Breaking News

ನಾಳೆ ನಾನು ಬೆಳಗಾವಿಗೆ ಬರ್ತಾ ಇದ್ದೇನೆ….!!!

ಬೆಳಗಾವಿ- ಮಹಾರಾಷ್ಟ್ರ ಏಕೀಕರಣ ಸಮೀತಿ ನಿಷೇಧಿಸುವಂತೆ ಆಗ್ರಹ ಪಡಿಸಲು ನಾಳೆ ನಾನು ಬೆಳಗಾವಿಗೆ ಬರ್ತೀನಿ ಕ್ರಾಂತಿಯ ನೆಲ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಧರಣಿ ಮಾಡ್ತೀನಿ ಎಂದು ಚಳುವಳಿಯ ಹರಿಕಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಸಾರಾ ಗೋವೀಂದ್,ಪ್ರವೀಣ ಶೆಟ್ಟಿ,ಶಿವರಾಮೇಗೌಡ ಸೇರಿದಂತೆ ಹಲವಾರು ಕನ್ನಡ ಸಂಘಟನೆಗಳ ನಾಯಕರು ನನ್ನ ಜೊತೆ ಬರ್ತಾರೆ ಅವರೂ ಧರಣಿ ಮಾಡ್ತಾರೆ ಎಂದು ತಿಳಿಸಿರುವ ವಾಟಾಳ್ ನಾಗರಾಜ್ ನಾಳೆ ಬುಧವಾರ ಬೆಳಿಗ್ಗೆ 11-30 ಗಂಟೆಗೆ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಧರಣಿ ನಡೆಸಿ ಎಂಈಎಸ್ ಸಂಘಟನೆಯನ್ನು ಬ್ಯಾನ್ ಮಾಡುವಂತೆ ಒತ್ತಾಯ ಮಾಡಲಿದ್ದಾರೆ.

ಎಂಈಎಸ್ ಬ್ಯಾನ್ ಮಾಡುವಂತೆ ಆಗ್ರಹಿಸಿ 31 ರಂದು ಕರ್ನಾಟಕ ಬಂದ್ ಗೆ ವಿವಿಧ ಕನ್ನಡ ಸಂಘಟನೆಗಳು ಬೆಂಬಲ ಸೂಚಿಸಿದ್ದು,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ಅವಮಾನ ಮಾಡಿರುವ ಎಂಈಎಸ್ ಸಂಘಟನೆಯನ್ನು ನಿಷೇಧ ಮಾಡಲೇಬೇಕು, ಕನ್ನಡದ ಅಭಿಮಾನಿಗಳು ಬಂದ್ ಕರೆಗೆ ಬೆಂಬಲ ಸೂಚಿಸಬೇಕು ಎಂದು ವಾಟಾಳ್ ಮನವಿ ಮಾಡಿಕೊಂಡಿದ್ದಾರೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *