ಎಂಜಿನ್ ರೇಡಿಯೇಟರ್ ಬಿಸಿ ನೀರು ಸಿಡಿದು ನಾಲ್ಕು ವಿಧ್ಯಾರ್ಥಿಗಳಿಗೆ ಗಾಯ

ಬೆಳಗಾಬಿ- ಎಂಜಿನ್ ನ ರೇಡಿಯೇಟರ್ ನಲ್ಲಿರುವ ಬಿಸಿನೀರು ಸಿಡಿದು ನಾಲ್ವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ

ಸಂಕೇಶ್ವರ ಪಟ್ಟಣದ ಎಸ್ ಡಿ‌ವಿಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳೇ ಗಂಭೀರ ಗಾಯಗೊಂಡಿದ್ದಾರೆ
ಶಾಲೆಯ ವಾಹನದಲ್ಲಿ ಇಂದು ಬೆಳಗ್ಗೆ ಸಂಕೇಶ್ವರಕ್ಕೆ ತೆರುಳುವಾಗ ಹುಕ್ಕೇರಿ ತಾಲೂಕಿನ ಗೋಟೂರು‌ ಗ್ರಾಮದ ಬಳಿ ಘಟನೆ ನಡೆದಿದೆ

ಲಚಕೇತ ಕೋಳಿ (೬) ಸಿದ್ಧಾರ್ಥ ಪಾಟೀಲ (೫) ಶ್ರೀಶೈಲಕುಮಾರ ಮಠಪತಿ (೪) ಅನುರಾಧಾ ಮಠಪತಿ (೬) ಗಂಭೀರಗಾಯಗೊಂಡಿರುವ ವಿದ್ಯಾರ್ಥಿಗಳಾಗಿದ್ದು
ಶಾಲಾ ವಾಹನದ ಎಂಜೀನ್ ನ ರೇಡಿಯೇಟರ್ ಮುಚ್ಚಳ ಏಕಾಏಕಿ ಬಿಚ್ಚಿ ಬಿದ್ದಿದ್ದೆ ಅವಘಡಕಕ್ಕೆ ಕಾರಣವಾಗಿದೆ

ಬಿಸಿ ನೀರು ಸಿಡಿದು ಕಿತ್ತುಹೋದ ವಿದ್ಯಾರ್ಥಿಗಳ ಮುಖ, ಕೈ ಕಾಲು, ದೇಹದ ಇತರ ಭಾಗದ ಚರ್ಮ ಕ್ಕೆ ಗಾಯವಾಗಿದೆ
ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಯ ಖಾಸಗಿ ಆಸ್ಪತ್ರಗೆ ವಿದ್ಯಾರ್ಥಿಗಳನ್ನು ದಾಖಲಿಸಲಾಗಿದೆ

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *