನೆ ಬುಧವಾರ ಬೆಳಿಗ್ಗೆ ಇಬ್ಬರು ಹಾವೇರಿಗೆ   ತಮ್ಮ ನೆಂಟರ ಮನೆಗೆ ಹೊರಟಿದ್ದರು ಇಷ್ಟರಲ್ಲಿ ಜಗಳಾಡಿಕೊಂಡ ಪ್ರವೀಣ ನೈಲಾನ್ …

Read More »

ಪೋಲೀಸರ ಭರ್ಜರಿ ಬೇಟೆ, ಸಿಕ್ಕಿ ಬಿತ್ತು 40 kg ಗಾಂಜಾ ಮೂಟೆ..!

ಬೆಳಗಾವಿ- ಬೆಳಗಾವಿ ನಗರದ ಯುವಕರು ಗಾಂಜಾ ಚಟಕ್ಕೆ ಬಲಿಯಾಗುತ್ತಿರುವದನ್ನು ಗಂಭೀರವಾಗಿ ಪರಗಣಿಸಿರುವ ಬೆಳಗಾವಿ ಪೋಲೀಸರು ಗಾಂಜಾ ಮಾರಾಟಗಾರರ ವಿರುದ್ಧ ಸಮರ ಸಾರಿದ್ದು ಬುಧವಾರ ನಗರದಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಗಾಂಜಾ ವಶ ಪಡಿಸಿಕೊಂಡಿದ್ದಾರೆ ನಗರದ ಗಾಂಧೀ ನಗರದಲ್ಲಿರುವ ಬಂಟರ ಭವನದ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿದ ಪೋಲೀಸರು 40 ಕೆಜಿ ಗಾಂಜಾ ವಶ ಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಗಾಂಧೀ ನಗರದ ಶಾಫೀನ್ …

Read More »