ಬೆಳಗಾವಿಯ ಉಜ್ವಲ ನಗರದಲ್ಲಿ ಗುಂಪು ಘರ್ಷಣೆ ಮಾಜಿ ನಗರಸೇವಕನಿಗೆ ಚೂರಿ ಇರಿತ

ಬೆಳಗಾವಿ- ಬೆಳಗಾವಿ ನಗರದ ಉಜ್ವಲ ನಗರದಲ್ಲಿ ಎರಡು ಗುಂಪುಗಳ ನಡುವೆ ಗುಂಪು ಘರ್ಷಣೆ ನಡೆದಿದ್ದು ಮಾಜಿ ನಗರಸೇವಕನಿಗೆ ಚೂರಿ ಇರಿತವಾದ ಘಟನೆ ಈಗ ಸಂಜೆ ನಡೆದಿದೆ

ಉಜ್ವಲ ನಗರದಲ್ಲಿರುವ ಮಾಜಿ ನಗರಸೇವಕನ ಅಡ್ಡೆಯ ಹತ್ತಿರ ಈ ಘರ್ಷಣೆ ನಡೆದಿದ್ದು ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ದಾಳಿ ಮಾಡಿದ್ದು ಘರ್ಷಣೆಯಲ್ಲಿ ಮಾಜಿ ನಗರಸೇವಕರಾದ ಫಿರ್ದೋಸ್ ದರ್ಗಾ  ಗಾಯಗೊಂಡಿದ್ದು ಕೆ ಎಲ್ ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಗಲಾಟೆಯಲ್ಲಿ ಹಾಲಿ ನಗರಸೇವಕ ಮತೀನ ಅಲಿ ಶೇಖ  ಕೂಡಾ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದ್ದು ಸ್ಥಳಕ್ಕೆ ಪೋಲೀಸರು ದೌಡಾಯಿಸಿದ್ದಾರೆ

ಯಾವ ಕಾರಣಕ್ಕೆ ಗಲಾಟೆ ನಡೆಯಿತು ಯಾರು ಯಾರ ಮೇಲೆ ದಾಳಿ ಮಾಡಿದ್ದಾರೆ ಎಂಬುವದನ್ನು ತಿಳಿಯಲು ಪೋಲೀಸರು ತನಿಖೆ ನಡೆಸಿದ್ದಾರೆ

ಉಜ್ವಲ ನಗರದಲ್ಲಿ ಬಿಗುವಿನ ವಾತಾವರಣವಿದ್ದು ಪರಿಸ್ಥಿತಿಯ ಮೇಲೆ ಪೋಲೀಸರು ನಿಗಾ ವಹಿಸಿದ್ದಾರೆ

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *