ಬೆಳಗಾವಿ ಭಕ್ತರಿಂದ ನಡೆದಾಡುವ ದೇವರಿಗೆ ಭಕ್ತಿಪೂರ್ವಕ ನಮನ

ಬೆಳಗಾವಿ:
ತ್ರಿವಿಧ ದಾಸೋಹಿ ಡಾ. ಶಿವಕುಮಾರ ‌ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಕುಂದಾನಗರಿಯ ಭಕ್ತರು ಹಾಗೂ ಕನ್ನಡ‌ ಸಂಘಟನೆಗಳಿಂದ ಶ್ರದ್ಧಾಂಜಲಿ ಜರುಗಿತು.
ಬೆಳಗಾವಿಯ ಚೆನ್ನಮ್ಮ‌ವೃತ್ತದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ‌ ಭಕ್ತರು‌ ಬಳಿಕ ಒಂದು‌ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.
ಈ ವೇಳೆ‌ ಮಾತನಾಡಿದ ಕನ್ನಡ ಪರ ಹೋರಾಟಗಾರ ಅಶೋಕ‌‌ ಚಂದರಗಿ, ಶ್ರೀಗಳ ಅಗಲಿಕೆಯಿಂದ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾಗದ ನಷ್ಟವಾಗಿದೆ. ಲಕ್ಷ್ಯಾಂತರ ‌ಮಕ್ಕಳಿಗೆ ಅನ್ನ, ಶಿಕ್ಷಣ ಹಾಗೂ ಆಶ್ರಯ ‌ನೀಡಿದ ಶ್ರೀಗಳು ಅವರೆಲ್ಲರಿಗೂ ಬೆಳಕಾಗಿದ್ದರು ಎಂದು ಕಂಬಿನಿ ಮಿಡಿದರು.
ಕರವೇ ಯುವ ಘಟಕದ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ತ್ರಿವಿಧ ದಾಸೋಹದಲ್ಲಿ ಶ್ರೀಗಳ ಸೇವೆ ಅಜರಾಮರ. ಮಕ್ಕಳಿಗೆ ಉಚಿತ‌ ಶಿಕ್ಷಣ, ಅನ್ನ ಹಾಗೂ ಆಶ್ರಯ ನೀಡುವ ಮೂಲಕ ದೇಶದ ಇತರ ಮಠಾಧೀಶರಿಗೂ ಮಾದರಿಯಾಗಿ ಸೇವೆ ಸಲ್ಲಿಸಿದ್ದಾರೆ. ಶಿವಕುಮಾರ ‌ಶ್ರೀಗಳ ಸೇವೆ ಪರಿಗಣಿಸಿ ಕೇಂದ್ರ ಸರ್ಕಾರ ಸ್ವಾಮೀಜಿಗೆ
ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಕೊಡಬೇಕು ಎಂದು ಆಗ್ರಹಿಸಿದರು..

Check Also

ಬೆಳಗಾವಿಯಲ್ಲಿ ಆಕಸ್ಮಿಕ ಕರೆಂಟ್ ಪವರ್ ಮ್ಯಾನ್ ಸಾವು.

ಬೆಳಗಾವಿ -ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸಾವನ್ಬೊಪ್ಪಿದ್ದಾನೆ.ರಾಹುಲ್ ಪಾಟೀಲ್(30) ಮೃತ ಪವರ್ ಮ್ಯಾನ್ ಎಂದು ಗುರುತಿಸಲಾಗಿದೆ.ಬೆಳಗಾವಿಯ ಯಳ್ಳೂರು ಗ್ರಾಮದ …

Leave a Reply

Your email address will not be published. Required fields are marked *