ನಾಳೆ ಸ್ಪೋಟ, ಆಗಬಹುದಾ ಅಡಿಯೋ ಬಾಂಬ್…!!

ಬೆಳಗಾವಿ-ಮಾಜಿ ಸಚಿವ ರಮೇಶ್ ಜಾರಕಿಹೋಳಿ V/S ಡಿಕೆ ಶಿವಕುಮಾರ ನಡುವಿನ ಪಾಲಿಟೀಕ್ಸ್ ಫೈಟ್ ಮುಂದುವರೆದಿದೆ.

ನಾಳೆ ಸಿಡಿ ಪ್ರಕರಣದ ಹಿಂದಿನ ‘ಮಹಾನಾಯಕ’ನ ಅಸಲಿ ಮುಖ ಅನಾವರಣಕ್ಕೆಮಾಜಿ ಸಚಿವ ರಮೇಶ್ ಜಾರಕಿಹೋಳಿ ಸಿದ್ಧತೆ ನಡೆಸಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ಪ್ರಚಾರ ಪಡೆದಿದೆ.

ರಮೇಶ್ ಜಾರಕಿಹೊಳಿಯಿಂದ ಆಡಿಯೋ ಬಾಂಬ್ ಸಿಡಿಸಲು ತಯಾರಿ ನಡೆದಿದ್ದುನಾಳೆ ರಮೇಶ್ ಜಾರಕಿಹೋಳಿಯಿಂದ ಮಹತ್ವದ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆ ಇದೆ.ಮಹಾನಾಯಕ ಮಾತನಾಡಿದಾನೆನ್ನಲಾದ ಆಡಿಯೋ ಬಿಡುಗಡೆ ನಾಳೆ ಆಗುವ ಸಾಧ್ಯತೆ ಇದ್ದು
ನನ್ನನ್ನು ಸಿಡಿ ಪ್ರಕರಣದಲ್ಲಿ ಸಿಲುಕಿಸಲು 40ಕೋಟಿ ಖರ್ಚು ಮಾಡಿದ್ದಾರೆಂದು ಆರೋಪಿಸಿದ್ದ ಸಾಹುಕಾರ
ಮಹಾನಾಯಕ ನನ್ನ ಬಗ್ಗೆ ನನ್ನ ಬಳಿ ಆಡಿಯೋ ಇದೆ ಎಂದಿರುವ ರಮೇಶ್ ಆಡಿಯೋದಲ್ಲಿ ಸಿಡಿ ಷಡ್ಯಂತ್ರದ ಬಗ್ಗೆ ಮಾತನಾಡಿದವರು ಯಾರು? ಎನ್ನುವ ಅಡಿಯೋ ನಾಳೆ ಮಾದ್ಯಮಗಳಿಗೆ ಬಿಡುಗಡೆ ಮಾಡ್ತಾರೆ ಎಂದು ಹೇಳಲಾಗುತ್ತಿದೆ.

ಆಡಿಯೋ ಜೊತೆಗೆ ಇನ್ನೂ ಏನ್ನೆಲ್ಲಾ ದಾಖಲೆ ಬಿಡುಗಡೆ ಮಾಡ್ತಾರೆ ಸಾಹುಕಾರ್ ಅನ್ನೋದನ್ನು ಕಾಯ್ದು ನೋಡಬೇಕಾಗಿದ್ದು,ಸುದ್ಧಿಗೋಷ್ಠಿ ಸ್ಥಳ, ಸಮಯವನ್ನ ಗೌಪ್ಯವಾಗಿ ಇಟ್ಟಿರುವ ಸಾಹುಕಾರ ನಡೆ ಈಗ
ಮತ್ತೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡುತ್ತಾ ಎನ್ನುವ ಕುತೊಹಲಕೆರಳಿದೆ

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *