ಗಣಪತಿ ಗಲ್ಲಿಯಲ್ಲಿ ವ್ಯಾಪಾರಿಗಳ ಗಲಾಟೆ ಚೂರಿ ಇರಿತ ಹತ್ತಕ್ಕೂ ಹೆಚ್ಚು ಜನರಿಗೆ ಗಾಯ

ಗಣಪತಿ ಗಲ್ಲಿಯಲ್ಲಿ ವ್ಯಾಪಾರಿಗಳ ಗಲಾಟೆ ಚೂರಿ ಇರಿತ ಹತ್ತಕ್ಕೂ ಹೆಚ್ಚು ಜನರಿಗೆ ಗಾಯ

ಬೆಳಗಾವಿ- ನಗರದ ಗಣಪತಿ ಗಲ್ಲಿಯಲ್ಲಿ ಹಣ್ಣು ಮಾರಾಟ ಮಾಡುವಾಗ ದರದಲ್ಲಿ ಪೈಪೋಟಿ ನಡೆದು ಹಣ್ಣು ಮಾರಾಟಗಾರರ ನಡುವೆ ಗಲಾಟೆಯಾಗಿ ಪರಸ್ಪರ ಚೂರಿ ಇರಿತವಾಗಿ ಈ ಘರ್ಷಣೆಯಲ್ಲಿ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ನಡೆದಿದೆ
ಆ್ಯಪಲ್ ಮಾರಾಟಗಾರರ ನಡುವೆ ಪೈಪೋಟಿ ನಡೆದಿದೆ ಇದೇ ಪೈಪೋಟಿ ಗಲಾಟೆಯಾಗಿ ವ್ಯಾಪಾರಿಗಳ ನಡುವೆ ಘರ್ಷಣೆಯಾಗಿದೆ ಕೆಲವರು ಚೂರಿ ಹಿಡಿದು ಘರ್ಷಣೆಗೆ ಇಳಿದರೆ ಇನ್ನು ಕೆಲವರು ತಕ್ಕಡಿ ಹಾಗು ಕಲ್ಲುಗಳನ್ನು ಹಿಡಿದು ಬಡಿದಾಡಿಕೊಂಡಿದ್ದು ಹತ್ತಕ್ಕೂ ಹೆಚ್ವು ಜನರು ಗಾಯಗೊಂಡಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ
ಘರ್ಷಣೆಯಿಂದಾಗಿ ಗಣಪತಿ ಗಲ್ಲಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಪರಿಸ್ಥಿತಿ ಈಗ ಶಾಂತವಾಗಿದೆ

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *