Breaking News

ಬೆಳಗಾವಿ ಅಭಿವೃದ್ಧಿಗಾಗಿ ಕೇಂದ್ರಕ್ಕೆ ತೆರಳಿದ ಬಿಜೆಪಿ ನಿಯೋಗ

ಬೆಳಗಾವಿ- ಬೆಳಗಾವಿ ನಗರದ ವಿವಿಧ ಕ್ಷೇತ್ರಗಳ ಅಭಿವೃದ್ಧಿಯ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯಲು ಬೆಳಗಾವಿಯಿಂದ ಇಂದು ಕೇಂದ್ರ ಸರ್ಕಾರದ ಬಳಿ ನಿಯೋಗ ಹೊರಡಲಿದ್ದು ನಿಯೋಗ ಎರಡು ದಿನಗಳ ಕಾಲ ವಿವಿಧ ಸಚಿವರನ್ನು ಭೇಟಿಯಾಗಲಿದೆ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ

ಕೇಂದ್ರದ ರಸಗೊಬ್ಬರ ಇಲಾಖೆಯ ಸಚಿವ ಅನಂತಕುಮಾರ್ ಅವರ ನೇತ್ರತ್ವದಲ್ಲಿ ,ಪ್ರಭಾಕರ ಕೋರೆ ಮತ್ತು ಸಂಸದ ಸುರೇಶ ಅಂಗೆಡಿ ಅವರ ಮಾರ್ಗದರ್ಶನಲ್ಲಿ ಹೊರಡಲಿರುವ ಈ ನಿಯೋಗವನ್ನು ಕೇಂದ್ರದ ಬಳಿ ಕೊಂಡೊಯ್ಯುವ ಕಾರ್ಯಕ್ರಮವನ್ನು ಶಾಸಕ ಅಭಯ ಪಾಟೀಲರು ಆಯೋಜಿಸಿದ್ದಾರೆ

ನಿಯೋಗದಲ್ಲಿ ಬೆಳಗಾವಿಯ ಚೇಂಬರ್ ಆಫ್ ಕಾಮರ್ಸ ,ಕ್ರಿಡಾಯಿ ,ಬಾರ್ ಅಸೋಸೇಶಿಯನ್ ಸದಸ್ಯರು,ಹಾಗು ವಿವಿಧ ಕ್ಷೇತ್ರದ ಅನುಭವಿಗಳು ನಿಯೋಗದಲ್ಲಿರುತ್ತಾರೆ ನಿಯೋಗ ಇಂದು ದೆಹಲಿಗೆ ಹೊರಡಿ ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಕೇಂದ್ರದ ಹಲವಾರು ಜನ ಸಚಿವರನ್ನು ಭೇಟಿಯಾಗಲಿದ್ದಾರೆ

ಕೇಂದ್ರದ ರೇಲ್ವೆ, ಪ್ರವಾಸೋದ್ಯಮ,ಕೈಗಾರಿಕಾ, ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಇಲಾಖೆಯ ಸಚಿವರನ್ನು ಭೇಟಿಯಾಗಿ ಬೆಳಗಾವಿ ಅಭಿವೃದ್ಧಿಯ ಕುರಿತು ಗಮನಸೆಳೆಯಲಾಗುವದು ಬೆಳಗಾವಿ ನಗರದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿಕೊಳ್ಳಲಾಗುವದು ಎಂದು ಅಭಯ ಪಾಟೀಲ ತಿಳಿಸಿದ್ದಾರೆ

Check Also

ಆಪರೇಷನ್ ಸಿಂಧೂರ್ ನಲ್ಲಿ ಬೆಳಗಾವಿಯ ಸೊಸೆ…

ಬೆಳಗಾವಿ- ಬೆಳಗಾವಿ ವೀರರಾಣಿ ಕಿತ್ತೂರು ಚನ್ನಮ್ಮಾಜಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮನ ಕ್ರಾಂತಿಯ ನೆಲ, ದೇಶದಲ್ಲಿ ಕ್ರಾಂತಿ ಆದಾಗ …

Leave a Reply

Your email address will not be published. Required fields are marked *