5 ಲಕ್ಷ ₹ ಡಿಮ್ಯಾಂಡ್ ಮಾಡಿದ ಇಬ್ಬರು ಸೆಟಲ್ಮೆಂಟ್ ಗಿರಾಕಿಗಳು ಅರೆಸ್ಟ್

ಬೆಳಗಾವಿ-ಎಸಿಬಿ ಅಧಿಕಾರಿ ಎಂದು ಧಮಕೀ ಹಾಕಿ,ಐದು ಲಕ್ಷ ರೂ ಡಿಮ್ಯಾಂಡ್ ಮಾಡಿದ ಇಬ್ಬರು ಖಿಲಾಡಿಗಳನ್ನು ಬಂಧಿಸುವಲ್ಲಿ ಬೈಲಹೊಂಗಲ ಪೋಲೀಸರು ಯಶಸ್ವಿಯಾಗಿದ್ದಾರೆ.

ಬೈಲಹೊಂಗಲದ ಕೃಷಿ ಅಧಿಕಾರಿಯೊಬ್ಬರಿಗೆ ಫೋನ್ ಮಾಡಿ ನಾನು ಎಸಿಬಿ ಅಧಿಕಾರಿ ಮಾತಾಡೋದು,ನೀನು ಬೆಳಗಾವಿಯಲ್ಲಿ ಬಹಳ ಆಸ್ತಿ ಮಾಡಿದ್ದೀಯಾ,ನಾಳೆ ದೊಡ್ಡ ಪ್ರಾಬ್ಲಂ ಆಗುತ್ತೆ,ಐದು ಲಕ್ಷ ರೂ ಕೊಟ್ಟು ಸೆಟಲ್ಮೆಂಟ್ ಮಾಡಕೋ ಎಂದು ಧಮಕಿ ಹಾಕಿದ ಇಬ್ಬರು ಸೆಟಲ್ಮೆಂಟ್ ಗಿರಾಕಿಗಳನ್ನು ಬೈಲಗೊಂಗಲ ಪೋಲೀಸರು ಜೈಲಿಗೆ ಕಳಿಸಿ ಪರ್ಮನೆಂಟ್ ಸೆಟಲ್ಮೆಂಟ್ ಮಾಡಿಸಿದ್ದಾರೆ.

ಆರೋಪಿತರಾದ ಬೈಲಹೊಂಗಲ ತಾಲ್ಲೂಕಿನ ಸಾ ದೇಶನೂರ,ಹಾಲಿ ವಣ್ಣೂರ ಗ್ರಾಮದ ವಿಶಾಲ ಭಾಂವೆಪ್ಪಾ ಪಾಟೀಲ,ಬೆಂಗಳೂರಿನ ಶ್ರೀನಿವಾಸ ತಂದೆ ಅಶ್ವತ್ಥನಾರಾಯಣ ಎಂಬಾತರನ್ನು ಬೈಲಗೊಂಗಲ ಪೋಲೀಸರು ಬಂದಿಸಿದ್ದು ಸಿಪಿಐ ಸಾತೇನಹಳ್ಳಿ ಅವರು ತನಿಖೆ ಮುಂದುವರೆಸಿದ್ದಾರೆ.

Check Also

ಬೆಳಗಾವಿಯಲ್ಲಿ ಆಕಸ್ಮಿಕ ಕರೆಂಟ್ ಪವರ್ ಮ್ಯಾನ್ ಸಾವು.

ಬೆಳಗಾವಿ -ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸಾವನ್ಬೊಪ್ಪಿದ್ದಾನೆ.ರಾಹುಲ್ ಪಾಟೀಲ್(30) ಮೃತ ಪವರ್ ಮ್ಯಾನ್ ಎಂದು ಗುರುತಿಸಲಾಗಿದೆ.ಬೆಳಗಾವಿಯ ಯಳ್ಳೂರು ಗ್ರಾಮದ …

Leave a Reply

Your email address will not be published. Required fields are marked *