ಗೆಳೆಯರ ಜೊತೆ ಈಜಲು ಹೋದ ಬಾಲಕ ಮರಳಿ ಬರಲಿಲ್ಲ….

ಬೆಳಗಾವಿ- ಗೆಳೆಯರ ಜೊತೆ ಈಜಲು ಹೋದ ಬಾಲಕ ನೀರು ಪಾಲಾದ ಘಟನೆ ಬೆಳಗಾವಿ ಮಹಾನಗರದ ಪಕ್ಕದಲ್ಲೇ ಇರುವ ಕೆ‌.ಕೆ ಕೊಪ್ಪ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.

ಬೆಳಗಾವಿ ಪಕ್ಕದ ಕೆ.ಕೆ ಕೊಪ್ಪ ಗ್ರಾಮದಲ್ಲಿರುವ ಧರ್ಮಪೂರ ಹದ್ದಿಯಲ್ಲಿರುವ ಕಲ್ಲಿನ ಕ್ವಾರಿಯ ಹೊಂಡದಲ್ಲಿ ಗೆಳೆಯರ ಜೊತೆ ಈಜಲು ಹೋಗಿದ್ದ 14 ವರ್ಷದ ಬಾಲಕ ಈಜಲು ಬಾರದೇ ನೀರು ಪಾಲಾಗಿದ್ದಾನೆ.

ಮೂಲತಹ ಉಡಪಿಯ 14 ವರ್ಷದ ವಾಹೀಲ ದಾದಾಪೀರ ದೇಸಾಯಿ ಎಂಬ ಬಾಲಕ ತನ್ನ ತಾಯಿಯ ಜೊತೆ ಕೆ.ಕೆ ಕೊಪ್ಪ ಗ್ರಾಮದಲ್ಲಿರುವ ತನ್ನ ಅಜ್ಜಿಯ ಮನೆಗೆ ಬಂದಿದ್ದ,ಇಂದು ಬೆಳಗ್ಗೆ ವಾಹೀಲ ತನ್ನ ತಮ್ಮ ಮತ್ತು ಗ್ರಾಮದ ಮೂರ್ನಾಲ್ಕು ಗೆಳೆಯರ ಜೊತೆ ಹೊಂಡದಲ್ಲಿ ಈಜಾಡಲು ಹೋಗಿದ್ದ, ಈಜು ಬಾರದೇ ಈ ಬಾಲಕ ನೀರುಪಾಲಾಗಿದ್ದಾನೆ.ಹಿರೇಬಾಗೇವಾಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *