Breaking News

ಭೂಪಾಲ ಅತ್ತು ಅವರಿಂದ ವಿವಿಧ ಸಾಮಾಜಿಕ ಕಾರ್ಯಕ್ರಮ

ಬೆಳಗಾವಿ-ಬೆಳಗಾವಿಯ ಜೇಡಗಲ್ಲಿ ಶಹಾಪೂರಿನ ಸಾಲೇಶ್ವರ ದೇವಸ್ಥಾನದಲ್ಲಿ ಸಮಾಜ ಸೇವಕ ಭೂಪಾಲಣ್ಣಾ ಅತ್ತು ಇವರ ನೇತ್ರತ್ವದಲ್ಲಿ ವಿವಿಧ ಸಾಮಾಜಿಕ ಕಾರ್ಯಗಳು ನಡೆದಿವೆ

ಸಮಾಜ ಸೇವಕ ಭೂಪಾಲಣ್ಣಾ ಅತ್ತು ಅವರು ಇಂದು ಜೇಡಗಲ್ಲಿ ಶಹಾಪೂರಿನ ಸಾಲೇಶ್ವರ ದೇವಸ್ಥಾನದಲ್ಲಿ ಗೌರಿ ದೇವಿಗೆ ಬೆಳ್ಳಿಯ ಕಡ ಸಮರ್ಪಿಸಿದರುಈ ಸಂಧರ್ಭದಲ್ಲಿ ಹಿರಿಯರು ಉಪಸ್ಥತಿತರಿದ್ದರು

ಗಲ್ಲಿಯ ಮಹಿಳೆಯರಿಗಾಗಿ ದೇಶಿಯ ಸಂಸ್ಕೃತಿಯನ್ನು ಬೆಳೆಸುವದಕ್ಕಾಗಿ ರಂಗೋಲಿ ಸ್ಪರ್ದೆಯನ್ನು ಏರ್ಪಡಿಸಲಾಗಿತ್ತು ಸ್ಪರ್ದೆಯಲ್ಲಿ ವಿಜೇತರಾವತಿಗೆ ಕುಕ್ಕರ್ ಹಾಗು ಭಾಗವಹಿಸಿದ ಎಲ್ಲ ಮಹಿಳೆಯರಿಗೆ ನೆನಪಿನ ಕಾಣಿಕೆ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು

ಈ ಸಂಧರ್ಭದಲ್ಲಿ ಮಾತನಾಡಿದ ಹಿರಿಯರಾದ ಪಾರೇಶ ಬುಡವಿ ಮಾತನಾಡಿ ಭೂಪಾಲ ಅತ್ತು ಅವರು ಶಹಾಪೂರ ಪ್ರದೇಶದಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ ಅನಾಥಾಶ್ರಮ ಕ್ಕೆ ಉಪಯುಕ್ತ ವಸ್ತುಗಳನ್ನು ದೇಣಿಗೆ ನೀಡಿ ಈ ಪ್ರದೇಶದ ಸುರಕ್ಷತೆಗಾಗಿ ಸ್ವಂತ ಖರ್ಚಿನಲ್ಲಿ ಸಿಸಿ ಟಿ ವಿ ಕ್ಯಾಮರಾ ಅಳವಡಿಸುವ ಜೊತೆಗೆ ಗೌರಿ ದೇವಿಗೆ ಬೆಳ್ಳಿಯ ಕಡ ನೀಡಿ ಧಾರ್ಮಿಕ ಕಾರ್ಯವನ್ನು ಮಾಡಿದ್ದು ಭೂಪಾಲ ಅತ್ತು ಅವರು ಯುವಕರಿಗರ ಮಾದರಿಯಾಗಿದ್ದಾರೆ ಎಂದರು

ರಾಜು ಸುತಾರ,ಪವನಪ್ಪ ಪಾಟೀಲ ಈರಣ್ಣಾ ಹುಬ್ಬಳ್ಳಿ ಅರೀಪ ಬೇಪಾರಿ ನಾಗರಾಜ ಬೋದನವರ ಈಟೇಕರ ಧೋಂಗಡಿ ಸೇರಿದಂತೆ ಜೇಡಗಲ್ಲಿ ಶಹಾಪೂರಿನ ಹಿರಿಯರು ಉಪಸ್ಥಿತರಿದ್ದರು

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *