ಬೆಳಗಾವಿಗೆ ಬಂದಿದ್ರು…ಸರ್ಕಾರದ ವಿರುದ್ಧ ಗುಡುಗಿದ್ರು…ಹೌದ್ದೋ ಹುಲಿಯಾ….!!!

ಬೆಳಗಾವಿ-
ಬೆಳಗಾವಿಯಲ್ಲಿ ಮಾನಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ ಬಾದಾಮಿಗೆ ತೆರಳುವ ಮುನ್ನ ಮಾದ್ಯಮ ಮತ್ರರ ಜೊತೆ ಸಿದ್ರಾಮಯ್ಯ ಹಲವಾರು ವಿಷಯಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ

ಉಪಚುನಾವಣೆ ಸಮೀಕ್ಷೆಗಳನ್ನು ನಾನು ನಂಬುದಿಲ್ಲ
ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ‌ ಸಮೀಕ್ಷೆಗಳು ಎನಾಗಿವೆ ಅಂದಾಜು ಮೇಲೆ ಸಮೀಕ್ಷೆ ಮಾಡಿರುತ್ತಾರೆ ಎಂದರು ಮಾಜಿ ಸಿಎಂ ಸಿದ್ರಾಮಯ್ಯ ಪರಿಹಾರದ ಬಗ್ಗೆ ಸರ್ಕಾರ ಇಂದಿನವರೆಗೂ ತಲೆಕೆಡಸಿಕೊಂಡಿಲ್ಲ.

ಹತ್ತು ಸಾವಿರ ಮತ್ತು ಒಂದು ಲಕ್ಷ ಕೊಟ್ಟು ಕೈತೊಳೆದುಕೊಂಡಿದ್ದಾರೆ ಅನೇಕ‌ ಜನರಿಗೆ ರೈತರಿಗೆ ಪರಿಹಾರ ಸಿಕ್ಕಿಲ್ಲಚುನಾವಣೆ ನಂತರ ಕಾಂಗ್ರೆಸ್ ಕಥೆ ಮುಗಿಯುತ್ತೆ ಎಂಬ ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಹೇಳಿಕೆಗೆ‌ ತಿರುಗೇಟು ನೀಡಿದ ಅವರು
ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ಭ್ರಮೆಯಲ್ಲಿದ್ದಾರೆ
ಕಾಂಗ್ರೆಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ
ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಅಂತಾರೆ ಅದು ಭ್ರಮೆ ಬಿಜೆಪಿ ಮತ್ತು ಜೆಡಿಎಸ್ ಗೆ ನನ್ನ ಕಂಡರೆ ಭಯ ಅದಕ್ಕೆ‌ ಪದೇ ಪದೇ ನನ್ನ ಹೆಸರು ಪ್ರಸ್ತಾಪ ಮಾಡುತ್ತಾರೆ.
ಸಿದ್ದರಾಮಯ್ಯ ಕಂಡರೆ ಭಯ ಇರಬೇಕು ಅಥವಾ‌ ಪ್ರೀತಿ ಇರಬೇಕು. ಬಿಜೆಪಿಯವರಿಗೆ ಸಿದ್ದರಾಮಯ್ಯ ಕಂಡರೆ ಭಯ ಅದಕ್ಕೆ ಮಾತಾಡುತ್ತಾರೆ ಎಂದರು

ಪರಿಹಾರ ಕೊಟ್ಟಿಲ್ಲ ಮತ್ತು ಸರ್ಕಾರಿ ನೌಕರರ ಸಂಬಳ ಆಗಿಲ್ಲ‌ ಎಂಬ ವಿಚಾರ ಸರ್ಕಾರದಲ್ಲಿ ಆರ್ಥಿಕ‌ ಹಣಕಾಸು ಸರಿಯಾಗಿ ನಿಭಾಯಿಸಲಿಕ್ಕೆ ಆಗದೆ ತೊಂದರೆ ಆಗಿದೆ.
ಕೇಂದ್ರ ಸರ್ಕಾರದಿಂದ‌ ಜಿಎಸ್‌ಟಿ ದು 5600ಕೋಟಿ ಬರಬೇಕು. ನಮ್ಮ ಪಾಲನ್ನ ಇನ್ನೂ ಕೇಂದ್ರ ಸರ್ಕಾರ ಕೊಟ್ಟಿಲ್ಲ ಅದ್ರಿಂದ ತೊಂದರೆಯಾಗಿದೆ.
*ಯಡಿಯೂರಪ್ಪ ಸರ್ಕಾರ ಉಳಿಸಲು ಭಜನೆ ಮಾಡಿಕೊಂಡು ಕುಳಿತಿದ್ದಾನೆ*. ಹಣಕಾಸು ಮತ್ತು ಪ್ರಧಾನಿ ಅವರ ಹತ್ತಿರ ಕುಳಿತು ಹಣ ತರಬೇಕು.
ಪರಿಹಾರದ ಎರಡನೇ ಕಂತು ಇನ್ನೂ ಕೊಟ್ಟಿಲ್ಲ ಕೊಡೊದು ಇಲ್ಲ ತಮ್ಮ‌ ಹುಳುಕು ಮತ್ತು ತಪ್ಪು ಮುಚ್ಚಿಕೊಳ್ಳಲು ಈ ರೀತಿ ಮಾತನಾಡುತ್ತಿದ್ದಾರೆ.
ಜನರಿಗೆ ತಪ್ಪು ಮಾಹಿತಿ ಕೊಡಲಿಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಜಿಎಸ್‌ಟಿ ಕಲೆಕ್ಟ್ ಆಗಿಲ್ಲಾ ಅಂತಾ ರಾಜ್ಯಕ್ಕೆ ಕೇಂದ್ರ ಹಣ ಕೊಡ್ತಾರೋ ಇಲ್ಲವೋ ಗೊತ್ತಿಲ್ಲ
ಇದೇ ರೀತಿ ಆದ್ರೇ ರಾಜ್ಯದ ಜನರದ್ದು ಅಧೋಗತಿ,ದೇವರೇ ಗತಿ ಎಂದು
ಬೆಳಗಾವಿಯಲ್ಲಿ ಮಾಜಿ‌ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮತ್ತು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *