Breaking News

ಜೂನ್ 30 ರವರೆಗೆ ಸವದತ್ತಿ ಯಲ್ಲಮ್ಮ,ಚಿಂಚಲಿ ಮಾಯಕ್ಕನ ದೇಗುಲ ಬಂದ್….

ಬೆಳಗಾವಿ- ಬೆಳಗಾವಿ,ಕರ್ನಾಟಕ,ಗೋವಾ ಮಹಾರಾಷ್ಟ್ರ ರಾಜ್ಯಗಳ ಸಂಪರ್ಕದ ಕೊಂಡಿ,ಈ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಚೆಲ್ಲಾಟ ಮುಂದುವರೆದಿದ್ದು ಮಹಾರಾಷ್ಟ್ರದ ನಂಜು ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ಜೂನ್ 8 ರಿಂದ ರಾಜ್ಯದ ,ಎಲ್ಲ ದೇಗುಲಗಳು,ಮಸೀದಿ ,ಚರ್ಚಗಳು ಓಪನ್ ಆಗುತ್ತಿವೆ. ಆದರೆ ಬೆಳಗಾವಿ ಜಿಲ್ಲೆಯ ಸುಪ್ರಸಿದ್ಧ ದೇಗುಲಗಳಾದ ಸವದತ್ತಿ ಯಲ್ಲಮ್ಮ,ಚಿಂಚಲಿಯ ಮಾಯಕ್ಕ,ಚುಗಳಬಾವಿ ದೇವಸ್ಥಾನಗಳು ಜೂನ್ 30 ರವರೆಗೆ ಓಪನ್ ಆಗುವದಿಲ್ಲ‌‌.

ಯಾಕಂದ್ರೆ ಈ ಮೂರು ಸುಪ್ರಸಿದ್ಧ ದೇಗುಲಗಳಿಗೆ ಪಕ್ಕದ ಮಹಾರಾಷ್ಟ್ರದಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ.ಮಹಾರಾಷ್ಟ್ರದಲ್ಲಿ ಕೊರೋನಾ ತಾಂಡವ ಮುಂದುರೆದಿದ್ದು ಮುಂಜಾಗೃತಾ ಕ್ರಮವಾಗಿ ಬೆಳಗಾವಿ ಜಿಲ್ಲಾಧಿಕಾರಿಗಳು ಬೆಳಗಾವಿ ಜಿಲ್ಲೆಯ ಮೂರು ಪ್ರಮುಖ ದೇವಸ್ಥಾನಗಳನ್ನು ಜೂನ್ ,30 ರವರೆಗೆ ಬಂದ್ ಇಡುವಂತೆ ಆದೇಶ ಹೊರಡಿಸಿದ್ದಾರೆ.

Check Also

ಶಹಬ್ಬಾಷ್‌….ಬೆಳಗಾವಿ ಮಹಾಪೌರ ಮಂಗೇಶ್ ಪವಾರ್….!!

    ಬೆಳಗಾವಿ – ಬೆಳಗಾವಿ ಮಹಾನಗರ ಪಾಲಿಕೆ ಅಂದ್ರೆ ಕನ್ನಡ- ಮರಾಠಿ ಜಗಳ, ಎಂಈಎಸ್ ಕೇಂದ್ರ ಎನ್ಬುವ ಕಾಲ …

Leave a Reply

Your email address will not be published. Required fields are marked *