ಶೆರೆ ಕುಡ್ಯಾಕ್ ರೊಕ್ಕಾ ಕೊಡಲಿಲ್ಲ ಅಂತ, ಹೆಂಡತಿ, ಹೊಟ್ಯಾಗ ಕತ್ರಿ ಹಾಕಿದ ಗಂಡ….

ಬೆಳಗಾವಿ-ಅದೊಂದು ಪುಟ್ಟ ಸಂಸಾರ ಗಂಡ ಕುಡುಕನಾದರೂ ಹೆಂಡತಿ ಟೇಲರಿಂಗ್ ಮಾಡಿ ಬದುಕು ಸಾಗಿಸುತ್ತಿರುವಾಗ,ಸರಾಯಿ ಕುಡಿಯಲು ದುಡ್ಡು ಕೊಡಲಿಲ್ಲ ಅಂತಾ ಕುಡುಕ ಗಂಡ ಹೆಂಡತಿಯ ಹೊಟ್ಟೆಯಲ್ಲಿ ಟೇಲರಿಂಗ್ ಕತ್ರಿಯಿಧ ಹತ್ತಾರು ಬಾರಿ ಇರಿದು ಹಲ್ಲೆ ಮಾಡಿ ಗಂಭೀರವಾಗಿ ಗಾಯಪಡಿಸಿದ ಘಟನೆ ಬೆಳಗಾವಿ ಪಕ್ಕದ ಹೊನಗಾ ಗ್ರಾಮದಲ್ಲಿ ನಡೆದಿದೆ.

ಹುಕ್ಕೇರಿ ತಾಲ್ಲೂಕಿನ ರಾಜನಕಟ್ಟಿ ಗ್ರಾಮದವರಾದ ಯಲ್ಲವ್ವಾ ಗುರವಣ್ಣವರ,35,ಹಾಗೂ ಗಂಡ ಸಿದ್ದಪ್ಪ ಗುರುವಣ್ಣರ 36 ಇಬ್ಬರೂ ಈಗ ಹೊನಗಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ವಾಸವಾಗಿದ್ದರು

ಗಂಡ ಸಿದ್ಧಪ್ಪ ಹೆಂಡತಿ ಯಲ್ಲವ್ವನ ಕಡೆ ಸರಾಯಿ ಕೊಡಲು ದುಡ್ಡು ಕೇಳಿದ್ದಾನೆ.ಮನೆ ನಡೆಸಲು ಟೇಲರಿಂಗ್ ಮಾಡಿದ ದುಡ್ಡು ಸಾಕಾಗುತ್ತಿಲ್ಲ,ಸರಾಯಿ ಕೊಡಲು ದುಡ್ಡು ಏಲ್ಲಿಂದ್ ತರಲಿ ಅಂದಾಗ ಸಿಟ್ಟಿಗೆದ್ದ ಸಿದ್ದಪ್ಪ ಟೇಲರಿಂಗ್ ಕತ್ರಿಯಿಂದ ಹೆಂಡತಿ ಯಲ್ಲವ್ವನ ಹೊಟ್ಟೆಯಲ್ಲಿ ಹತ್ತಾರು ಬಾರಿ ಇರಿದ ಪರಿಣಾಮ ಯಲ್ಲವ್ವ ಗಂಭೀರವಾಗಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಕಾಕತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *