ದೇವ್ರಾ ಹೇಳುವ ಶಾಸ್ತ್ರಿ ಮನೆಗೆ ದೌಡಾಯಿಸಿದ ಡಿಸಿಎಂ ಪರಮೇಶ್ವರ್

ಬೆಳಗಾವಿ- ಡಿಸಿಎಂ ಪರಮೇಶ್ವರ್ ಸ್ಪೇಶಲ್ ಫ್ಲೈಟ್ ಮಾಡಿಕೊಂಡು ಏಕಾ ಏಕಿ ಖಾನಾಪೂರಕ್ಕೆ ದೌಡಾಡಾಯಿಸಿದ್ದು ಏಕೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ

ಖಾನಾಪೂರದಲ್ಲಿ ದೇವ್ರಾ ಹೇಳುವ ಅಂದ್ರೆ ಭವಿಷ್ಯ ಹೇಳುವ ಶಾಸ್ತ್ರಿ ಇದ್ದಾರೆ ಖಾನಾಪೂರದ ಶಾಸ್ತ್ರಿ ಭವಿಷ್ಯ ಹೇಳುವದರಲ್ಲಿ ಪ್ರಸಿದ್ದಿ ಪಡೆದಿದ್ದಾರೆ ಡಿಸಿಎಂ ಪರಮೇಶ್ವರ ಶಾಸ್ತ್ರೀ ಅವರ ಪರಮ ಭಕ್ತ ಇಂದು ಖಾನಾಪೂರದಲ್ಲಿ ಶಾಸ್ತ್ರೀ ಸಮಂಧಿಕರ ಮದುವೆ ಇದೆ ಈ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪರಮೇಶ್ವರ ಖಾನಾಪೂರಕ್ಕೆ ದೌಡಾಯಿಸಿದ್ದಾರೆ

ಖಾನಾಪೂರದ ಶಾಸ್ತ್ರಿ ಮುಸ್ಲೀಂ ಸಮಾಜದವರು ಆದ್ರೆ ಅವರನ್ನು ಜನ ಪ್ರೀತಿತಿಂದ ಶಾಸ್ತ್ರಿ ಎಂದು ಕರೆಯುತ್ತಾರೆ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಬೆಳಗಾವಿಗೆ ಬಾರದ ಡಿಸಿಎಂ ಇಂದು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚಾರ್ಟೆಡ್ ಪ್ಲೈಟ್ ನಲ್ಲಿ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಬಂದಿಳಿದಿದ್ದಾರೆ

ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಪರಮೇಶ್ವರ ರಮೇಶ್ ಜಾರಕಿಹೊಳಿ ಒಬ್ಬ ಒಳ್ಳೆಯ ಮಿತ್ರ ಯುಥ್ ಕಾಂಗ್ರೆಸ್ ನಿಂದ ಬಂದವರು ಅವರನ್ನು ಕಳೆದುಕೊಳ್ಳಲು ಇಷ್ಟವಿಲ್ಲ ಕಾಂಗ್ರೆಸ್ ಪಕ್ಷ ನೂರು ವರ್ಷದ ಇತಿಹಾಸವಿರುವ ಪಕ್ಷ ಪಕ್ಷದಲ್ಲಿ ಹಲವಾರು ಘಟನೆಗಳು ನಡೆದಿವೆ ಪಕ್ಷಕ್ಕೆ ಇಂತಹ ಘಟನೆಗಳನ್ನು ಸಹಿಸುವ ಶಕ್ತಿ ಇದೆ ಪಕ್ಷ ರಮೇಶ್ ಜಾರಕಿಹೊಳಿ ಅವರನ್ನು ಮನವೊಲಿಸುವ ಪ್ರಯತ್ನ ಮಾಡುತ್ತಿದೆ ಎಂದರು

ಆಡಿಯೋ ಬಿಡುಗಡೆ ಬಗ್ಗೆ ನನಗೆ ಗೊತ್ತಿಲ್ಲ.
ದರ್ಶನ ಮೇಲೆ ಕ್ರಮ ಕೈಗೊಳ್ಳಬೇಕು.
ಅವನು ಚುನಾವಣೆಯಲ್ಲಿ ಪ್ರಚಾರಕ್ಕೆ ನನ್ನ ಜತೆ ಇದ.ದರ್ಶನ ಹೇಳಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ‌.ಮುದ್ದು ಹನುಮೇಗೌಡ ಹಣ ಪಡೆದುಕೊಂಡಿಲ್ಲ. ಅವರು ನಿಷ್ಠಾವಂತ ಕಾಂಗ್ರೆಸ್ ಸಂಸದ

 

 

 

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *