ಅಥಣಿ ಬಳಿ ಭೀಕರ ಅಪಘಾತ ಐದು ಜನ ಸ್ಥಳದಲ್ಲೇ ಸಾವು

ಬೆಳಗಾವಿ- ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಅಡಹಳ್ಳಿ ‌ಬಳಿ ಕೆ ಎಸ್ ಆರ್ ಟಿ ಸಿ ಬಸ್ ಕ್ರ್ಯುಸರ್ ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಜನ ಸ್ಥಳದಲ್ಲೇ ಸಾವನ್ನೊಪ್ಪಿದ್ದು ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ರಾತ್ರಿ ನಡೆದಿದೆ

ಒಂದೇ ಕುಟುಂಬದ ಐದು ಜನ ಸಾವನ್ನೊಪ್ಪಿದ್ದು ಹತ್ತು ಜನರು ಗಾಯಗೊಂಡು ಅಥಣಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ಮೃತಪಟ್ಟವರನ್ನು ಅಣ್ಣಪ್ಪ 42 ಅರ್ಚನಾ 40 ರಾಧಾಭಾಯಿ 50 ರವಿ 12 ಇವರೆಲ್ಲರು ಜಾಧವ ಕುಟುಂಬ ದವರಾಗಿದ್ದು ಕಕಮರಿ ಗ್ರಾಮದವರಾಗಿದ್ದಾರೆ ಮೃತ ಪಟ್ಟ ಗೌರವ ಗೋಪಾಲ ಪಾಲ ಕೂಡಾ ಅದೇ ಗ್ರಾಮದವರಾಗಿದ್ದಾರೆ

ಅಪಘಾತ ಸಂಭವಿಸುತ್ತಿದ್ದಂತೆ ಅಥಣಿ ಪೋಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *