Breaking News

ಲವ್..ಡವ್.ಬೇಡ ಮದುವೆಯಾಗು ಎಂದಿದ್ದಕ್ಕೆ ಲವರ್ ಕೊಲೆ ಮಾಡಿದ ಡಾಕ್ಟರ್….

ಬೆಳಗಾವಿ-ಪ್ರೇಮಿಯನ್ನು ಮದುವೆಗೆ ಒತ್ತಾಯಿಸಿದ ಪ್ರೇಯಸಿಯ ಕೊಲೆ ಮಾಡಿದ ಘಟನೆ ಖಾನಾಪೂರದಲ್ಲಿ ನಡೆದಿದೆ

ಗೋವಾ ಪ್ರವಾಸದ ನೆಪದಲ್ಲಿ ಕರೆತಂದು ರೈಲಿನಿಂದ ತಳ್ಳಿ ಹತ್ಯೆ ಮಾಡಲಾಗಿದ್ದು
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಯುವತಿ ಶವ ಪತ್ತೆಯಾಗಿದೆ

ಅಸ್ಟೋಳಿ ಗ್ರಾಮದ ರೈಲ್ವೆ ಸೇತುವೆ ಬಳಿ ಪುನಂ (22) ಶವ ಪತ್ತೆಯಾಗಿದೆ
ಇದೇ ಮಾ.15ರಂದು ಶವ ಪತ್ತೆಯಾಗಿದ್ದು ಪೋಷಕರು ಕೊಲೆ ಆರೋಪ ಮಾಡಿದ್ದಾರೆ

ಪ್ರಕರಣ ಬೆನ್ನತ್ತಿದ ಖಾನಾಪುರ ಪೋಲೀಸರು ಕೊಲೆ ಪ್ರಕರಣ ಭೇಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ

ಬಿಎಚ್ಎಂಎಸ್ ವೈದ್ಯ ಸುನೀಲ್ ನನ್ನು ಪ್ರೀತಿಸುತ್ತಿದ್ದ ಮೃತ ಪುನಂ
ಇತ್ತೀಚಿಗೆ ಮದುವೆಗಾಗಿ ಸುನೀಲ್ ನನ್ನು ಒತ್ತಾಯಿಸಿದ್ದಳು ಪ್ರೇಯಸಿಸಿ ಪುನಂ
ಅಂತರಜಾತಿ ಹಿನ್ನೆಲೆಯಲ್ಲಿ ಮದುವೆ ನಿರಾಕರಿಸಿದ್ದ ಸುನಿಲ್
ಪುನಂ ಮುಗಿಸಲು ಸುನೀಲ್ ಸಹೋದರ ಸಂಜಯ ಜತೆಗೆ ಸೇರಿ ಸ್ಕೇಚ್ ಹಾಕಿದ್ದ ಎಂದು ತಿಳಿದು ಬಂದಿದೆ
ಗೋವಾ ಪ್ರವಾಸದ ನೆಪದಲ್ಲಿ ಪುನಂ ಕರೆತಂದು ರೈಲಿನಿಂದ ತಳ್ಳಿ ಹತ್ಯೆ ಮಾಡಲಾಗಿದೆ ಎಂದು ತನಿಖೆಯಿಂದ ಗೊತ್ತಾಗಿದೆ
ಖಾನಾಪುರ ಪೊಲೀಸರು ವೈದ್ಯರಾದ ಸುನೀಲ್, ಸಂಜಯ ಬಂಧಿಸಿದ್ದು ತನಿಖೆ ಮುಂದುವರೆದಿದೆ

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *