ದೇವೇಗೌಡರಿಗೆ ಇಷ್ಟು ದಿನ ಖರ್ಗೆಅವರ. ನೆನಪು ಬರಲಿಲ್ಲವೇಕೆ ? ನಡಹಳ್ಳಿ

ಬೆಳಗಾವಿ-ತೆರೆಮರೆಯಲ್ಲಿ ಜೆಡಿಎಸ್ – ಕಾಂಗ್ರೆಸ್ ಮತ್ತೆ ಸರ್ಕಾರ ರಚನೆ ಹಾಗೂ ಮಲ್ಲಿಕಾರ್ಜುನ ಖರ್ಗೆ ಯನ್ನು ಸಿ ಎಂ ಮಾಡುವ ವಿಚಾರವಾಗಿ
ಜೆಡಿಎಸ್ ವರಿಷ್ಟ ದೇವೆಗೌಡರ ಮಾತು ಕೇಳಿ ಹುಚ್ಚರು ನಗುತ್ತಾರೆ. ಇದು ತಿರುಕಣ ಕನಸು‌ ಎಂದು ಬಿಜೆಪಿ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ವೆಂಗ್ಯವಾಡಿದ್ದಾರೆ.

ಕೊನೆಯ ಸುತ್ತಿನ ಪ್ರಚಾರಕ್ಕೆ ತೆರಳುವ ಮುನ್ನ ಮಾದ್ಯಮ ಮಿತ್ರರರೊಂದಿಗೆ ಮಾತನಾಡಿದ ನಡಹಳ್ಳಿ
ಇಷ್ಟು ದಿನ ದೇವೆಗೌಡರಿಗೆ ಖರ್ಗೆ ನೆನಪು ಬರಲಿಲ್ಲವಾ?.
ಈ ಹಿಂದೆ ಸಮಿಶ್ರ ಸರ್ಕಾರವಿದ್ದಾಗ ಖರ್ಗೆಯವರನ್ನೆ ಸಿ ಎಂ ಮಾಡಬಹುದಾಗಿತ್ತು. ದೇವೇಗೌಡರಿಗೆ ಈಗ ಖರ್ಗೆ ಅವರು ನೆನಪಾದ್ರಾ ಎಂದು ನಡಹಳ್ಳಿ ಪ್ರಶ್ನಿಸಿದರು.

ರಾಜ್ಯದಲ್ಲಿ ಸ್ಥಿರ ಸರ್ಕಾರ ಬಯಸಿದ್ದಾರೆ ಜನ. ವೇಣುಗೋಪಾಲ ಹಾಗೂ ಜೆಡಿಎಸ್ ವರಿಷ್ಟರ ಮಾತಿಗೆ ರಾಜ್ಯದ ಜನ ಕಿವಿಗೊಡುವದಿಲ್ಲಾ.
ಶಾಸಕ ಎ ಎಸ್ ಪಾಟೀಲ್ ‌ನಡಹಳ್ಳಿ ಹೇಳಿದರು.
ಪೂಜಾರಿ ಡಿಪಾಜಿಟ್ ಜಪ್ತಿ ಆಗಲಿದೆ
ಅಶೋಕ್ ಪೂಜಾರಿ ಗೆದ್ರೆ ಮಂತ್ರಿಯಾಗ್ತಾರೆ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರ
ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಕೇಳಿದ್ರೆ ಹುಚ್ಚನಿಗೂ ನಗು ಬರುತ್ತೆ ಮತ್ತೆ ಮುಖ್ಯಮಂತ್ರಿ ಆಗಬಹುದೆಂದು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ನಡಹಳ್ಳಿ ಹೇಳಿದರು

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *