ಬೆಳಗಾವಿಯಲ್ಲಿ ಲಿಂಗಾಯತ ಧರ್ಮಕ್ರಾಂತಿಯ ಕಹಳೆ….

ಬೆಳಗಾವಿ- ಗಡಿನಾಡ ಗುಡಿ ಬೆಳಗಾವಿಯಲ್ಲಿ ಇಂದು ಬಸವ ಭಕ್ತರ ಸಾಗರವೇ ಹರಿದು ಬರುವ ಮೂಲಕ ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಸ್ಥಾನ ಮಾನ ನೀಡುವ ಹೋರಾಟಕ್ಕೆ ಹೊಸ ದಿಕ್ಸೂಚಿ ನೀಡುವ ಮೂಲಕ ಲಿಂಗಾಯತ ಧರ್ಮ ಕ್ರಾಂತಿಯ ಕಹಳೆ ಮೊಳಗಿತು
ಇಂದು ಮಂಗಳವಾರ ಬೆಳಗ್ಗೆ ಯಿಂದಲೇ ಬಸವ ಭಕ್ತರ ದಂಡು ಕುಂದಾನಗರಿ ಬೆಳಗಾವಿಗೆ ಹರಿದು ಬಂದಿತು ಬಸವ ಭಕ್ರರು ಭಾರತ ದೇಶ ಜೈ ಬಸವೇಶ ಎನ್ನುವ ಘೋಷಣೆಗಳನ್ನು ಕೂಗುತ್ತ ಬೆಳಗಾವಿಯ ಲಿಂಗರಾಜ ಮೈದಾನದಲ್ಲಿ ಸಮಾವೇಶಗೊಂಡರು
ಲಿಂಗರಾಜ ಮೈದಾನದ ವೇದಿಕೆಯಲ್ಲಿ ಮಠಾಧೀಶರು ಬಸವ ಭಕ್ರರು ಜನಪ್ರತಿನಿಧಿಗಳು ಉಪಸ್ತಿತರಿದ್ದು ವಚನ ಗಾಯನ ಮತ್ತು ನಾಡಗೀತೆಯ ಮೂಲಕ ಲಿಂಗಾಯತರ ಸಮಾವೇಶಕ್ಕೆ ಚಾಲನೆ ದೊರೆಯಿತು
ಲಿಂಗರಾಜ ಮೈದಾನದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಸಬ ಭಕ್ತರು ಸಮಾವೇಶಗೊಂಡಿದ್ದು ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಸ್ಥಾನ ಮಾನ ದೊರಕಿಸಿಕೊಡುವ ನಿಟ್ಟಿನಲ್ಲಿ ಗಡಿನಾಡ ಗುಡಿಯಲ್ಲಿ ಧರ್ಮ ಯುದ್ಧದ ಕ್ರಾಂತಿಯ ಕಹಳೆ ಮೊಳಗಿದೆ

ಮುಸ್ಲೀಂ ಬಾಂಧವರ ಸಾಥ್
ಲಿಂಗಾಯತ ಧರ್ಮದ ಹೋರಾಟಕ್ಕೆ ಬೆಳಗಾವಿಯ ಮುಸ್ಲೀಂ ಬಾಂಧವರು ಬೆಂಬಲ ನೀಡುವ ಜೊತೆಗೆ ಲಿಂಗರಾಜ ಮೈದಾನದ ದ್ವಾರದಲ್ಲಿ ಉಚಿತವಾಗಿ ನೀರಿನ ಬಾಟಲ್ ಗಳನ್ನು ವಿತರಿಸಿ ಸೌಹಾರ್ದತೆಗೆ ಸಾಕ್ಷಿಯಾದರು

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *