Breaking News

ನಿಪ್ಪಾಣಿ ಚೆಕ್ ಪೋಸ್ಟ್ ನಲ್ಲಿ ಡ್ಯುಟಿ ಮಾಡಿದ ಹಾಸನದ ಐವರು ಪೋಲೀಸರಿಗೂ ತಗುಲಿದ ಸೊಂಕು

ಬೆಳಗಾವಿ- ಪೊಲೀಸರ ಎದೆಯಲ್ಲೂ ಮಹಾಮಾರಿ ಕೊರೋನಾ ನಡುಕ ಹುಟ್ಟಿಸಿದೆ.ನಿಪ್ಪಾಣಿಯ ಕುಗನೊಳ್ಳಿ ಚೆಕ್ ಪೋಸ್ಟ್ ನಲ್ಲಿ ಡ್ಯುಟಿ ಮಾಡಿದ ಐವರು ಪೊಲೀಸ್ ಸಿಬ್ಬಂಧಿಗೆ ಕರೋನ ಸೊಂಕು ಇರುವದು ನಿನ್ನೆಯ ಹೆಲ್ತ್ ಬುಲಿಟೀನ್ ನಲ್ಲಿ ದೃಡವಾಗಿದೆ.

ಹಾಸನ ಮೂಲದ ಐವರು ಪೊಲೀಸರಿಗೆ ಕರೋನ ಪಾಸಿಟಿವ್,ಇರುವದು ದೃಡವಾಗಿದೆ. ಅವರ ಜತೆ ಕರ್ತವ್ಯ ನಿರ್ವಹಿಸಿದ್ದ ಪೇದೆಗಳು ಮತ್ತು ಹಿರಿಯ ಅಧಿಕಾರಿಗಳಿಗೆ ಈಗ ಆತಂಕ,ಶುರುವಾಗಿದೆ

ಕುಗನೊಳ್ಳಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕರ್ನಾಟಕದ ಗಡಿಯಾಗಿದ್ದು ಗಡಿಯ ಚಕ್ ಪೋಸ್ಟ್ ಗೆ ಕರ್ತವ್ಯಕ್ಕೆ ಹಾಜರಾಗಿದ್ದ ಹಾಸನ ಮೂಲದ ಪೊಲೀಸರಿಗೆ ನಿನ್ನೆಯ ಹೆಲ್ತ್ ಬುಲೀನ್ ನಲ್ಲಿ ಸೊಂಕು ದೃಡವಾಗಿದೆ.

ರಾಜ್ಯಾದ್ಯಂತ ಕರ್ತವ್ಯಕ್ಕಾಗಿ ೧೫೦ ಕ್ಕೂ ಹೆಚ್ಚು ಸಿಬ್ಬಂಧಿ ನಿಯೋಜಿಸಿದ್ದ ಬೆಳಗಾವಿ ಜಿಲ್ಲಾಡಳಿತ, ಈಗ ಕರ್ತವ್ಯದಲ್ಲಿರುವ ಪೊಲೀಸರಿಗೂ ಈಗ ಕರೋನ ಭಯ,ಕಾಡುತ್ತುದೆ.

ಮೇ ೨೦ ನೇ ತಾರೀಕೂ ಬೆಳಗಾವಿಯಿಂದ ಹಾಸನಕ್ಕೆ ಹಿಂದಿರುಗಿದ್ದ ಪೊಲೀಸ್ ಸಿಬ್ಬಂಧಿಗೆ ನಿನ್ನೆಯ ಹೆಲ್ತ ಬುಲೇಟಿನ್ ನಲ್ಲಿ ಕರೋನ ಪಾಸಿಟಿವ್ ಇರುವುದು ದೃಡವಾದ ಹಿನ್ನೆಲೆಯಲ್ಲಿ ನಿಪ್ಪಾಣಿ ಚೆಕ್ ಪೋಸ್ಟ್ ನಲ್ಲಿ ಆತಂಕ ಶುರುವಾಗಿದೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *