ಕೊಲೆಯಾದ ಬೆಳಗಾವಿಯ ನಾಗರಾಜ್ ಗಾಡಿವಡ್ಡರ್…
ಬೆಳಗಾವಿ- ಇತ್ತೀಚಿಗೆ ಬೆಳಗಾವಿ ಶಿವಬಸವ ನಗರದಲ್ಲಿ ಬೆಳಗಾವಿಯ ಯುವಕ ನಾಗರಾಜ್ ಗಾಡಿವಡ್ಡರ್ ಕೊಲೆ ಪ್ರಕರಣವನ್ನು ಬೆಳಗಾವಿಯ ಮಾಳಮಾರುತಿ ಠಾಣೆಯ ಪೋಲೀಸರು 48 ಗಂಟೆಯೊಳಗಾಗಿ ಭೇದಿಸಿದ್ದು,ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಕೊಲೆ ಪ್ರಕರಣದಲ್ಲಿ ಭಾಗಿಯಾದ ಮೂರು ಜನ ಹಂತಕರ ಪೈಕಿ ಇಬ್ಬರನ್ನು ಬಂಧಿಸಲಾಗಿದ್ದು ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ.ಈತನ ಬಂಧನಕ್ಕೆ ಬೆಳಗಾವಿ ಪೋಲೀಸರು ಜಾಲ ಬೀಸಿದ್ದು ಮಹಾರಾಷ್ಟ್ರದಲ್ಲಿ ಬೀಡುಬಿಟ್ಟಿದ್ದಾರೆ.
ನಾಗರಾಜ್ ಗಾಡಿವಡ್ಡರ್ ಕೊಲೆಗೆ ಲವ್ ಮ್ಯಾಟರ್ ಕಾರಣ ಎಂದು ತಿಳಿದು ಬಂದಿದೆ.ನಾಗರಾಜ್ ಪ್ರೇಯಸಿಯನ್ನು ಭೇಟಿಯಾಗಲು ಕೊಲ್ಹಾಪೂರದ ಯುವಕ ಬೆಳಗಾವಿಗೆ ಬಂದಾಗ ನಾಗರಾಜ್ ಮತ್ತು ಕೊಲ್ಹಾಪೂರದ ಯುವಕನ ನಡುವೆ ಮಾರಾಮಾರಿಯಾಗಿತ್ತು ಇದರ ಸೇಡು ತೀರಿಸಿಕೊಳ್ಳಲು ನಾಗರಾಜ್ ಗಾಡಿವಡ್ಡರ್ ಕೊಲೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ನಾಗರಾಜ್ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ. ಮಾಳ ಮಾರುತಿ ಠಾಣೆಯ ಪೋಲೀಸರು ಮಾರ್ಕೆಟ್ ಎಸಿಪಿ ನಾರಾಯಣ ಭರಮಣಿ ಅವರ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿತರಾದ 1)ಪ್ರಥಮೇಶ್ ಧರ್ಮೇಂದ್ರ ಕಸಬೇಕರ( 20) ರಾಜಾರಾಮ್ ಪುರಿ ಬೈಪಾಸ್ ಚಾಳ,ಕೊಲ್ಹಾಪೂರ 2) ಆಕಾಶ್ ಕಾಳಪ್ಪಾ ಪವಾರ್ (21) ರಾಜಾರಾಮಪುರಿ ಬೈಪಾಸ್ ಕೊಲ್ಹಾಪೂರ ಈ ಇಬ್ವರು ಆರೋಪಿಗಳನ್ನು ಬಂಧಿಸಲಾಗಿದ್ದು ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ.
ಆರೋಪಿಗಳನ್ನು ಬಂಧಿಸುವ ಕಾರ್ಯಚರಣೆಯ ಮುಂದಾಳತ್ವ ವಹಿಸಿದ್ದ ಮಾಳಮಾರುತಿ ಸಿಪಿಐ ಕಾಲಿಮಿರ್ಚಿ ಪಿಎಸ್ಐ ಹೊನ್ನಪ್ಪಾ ಸೇರಿದಂತೆ ಪೋಲೀಸರ ತಂಡಕ್ಕೆ ನಗರ ಪೋಲೀಸ್ ಆಯುಕ್ತರು ಬಹುಮಾನ ಘೋಷಿಸಿ ಇವರ ಕಾರ್ಯಕ್ಕೆ ಮೆಚ್ವುಗೆ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
