Breaking News

ಲೈವ್ ವಿಡಿಯೋ ಮಾಡಿ,ಕುಟುಂಬ ಸಮೇತ ಆತ್ಮಹತ್ಯೆಗೆ ಯತ್ನಿಸಿದ.

ರಾಯಬಾಗ-ಲೈವ್ ವಿಡಿಯೋ ಮಾಡಿ,ವ್ಯಕ್ತಿಯೊಬ್ಬ ಕುಟುಂಬ ಸಮೇತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.ಹಾಲಪ್ಪ ಸುರಾಣಿ (27) ಎಂಬಾತ,ತನ್ನ ಪತ್ನಿ ಹಾಗೂ ಮಕ್ಕಳ ಜೊತೆ ಆತ್ಮಹತ್ಯೆಗೆ ಯತ್ನಿಸಿದ ಘಟನೆಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದಲ್ಲಿ ನಡೆದಿದೆ.

ರಾಯಬಾಗ ತಹಶೀಲ್ದಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ,ಹಾಲಪ್ಪ ಸುರಾಣಿಗೆ ಸದಾಶಿವ ನಿಡೋಣಿ ಎಂಬಾತ 2018 ರಿಂದ ತೊಂದರೆ ಕೊಡುತ್ತಿದ್ದ ,ಅದಕ್ಕಾಗಿಯೇನಾನು ಮನನೊಂದ ನನ್ನ ಎರಡ ಮಕ್ಕಳು ಹಾಗೂ ನನ್ನ ಪತ್ನಿ ಬಿಟ್ಟು ಮಧ್ಯರಾತ್ರಿ 12 ಗಂಟೆಗೆ ಲೈವ್ ಬಂದಿದ್ದೇನೆ.ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ.ಎಂದು ಹೇಳಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ನನ್ನ ಆಫೀಸನಲ್ಲಿ‌ ಸದಾಶಿವ ನಿಡೋಣಿ ಎಂಬ ವ್ಯಕ್ತಿ ಕಿರಕುಳ ನೀಡುತ್ತಿದ್ದ,ಕಳೆದ ಎಂಟು ತಿಂಗಳ ಹಿಂದೆ ನನ್ನ ಮೇಲೆ ಪ್ರಕರಣ ದಾಖಲಿಸಿ ಎಂಟು ಲಕ್ಷ ಬೇಡಿಕೆ ಇಟ್ಟಿದ್ದ. ನಮ್ಮ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಿ ಎಂದು ಬೇಡಿಕೊಂಡ ಹಾಲಪ್ಪ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು,ಹಾರೂಗೇರಿ ಖಾಸಗಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾನೆ.ಹಾರೂಗೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಪತಿ ಹಾಲಪ್ಪ ಸುರಾಣಿ ಜೊತೆಗೆ ಪತ್ನಿ‌ ಕೂಡಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.ಪತ್ನಿ ಮಹಾದೇವಿ ಸುರಾಣಿ ಹಾಗೂ ಪತಿ ಹಾಲಪ್ಪ ಸುರಾಣಿ ಇಬ್ಬರೂ ಹಾರೂಗೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *