ಬೆಳಗಾವಿ ಉತ್ತರದಿಂದ ರಾಜು ಸೇಠ ಫೈನಲ್!!

ಬೆಳಗಾವಿ- ತಿಕ್ಕಾಟ,ಗುದ್ದಾಟ,ಪ್ರಬಲ ಪೈಪೋಟಿಯ ನಡುವೆ ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೊನೆಗೂ ರಾಜು ಸೇಠ ಅವರಿಗೆ ಫೈನಲ್ ಆಗಿದೆ ಎಂದು ದೆಹಲಿಯ ನಂಬಲರ್ಹ ಕಾಂಗ್ರೆಸ್ ಮೂಲಗಳಿಂದ ದೃಡವಾಗಿದ್ದು ಅಧಿಕೃತ ಘೋಷಣೆ ಅಷ್ಟೇ ಬಾಕಿ ಇದೆ.

ಬೆಳಗಾವಿ ಉತ್ತರ ಕ್ಷೇತ್ರದಿಂದ ರಾಜು ಸೇಠ,,ಹಾಗೂ ಸವದತ್ತಿ ಯಲ್ಲಮ್ಮನ ಕ್ಷೇತ್ರದಿಂದ ವಿಶ್ವಾಸ್ ವೈದ್ಯ ಅವರಿಗೆ ಕಾಂಗ್ರೆಸ್ ಟಿಕೆಟ್ ಫೈನಲ್ ಆಗಿದೆ ಎಂದು ಅಧಿಕೃತ ಮೂಲಗಳಿಂದ ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ಮಾಹಿಸಿ ಲಭಿಸಿದ್ದು ಈ ಮಾಹಿತಿ ನಂಬಲರ್ಹವಾಗಿದೆ.

ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕುರಿತು ಕಳೆದ ಎರಡು ದಿನಗಳಿಂದ ಅನೇಕ ಉಹಾಪೋಹಗಳು,ವದಂತಿಗಳು ಹರಡಿದ್ದವು,ಇವತ್ತು ಸಂಜೆ ದೆಹಲಿಯಲ್ಲಿ ನಡೆದ ಬೆಳಗವಣಿಗೆಯಲ್ಲಿ ಬೆಳಗಾವಿ ಜಿಲ್ಲೆಯ ಎರಡು ಕ್ಷೇತ್ರಗಳ ಬಿಕ್ಕಟ್ಟು ಶಮನವಾಗಿದ್ದು ನಾಳೆ ಅಥವಾ ನಾಡಿದ್ದು ಕಾಂಗ್ರೆಸ್ಸಿನ ಎರಡನೇಯ ಕಂತಿನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

Check Also

ತಂದೆಯ ಹುಟ್ಟು ಹಬ್ಬದ ಪ್ರಯುಕ್ತ ಸಿಂಹ ದತ್ತು ಪಡೆದ ರಾಹುಲ್ ಜಾರಕಿಹೊಳಿ

ಬೆಳಗಾವಿ: ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿರುವ ‘ಬೃಂಗಾ’ ಎಂಬ ಸಿಂಹವನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರ 63ನೇ …

Leave a Reply

Your email address will not be published. Required fields are marked *