Breaking News

ಸೊಂಕಿತರನ್ನು ಸ್ಥಳಾಂತರ ಮಾಡಿ,ಇಲ್ಲಾ ಅಂದ್ರೆ ಮುಂಬಯಿಗೆ ವಾಪಸ್ ಕಳಿಸಿ….!

ಬೆಳಗಾವಿ- ಬೆಳಗಾವಿಯ ವಡಗಾವಿ ಪ್ರದೇಶದಲ್ಲಿರುವ ಢೋರ ಗಲ್ಲಿಯಲ್ಲಿ ಕೊರೋನಾ ಸೊಂಕಿತರು ಪತ್ತೆಯಾದ ಹಿನ್ನಲೆಯಲ್ಲಿ ಈ ಪ್ರದೇಶವನ್ನು ಶೀಲ್ ಡೌನ್ ಮಾಡಲಾಗಿದ್ದು,ಕೂಡಲೇ ಸೊಂಕಿತರನ್ನು ಸ್ಥಳಾಂತರ ಮಾಡುವಂತೆ,ಈ ಭಾಗದ ಜನ ಒತ್ತಾಯಿಸಿದ್ದಾರೆ.

ಢೋರ,ಗಲ್ಲಿ,ರೈತಗಲ್ಲಿ,ವಡ್ಡರಗಲ್ಲಿಯ ನಿವಾಸಿಗಳು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು‌. ಸೊಂಕಿತರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿ,ಇದು ಸಾದ್ಯವಾಗದಿದ್ದರೆ,ಸೊಂಕಿತರನ್ನು ವಾಪಸ್ ಮುಂಬಯಿ ಗೆ ಕಳುಹಿಸಿ ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು‌.

ಢೋರಗಲ್ಲಿ,ರೈತಗಲ್ಲಿ ,ಮತ್ತು ವಡ್ಡರಗಲ್ಲಿಯ ನಿವಾಸಿಗಳು ದಿನನಿತ್ಯ ದುಡಿಮೆ ಮಾಡಿ ಉಪಜೀವನ ನಡೆಸುತ್ತಿದ್ದು, ಈ ಪ್ರದೇಶವನ್ನು ಶೀಲ್ ಡೌನ್ ಮಾಡಿದ ಕಾರಣ ಜನರ ಓಡಾಟಕ್ಕೆ ತೊಂದರೆ ಆಗಿದೆ ಎಂದು ಈ ಭಾಗದ ನಿವಾಸಿಗಳು ಡಿಸಿ ಗೆ ದೂರು ನೀಡಿದರು.

Check Also

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ …

Leave a Reply

Your email address will not be published. Required fields are marked *