Breaking News

ಭೂ‌.ನ್ಯಾಯಮಂಡಳಿಯಲ್ಲಿ ಅಶ್ಪಾಕ್ ತಹಶೀಲ್ದಾರ್ ಗೆ ಸ್ಥಾನ.

ಬೆಳಗಾವಿ- ಬೆಳಗಾವಿ ತಾಲ್ಲೂಕು ಭೂ ನ್ಯಾಯ ಮಂಡಳಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಪ್ತ ಅಶ್ಪಾಕ್ ತಹಶೀಲ್ದಾರ್ ಅವರನ್ನು ನಾಮನಿರ್ದೇಶನ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಬೆಳಗಾವಿ ತಾಲ್ಲೂಕಿನ ಸಂತಿಬಸ್ತವಾಡ ಗ್ರಾಮದ ಅಶ್ಪಾಕ್ ಮಹ್ಮದ್ ನಿಸಾರ್ ತಹಶೀಲ್ದಾರ್ ಹಲವಾರು ವರ್ಷಗಳಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಶ್ರಮಿಸುತ್ತಿದ್ದು ಇವರ ಪಕ್ಷದ ಸೇವೆಯನ್ನು ಗುರುತಿಸಿ ಬೆಳಗಾವಿ ತಾಲ್ಲೂಕಿನ ಭೂ ನ್ಯಾಯಮಂಡಳಿಯ ಸದಸ್ಯರನ್ನಾಗಿ ಇವರನ್ನು ನಾಮನಿರ್ದೇಶನ ಮಾಡಲಾಗಿದೆ.

ಬೆಳಗಾವಿ ತಾಲ್ಲೂಕು ನ್ಯಾಯ ಮಂಡಳಿಯ ಅಧ್ಯಕ್ಷರಾಗಿ ಸಹಾಯಕ ಆಯುಕ್ತರು ಬೆಳಗಾವಿ ಉಪ ವಿಭಾಗ,ಸದಸ್ಯರಾಗಿ,ಹೊನಗಾ ಗ್ರಾಮದ ಬೈರೂ ಟೋಪಣ್ಣ ಕಾಂಬಳೆ,ಹಿರೇಬಾಗೇವಾಡಿಯ ಯಲ್ಲನಗೌಡ ನಿಂಗನಗೌಡ ಕಾಂಬಳೆ,ಸಂತಿಬಸ್ತವಾಡ ಗ್ರಾಮದ ಅಶ್ಪಾಕ್ ತಹಶೀಲ್ದಾರ್,ಬೆನಕನಹಳ್ಳಿಯ ಮೋಹನ್ ಕೋಲಕಾರ್,ಇವರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *