ಸೋಮವಾರ ರಮಜಾನ್ ಈದುಲ್ ಫಿತರ್ ಹಬ್ಬ

 

ಬೆಳಗಾವಿ- ಬೆಳಗಾವಿಯ ಅಂಜುಮನ್ ಹಾಲ್ ನಲ್ಲಿ ನಡೆದ ಚಾಂದ ಕಮೀಟಿಯ ಸಭೆಯಲ್ಲಿ ಸೋಮವಾರ ಪವಿತ್ರ ರಮಜಾನ್ ಈದುಲ್ ಫಿತ್ರ ಹಬ್ಬವನ್ನು ಆಚರಿಸುವ ನಿರ್ಣಯ ಕೈಗೊಳ್ಳಲಾಯಿತು

ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಚ ರಾಜು ಸೇಠ ಅವರ ಅಧ್ಯಕ್ಷತೆಯಲ್ಲಿ ನಡೆದ ಚಾಂದ ಕಮೀಟಿಯ ಸಭೆಯಲ್ಲಿ ಮುಸ್ಲೀಂ ಸಮಾಜದ ಮೌಲ್ವಿಗಳು ಮತ್ತು ಮುಖಂಡರು ಭಾಗವಹಿಸಿದ್ದರು
ಚಾಂದ ಕಮೀಟಿಯ ಸದಸ್ಯರು ಚಂದ್ರ ದರ್ಶನದ ಬಗ್ಗೆ ದೆಹಲಿ.ಬೆಂಗಳೂರು ಮುಂಬಯಿ ಸೇರಿದಂತೆ ದೇಶದ ವಿವಿಧ ಮಹಾನಗರಗಳ ಚಾಂದ ಕಮೀಟಿಯ ಸದಸ್ಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಚಂದ್ರ ದರ್ಶನದ ಬಗ್ಗೆ ಮಾಹಿತಿ ಪಡೆದುಕೊಂಡರು
ದೇಶದ ವಿವಿಧ ಭಾಗಗಳಲ್ಲಿ ಚಂದ್ರ ದರ್ಶನವಾದ ಬಗ್ಗೆ ಖಾತ್ರಿಪಡಿಸಿಕೊಂಡ ಬಳಿಕ ಸೋಮವಾರ ಈದುಲ್ ಫಿತ್ರ ಹಬ್ಬವನ್ನು ಆಚರಿಸುವ ನಿರ್ಣಯ ಕೈಗೊಳ್ಳಲಾಯಿತು

ಚಾಂದ ಕಮೀಟಿಯ ಸಭೆ ಮುಗಿದ ಬಳಿಕ ರಾಜು ಸೇಠ ಮಾತನಾಡಿ ಸೋಮವಾರ ಈದುಲ್ ಫಿತ್ರ ಹಬ್ಬವನ್ನು ಆಚರಿಸುವ ನಿರ್ಣಯ ಕೈಗೊಳ್ಳಲಾಗಿದೆ ಸೋಮವಾರ ಬೆಳಿಗ್ಗೆ 9- 30 ಘಂಟೆಗೆ ಅಂಜುಮನ್ ಹಾಲ್ ಹಿಂಬದಿಯಲ್ಲಿರುವ ಈದಗಾ ಮೈದಾನದಲ್ಲಿ ಹಬ್ಬದ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ ಎಂದು ತಿಳಿಸಿದರು

ಸಭೆಯಲ್ಲಿ ಮುಫ್ತಿ ಅಬ್ದುಲ್ ಅಜೀಜ್,ಮುಫ್ತಿ ಮಂಜೂರ್ ಆಲಂ ,ಹಾಫಿಜ್ ಬಶೀರ,ಕಟಗೇರಿ ಹಜರತ ಸಮಿವುಲ್ಲಾ ಮಾಡಿವಾಲೆ ಸೇರಿದಂತೆ ಹಲವಾರು ಜನ ಮುಖಂಡರು ಭಾಗವಹಿಸಿದ್ದರು

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *