Breaking News

ಮುಂಬಯಿಂದ ಬೆಳಗಾವಿ ತಾಲ್ಲೂಕಿಗೆ ಮರಳಿದ್ದ, ವ್ಯೆಕ್ತಿಯ ಸಾವು……

ಬೆಳಗಾವಿ- ಮುಂಬೈಯಿಂದ ಬೆಳಗಾವಿ ತಾಲ್ಲೂಕಿನ ಕಟ್ಟನಬಾಂವಿ ಗ್ರಾಮಕ್ಕೆ ಮರಳಿ, ಏಳು ದಿನಗಳ ಕಾಲ ಕ್ವಾರಂಟೈನ್ ನಲ್ಲಿದ್ದ 50 ವರ್ಷದ ವ್ಯೆಕ್ತಿಯೊಬ್ಬ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿ ,ಇಂದು ಬೆಳಿಗ್ಗೆ ಮೃತಪಟ್ಟ ಘಟನೆ ನಡೆದಿದೆ.

ನಿನ್ನೆಯಷ್ಟೇ ಕಟ್ಟನಬಾಂವಿ ಗ್ರಾಮದಲ್ಲಿ ಐದು ಜನ ಸೊಂಕಿತರು ಪತ್ತೆಯಾಗಿದ್ದರು. ಇಂದು ಮೃತಪಟ್ಟ 50 ವರ್ಷದ ವ್ಯೆಕ್ತಿ ಸೊಂಕಿತನಲ್ಲ,ಆದರೆ ಈತ ಮುಂಬೈಯಿಂದ ಮರಳಿ ಏಳು ದಿನಗಳ ಕಾಲ ಕ್ವಾರಂಟೈನ್ ನಲ್ಲಿದ್ದ ಜೂನ್ 4 ರಂದು ಎದೆ ನೋವು ಶರುವಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದ

ನಿನ್ನೆಯಷ್ಟೇ ಈ ವ್ಯೆಕ್ತಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು ರಿಪೋರ್ಟ್ ಬರುವ ಮೊದಲೇ ಈ ವ್ಯಕ್ತಿ ಮೃತಪಟ್ಟಿರುವದರಿಂದ ಯಮಕನಮರಡಿ ಕ್ಷೇತ್ರದ ಕಟ್ಟನಬಾಂವಿ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿದೆ.

ಈತನಿಗೆ ಕೊರೋನಾ ಸೊಂಕಿನ ಯಾವುದೇ ಲಕ್ಷಣಗಳು ಕಾಣಿಸಿರಲಿಲ್ಲ,ಹೃದಯಾಘಾತದಿಂದ ಈತ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು ಮೃತ ವ್ಯೆಕ್ತಿಯ ಕೋವಿಡ್ ರಿಪೋರ್ಟ್ ಇಂದು ಸಂಜೆ ಬರುವ ನಿರೀಕ್ಷೆ ಇದೆ.

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *