Breaking News

ಬೆಳಗಾವಿಯ ಹತ್ತು ಜನ ದೆಹಲಿಯ ನಿಜಾಮುದ್ದೀನ್ ಗೆ ಹೋಗಿದ್ರು…ಅವರೆಲ್ಲ ಈಗ ಹೋಮ್ ಕೊರಂಟೈನ್ ದಲ್ಲಿ….

ದೆಹಲಿಯ ನಿಜಾಮುದ್ದೀನ್ ಮರಕಜ್ ಗೆ ಹೋಗಿ ಬಂದವರು ಬೆಳಗಾವಿಯಲ್ಲೂ ಇದ್ದಾರೆ….

ಬೆಳಗಾವಿ- ದೆಹಲಿಯ ತಬಲೀಗ್ ಜಮಾತಿನ ನಿಜಾಮುದ್ದೀನ್ ಮರಕಜ್ ಗೆ ಬೆಳಗಾವಿಯ ಹತ್ತು ಜನ ಹೋಗಿ ,ಬೆಳಗಾವಿಗೆ ಬಂದಿದ್ದು ಈ ಹತ್ತು ಜನರನ್ನು ಹೋಮ್ ಕೋರಂಟೈನ್ ನಲ್ಲಿ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ತಿಳಿಸಿದ್ದಾರೆ‌

ದೆಹಲಿಗೆ ಹೋಗಿ ಬೆಳಗಾವಿಗೆ ಬಂದಿರುವ ಹತ್ತು ಜನರನ್ನು ಹೋಮ್ ಕೊರಂಟೈನ್ ನಲ್ಲಿ ಇಟ್ಟು ಹದಿನಾಲ್ಕು ದಿನ ಕಳೆದಿದೆ.ಆದರೂ ಇವರಲ್ಲಿ ಕೊರೋನಾ ಸೊಂಕಿನ ಲಕ್ಷಣ ಕಂಡು ಬಂದರೆ ಅವರ ಗಂಟಲು ದ್ರವವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ ಎಂದು ಜಿಲ್ಲಾ ಆರೋಗ್ಯ ಸರ್ವಲೇನ್ಸ ಅಧಿಕಾರಿ ಡಾ ತುಕ್ಕಾರ್ ತಿಳಿಸಿದ್ದಾರೆ

ಬೆಳಗಾವಿಯ ಈ ಹತ್ತು ಜನ ದೆಹಲಿಯಿಂದ ಮರಳಿದ ಬಗ್ಗೆ ಎರಡು ವಾರದ ಹಿಂದೆಯೇ ಮಾಹಿತಿ ಬಂದಿತ್ತು ಆವಾಗಲೇ ಅವರನ್ನು ಹೋಮ್ ಕೊರಂಟೈನ್ ಮಾಡಲಾಗಿದೆ.ಈ ಕುರಿತು ಆತಂಕ ಪಡುವ ಅಗತ್ಯವಿಲ್ಲ ಎಂದು ಡಾ ತುಕ್ಕಾರ್ ಹೇಳಿದರು

Check Also

ಬೆಳಗಾವಿ ಜಿಲ್ಲೆಯ ರೇಲ್ವೆ ಸಮಸ್ಯೆಗಳ ಪರಿಹಾರಕ್ಕೆ ಹುಬ್ಬಳ್ಳಿಯಲ್ಲಿ ಮೀಟಿಂಗ್

ಬೆಳಗಾವಿ – ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಜಗದೀಶ ಶೆಟ್ಟರ, ಇವರು ಇಂದು …

Leave a Reply

Your email address will not be published. Required fields are marked *