Breaking News

ಬೆಳಗಾವಿ ನಗರದ ಕನ್ನಡ ಶಾಲೆಯ ದಾಖಲೆಗಳಿಗೆ ಬೆಂಕಿ

 

ಬೆಳಗಾವಿ:ನಗರದ ಶಹಾಪುರ ಭಾರತ ನಗರದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ನಂ೧೭ ರಲ್ಲಿ ಕಿಡಿಗೇಡಿಗಳು ಮಕ್ಕಳ ಡೆಸ್ಕ್ ಮುರಿದು ಕನ್ನಡದ ದಾಖಲೆಗಳಿಗೆ ಬೆಂಕಿ ಹಚ್ವಿದ ಘಟನೆ ಭಾನುವಾರ ಮದ್ಯರಾತ್ರಿ ನಡೆದಿದೆ

ದಾಖಲಾತಿಗಳನ್ನು ಮನಬಂದಂತೆ ಸುಟ್ಟಿದ್ದಾರೆ. ಶಹಾಪುರ ಪೊಲೀಸ್ ಠಾಣೆಗೆ ಹೊಂದಿಕೊಂಡಂತೆ ಇರುವ ಈ ಶಾಲೆಗೆ ಶನಿವಾರ ಮತ್ತು ಭಾನುವಾರ ಎರಡು ದಿನ ರಜೆ ಇದ್ದಾಗ ಇಲ್ಲಿ ಕಿಡಿಗೇಡಿಗಳು ಅಂದಾದುಂದಿ ಪಾರ್ಟಿ ಮಾಡಿ ಸರಾಯಿ ಬಾಟಲಿಗಳನ್ನು ಶಾಲೆಯಲ್ಲಿಯೇ ಎಸೆದು ಹೋಗಿದ್ದಾರೆ

ಪ್ರಹಸ ನಮೆರೆದಿರುವುದು ತಡರಾತ್ರಿ  ಬೆಳಿಗ್ಗೆ ಶಾಲೆಗೆ ಹೋದಾಗ ಸಿಬ್ಬಂಧಿಗೆ ತಿಳಿದುಬಂದಿದೆ. ನಗರ ವಲಯ ಬಿಇಓ ನಲವಾತವಾಡ, ಶಹಾಪುರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು.

ಇಲ್ಲಿ ಅಶ್ಲೀಲ ಅಕ್ರಮ ಕೆಲಸಗಳು ನಡೆಯುತ್ತಿರುತ್ತವೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಆದರೂ ನಾಡ ದ್ರೋಹಿಗಳು ಈ ದುಶ್ಕೃತ್ಯ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ

ಕನ್ನಡ ಶಾಲೆಯಲ್ಲಿ ನಡೆದ ಬೆಂಕಿ ಆವಘಡ ಗಡಿಯಲ್ಲಿ ಗೊಂದಲ ಸೃಷ್ಠಿಸಿದೆ

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *