ಹಿರೇಬಾಗೇವಾಡಿಯಲ್ಲಿ ಮೋಸ ಮಾಡಿದ 7 ಜನರ ಮೇಲೆ ಕೇಸ್….

ಮಾಹಿತಿ ಮುಚ್ಚಿಟ್ಟು ಮೋಸ ಮಾಡಿದ ಏಳು ಜನರ ಮೇಲೆ ಕೇಸ್…

ಬೆಳಗಾವಿ- ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ನಡೆದ ಧರ್ಮಸಭೆಯಲ್ಲಿ ಪಾಲ್ಗೊಂಡು ವೈದ್ಯಕೀಯ ತಪಾಸಣೆಯನ್ನು ಮಾಡಿಕೊಳ್ಳದೇ,ಕೊರೋನಾ ಟಾಸ್ಕ ಫೋರ್ಸಗೆ ಮಾಹಿತಿ ನೀಡದ ಹಿರೇಬಾಗೇವಾಡಿಯ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಹಿರೇಬಾಗೇವಾಡಿ ಗ್ರಾಮದ ಯುವಕ, ನಿಜಾಮುದ್ದೀನ್ ಧರ್ಮ ಸಭೆಗೆ ಹೋಗಿ ಬಂದಿದ್ದ ಈ ಯುವಕನಿಗೆ ಸಾಥ್ ನೀಡಿದ ತಬ್ಲೀಗ್ ಜಮಾತಿನ ಆರು ಜನ ಮತ್ತು ಆ ಯುವಕನ ವಿರುದ್ಧ ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿರೇಬಾಗೇವಾಡಿ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ಕು ಜನರಿಗೆ ಸೊಂಕು ತಗುಲಿ ಗ್ರಾಮದಲ್ಲಿ ಆತಂಕದ ವಾತಾವರಣವಿದ್ದು ಮಾಹಿತಿ ಮುಚ್ಚಿಟ್ಟು ಮೋಸ ಮಾಡಿದವರ ವಿರುದ್ಧ ಕೇಸ್ ಜಡಿಯಲಾಗಿದೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *