ಬೆಳಗಾವಿ- ಕೆರೆಯಲ್ಲಿ ಈಜಲು ಹೋಗಿ ಯುವಕನೊಬ್ಬ ನೀರು ಪಾಲಾದ ಘಟನೆ ಬೆಳಗಾವಿ ತಾಲ್ಲೂಕಿನ ಗೌಂಡವಾಡ ಗ್ರಾಮದಲ್ಲಿ ನಡೆದಿದೆ
14 ವರ್ಷದ ಗೌತಮ ಲಕ್ಷ್ಮಣ ಪವಾರ ಮೃತಪಟ್ಟ ದುರ್ದೈವಿಯಾಗಿದ್ದಾನೆ ಇಂದು ಮಧ್ಯಾಹ್ನ ಗೌಂಡವಾಡ ಗ್ರಾಮದಲ್ಲಿ ಈಜಲು ಕೆರೆಗೆ ಈಳಿದ ಯುವಕ ಮರಳಿ ದಡ ಸೇರದೇ ನೀರು ಪಾಲಾದ ಘಟನೆ ನಡೆದಿದೆ
ಘಟನೆ ನಡೆಯುತ್ತಿದ್ದಂತೆಯೇ ಗ್ರಾಮಸ್ಥರು ಜಮಾಯಿಸಿ ಯುವಕನ ಶವ ಪತ್ತೆಗೆ ಪ್ರಯತ್ನ ನಡೆಸಿದ್ದು ಗೌಂಡವಾಡ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ ಘಟನಾ ಸ್ಥಳಕ್ಕೆ ಪೋಲೀಸರು ದೌಡಾಯಿಸಿದ್ದು ತನಿಖೆ ಆರಂಭಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ