ಇಬ್ಬರು ಹೆಣ್ಣು ಮಕ್ಕಳ ಕತ್ತು ಕೊಯ್ದು ತಾನೂ ಆತ್ಮಹತ್ಯೆಗೆ ಯತ್ನಿಸಿದ ತಂದೆ

ಬೆಳಗಾವಿ- ಹೆತ್ತ ತಂದೆಯೊಬ್ಬ ಹೃಧಯ ಸಂಬಂದಿ ಕಾಯಿಲೆ ಇದೆ ಎಂದು ತನ್ನ ಮುದ್ದಾದ ಎರಡು ಮಕ್ಕಳನ್ನು ಕತ್ತು ಕೊಯ್ದು ಕೊಂದ ತಾನು ಸಹ ಆತ್ಮಹತ್ಯಗೆ ಯತ್ನ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿ ಮೂಳ್ಳೂರ್ ಘಾಟ್ ಅಲ್ಲಿ ನಡೆದಿದೆ. ತನಗೆ ಹೃದಯ ಸಂಬಂದಿ ಕಾಯಿಲೆ ಇದೆ ಎಂದು ಹೃದಯವೆ ಇಲ್ಲದ ಪಾಪಿ ತಂದೆ ಹೆತ್ತ ಇಬ್ಬರು ಹೆಣ್ಣು ಮಕ್ಕಳ ಕತ್ತು ಕೊಯ್ದು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನ ಮಾಡಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ.
ಪ್ರಿಯಾ ಸಿದ್ದಪ್ಪ ಕಲ್ಲೂರ (4), ಪವಿತ್ರ ಸಿದ್ದಪ್ಪ ಕಲ್ಲೂರ (6) ಅಸುನೀಗಿದ್ದು, ತಂದೆ ಸಿದ್ದಪ್ಪ
ಸಿದ್ದಪ್ಪ ತೀವೃ ಅಸ್ವಸ್ಥಗೊಂಡಿದ್ದು, ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದು
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಹಿಸಿ ಪ್ರಕರಣ ದಾಖಲಿಸಿಕೊಂಡು ತನೀಖೆ ಕೈಗೊಂಡಿದ್ದಾರೆ. ಪಾಪಿ ತಂದೆ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾನೆ.

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

ಕೌಟುಂಬಿಕ ಕಲಹ ಮಹಿಳೆ ವಿಷ ಸೇವಿಸಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ವಿಷ ಸೇವಿಸಿದ ಮಹಿಳೆಯನ್ನ ನೇಗಿನಹಾಳ್ ಪ್ರಾಥಮಿಕ ಆಸ್ಪತ್ರೆಗೆ ದಾಖಲು, ಚಿಕಿತ್ಸೆ ಫಲಿಸದೆ ಸಾವನ್ನೊಪ್ಪಿದ್ದಾಳೆ

ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದಲ್ಲಿ ತಡರಾತ್ರಿಯಲ್ಲಿ ಘಟನೆ ನಡೆದಿದೆಶಾಹೀನ್ ಭಾಷ್ಯಾ ಬಾವಾಖಾನ್ (೨೪) ಮೃತ ಮಹಿಳೆ ಎಂದು ಗುರುತಿಸಲಾಗಿದೆ ಪತಿ ಬಾಷ್ಯಾ, ಅತ್ತೆ ಮಮ್ತಾಜ್ , ಅಣ್ಣನ ಹೆಂಡ ಚಾಂದಬಿ ಮೇಲೆ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿದೆಮೃತ ಮಹಿಳೆ ತಂದೆಯಿಂದ ಬೈಲಹೊಂಗಲ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *