ಸೊಂಕಿತರನ್ನು ಸ್ಥಳಾಂತರ ಮಾಡಿ,ಇಲ್ಲಾ ಅಂದ್ರೆ ಮುಂಬಯಿಗೆ ವಾಪಸ್ ಕಳಿಸಿ….!

ಬೆಳಗಾವಿ- ಬೆಳಗಾವಿಯ ವಡಗಾವಿ ಪ್ರದೇಶದಲ್ಲಿರುವ ಢೋರ ಗಲ್ಲಿಯಲ್ಲಿ ಕೊರೋನಾ ಸೊಂಕಿತರು ಪತ್ತೆಯಾದ ಹಿನ್ನಲೆಯಲ್ಲಿ ಈ ಪ್ರದೇಶವನ್ನು ಶೀಲ್ ಡೌನ್ ಮಾಡಲಾಗಿದ್ದು,ಕೂಡಲೇ ಸೊಂಕಿತರನ್ನು ಸ್ಥಳಾಂತರ ಮಾಡುವಂತೆ,ಈ ಭಾಗದ ಜನ ಒತ್ತಾಯಿಸಿದ್ದಾರೆ.

ಢೋರ,ಗಲ್ಲಿ,ರೈತಗಲ್ಲಿ,ವಡ್ಡರಗಲ್ಲಿಯ ನಿವಾಸಿಗಳು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು‌. ಸೊಂಕಿತರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿ,ಇದು ಸಾದ್ಯವಾಗದಿದ್ದರೆ,ಸೊಂಕಿತರನ್ನು ವಾಪಸ್ ಮುಂಬಯಿ ಗೆ ಕಳುಹಿಸಿ ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು‌.

ಢೋರಗಲ್ಲಿ,ರೈತಗಲ್ಲಿ ,ಮತ್ತು ವಡ್ಡರಗಲ್ಲಿಯ ನಿವಾಸಿಗಳು ದಿನನಿತ್ಯ ದುಡಿಮೆ ಮಾಡಿ ಉಪಜೀವನ ನಡೆಸುತ್ತಿದ್ದು, ಈ ಪ್ರದೇಶವನ್ನು ಶೀಲ್ ಡೌನ್ ಮಾಡಿದ ಕಾರಣ ಜನರ ಓಡಾಟಕ್ಕೆ ತೊಂದರೆ ಆಗಿದೆ ಎಂದು ಈ ಭಾಗದ ನಿವಾಸಿಗಳು ಡಿಸಿ ಗೆ ದೂರು ನೀಡಿದರು.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *