Breaking News

ಗಂಡನ ಕೊಲೆ ಮಾಡಿ ಅಂಗಳದಲ್ಲೇ ಸಮಾಧಿ ಮಾಡಿದ ಪತ್ನಿ

ಬೆಳಗಾವಿ- ಅನೈತಿಕ ಸಂಬಂಧದ ಕುರಿತು ಪ್ರಶ್ನೆ ಮಾಡಿದ ಗಂಡನ ತಲೆಗೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ ಪತ್ನಿ, ಗಂಡನ ಶವವನ್ನು ಮನೆಯ ಅಂಗಳದಲ್ಲೇ ಸಮಾಧಿ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಹಂಚನಾಳ ಗ್ರಾಮದಲ್ಲಿ ನಡೆದಿದೆ

ಸಚಿನ್ ಸದಾಶಿವ ಭೋಪಲೆ (35) ಮೃತ ದುರ್ದೈವಿಯಾಗಿದ್ದು ಈತ ಮೂಲತಹ ಮಹಾರಾಷ್ಟ್ದ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲ್ಲೂಕಿನ ನೇರ್ಲಿ ಗ್ರಾಮದವನು ಎಂದು ತಿಳಿದು ಬಂದಿದೆ.

ಹಂಚನಾಳ ಗ್ರಾಮದಲ್ಲಿ ವಾಸವಾಗಿದ್ದ ಪತಿ ಸಚಿನ್ ಮತ್ತು,ಪತ್ನಿ ಅನೀತಾ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಪತ್ನಿ ಅನೀತಾ ಬೇರೊಬ್ಬನ ಜೊತೆ ಆಕ್ರಮ ಸಮಂಧ ಹೊಂದಿರುವ ಕುರಿತು ಪತಿ ಸಚಿನ್ ಅನೀತಾಗೆ ಪ್ರಶ್ನೆ ಮಾಡಿದ ಕಾರಣ ಪತ್ನಿ ಅನೀತಾ ತನ್ನ ಗಂಡ ಸಚಿನ್ ಗೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾಳೆ.

ರಾತ್ರಿ ಜೆಸಿಬಿ ಕರೆದು ಮನೆಯಲ್ಲಿ ಎಮ್ಮೆ ಕರ ಸತ್ತಿದೆ ಅದನ್ನು ಹುಗಿಯಲು ತೆಗ್ಗು ತೆಗೆಯುವಂತೆ ಹೇಳಿದ್ದಾಳೆ,ಜೆಸಿಬಿ ಚಾಲಕ ತಗ್ಗಾ ತೆಗೆದು ಹೋಗಿದ್ದಾನೆ.ನಂತರ ಅನೀತಾ ತನ್ನ ಸಮಂಧಿಕರ ಜೊತೆ ಸೇರಿಕೊಂಡು ಗಂಡನ ಶವವನ್ನು ಮನೆಯ ಅಂಗಳದಲ್ಲೇ ಸಮಾಧಿ ಮಾಡಿ ಈ ಕೃತ್ಯಕ್ಕೆ ಸಾಥ್ ಕೊಟ್ಟವರನ್ನು ಕರೆದುಕೊಂಡು ಪರಾರಿಯಾಗಿದ್ದಾಳೆ.

ತಗ್ಗಾ ತೆಗೆದ ಜಿಸಿಬಿ ಚಾಲಕನಿಗೆ ಸಂಶಯ ಬಂದು ಪೋಲೀಸರಿಗೆ ಮಾಹಿತಿ ನೀಡಿದ ಬಳಿಕ ,ಪೋಲೀಸರು ತನಿಖೆ ಮಾಡಿ ಮನೆಯ ಅಂಗಳದಲ್ಲಿದ್ದ ಸಮಾಧಿ ಅಗೆದ ಬಳಿಕ ಅಲ್ಲಿ ಸಚಿನ್ ಶವ ಪತ್ತೆಯಾಗಿ ಸಮಾಧಿಯಾಗಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಿಪ್ಪಾಣಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೊಲೆ ಮಾಡಿ ಪರಾರಿಯಾದ ಮೂವರ ಪತ್ತೆಗೆ ಪೋಲೀಸರು ಹುಡುಕಾಟ ಆರಂಭಿಸಿದ್ದಾರೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *