ಬೆಳಗಾವಿಯನ್ನು ಮಹಾರಾಷ್ಟ್ರ ಕ್ಕೆ ಸೇರಿಸಿ ಬೆಳಗಾವಿಯ ಶಾಸಕನಾಗುವದೇ ನನ್ನ ಕನಸು – ರಾಜೇಶ್ ಪಾಟೀಲ

ಬೆಳಗಾವಿಯನ್ನು ಮಹಾರಾಷ್ಟ್ರ ಕ್ಕೆ ಸೇರಿಸಿ ಬೆಳಗಾವಿಯ ಶಾಸಕನಾಗುವದೇ ನನ್ನ ಕನಸು – ರಾಜೇಶ್ ಪಾಟೀಲ

 

 

ಬೆಳಗಾವಿ-ಚಂದಗಡ ಶಾಸಕ ರಾಜೇಶ್ ಪಾಟೀಲ ಬೆಳಗಾವಿಗೆ ಬರಯವ ಕಾರ್ಯಕ್ರಮ ರದ್ದಾಗಿದೆ ಎಂದು ಬೆಳಗಾವಿ ಪೋಲೀಸರು ಗಡಿನಾಡ ಕನ್ನಡಿಗರ ಕಣ್ಣಿಗೆ ಮಣ್ಣು ಹಾಕಿ ಬೆಳಗಾವಿಯಲ್ಲಿ ನಾಡ ವಿರೋಧಿ ಶಾಸಕನ ಸತ್ಕಾರ ಮಾಡಿಸುವಲ್ಲಿ ಬೆಳಗಾವಿ ಪೋಲೀಸರು ಸಫಲರಾಗಿದ್ದಾರೆ

ಮಹಾರಾಷ್ಟ್ರ ಚಂದಗಡ ಶಾಸಕ ಬೆಳಗಾವಿ ಬೀದರ್ ಬಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಘೋಷಣೆ ಹಾಕಿ ಚಂದಗಡ ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದ್ದ ಈತ ಇಂದು ಸಂಜೆ ಪೋಲೀಸ್ ಸರ್ಪಗಾವಲಿನಲ್ಲಿ ಬೆಳಗಾವಿಗೆ ಬಂದು ಕನ್ನಡ ನೆಲದಲ್ಲಿ ಸತ್ಕಾರ ಸ್ವೀಕರಿಸಿರುವ ಮಹಾರಾಷ್ಟ್ರದ ಚಂದಗಡ ಶಾಸಕ ರಾಜೇಶ್ ಪಾಟೀಲ ಮುಂಬರುವ ಚುನಾವಣೆಗೆ ಮೊದಲು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಬೆಳಗಾವಿಯ ಶಾಸಕನಾಗುವದೇ ನನ್ನ ಮಹಾದಾಸೆಯಾಗಿದೆ ಎಂದು ಘೋಷಣೆ ಮಾಡಿ ಹೋಗಿದ್ದಾನೆ ‌

ಈ ನಾಡ ವಿರೋಧಿ ಶಾಸಕನಿಗೆ ಬೆಳಗಾವಿ ಪ್ರವೇಶ ಮಾಡಲು ಅವಕಾಶ ನೀಡಬಾರದು ಎಂದು ಕರವೇ ಕಾರ್ಯಕರ್ತರು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ದೀಪಕ ಗುಡಗನಟ್ಟಿ ಅವರ ನೇತ್ರತ್ವದಲ್ಲಿ ಪ್ರತಿಭಟಿಸಿ ನಾಡವಿರೋಧಿ ಶಾಸಕನ ಸತ್ಕಾರ ಕಾರ್ಯಕ್ರಮ ದ ಸ್ಥಳಕ್ಕೆ ಧಾವಿಸಿ ಆ ಕಾರ್ಯಕ್ರಮಕ್ಕೆ ತಡೆಯಲು ಹೊರಟಿರುವಾಗ ಕಾಲೇಜು ರಸ್ತೆಯಲ್ಲೇ ತಡೆದ ಪೋಲೀಸರು ಕನ್ನಡದ ಕಾರ್ಯಕರ್ತರನ್ನು ಬಂಧಿಸಿ ನಾಡವಿರೋಧಿ ಶಾಸಕನ ಸತ್ಕಾರ ಕಾರ್ಯಕ್ರಮ ಸುಗಮವಾಗಿ ನಡೆಯುವಂತೆ ನೋಡಿಕೊಂಡಿದ್ದಾರೆ ನಮ್ಮ ಬೆಳಗಾವಿಯ ಪೋಲೀಸರು

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *